Assembly Polls: ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡರಿಂದ ಮಾಸ್ಟರ್ ಸ್ಟ್ರೋಕ್, ಒಕ್ಕಲಿಗ ಸಮುದಾಯಕ್ಕೆ ಜಮೀನು ಗಿಫ್ಟ್

|

Updated on: Feb 15, 2023 | 11:08 AM

ಶರತ್ ಹೊಸಕೋಟೆಯಲ್ಲಿದ್ದ ತಮ್ಮ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರೇ ಹೇಳುವ ಹಾಗೆ ಜಮೀನು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ.

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರ ಹೊಸ ರಾಜಕೀಯ ವರಸೆಗಳಿಗೆ ಸಾಕ್ಷಿಯಾಗುತ್ತಿದೆ. ಸಚಿವ ಎಮ್ ಟಿ ಬಿ ನಾಗರಾಜ್ (MTB Nagaraj) ಮತ್ತು ಕಾಂಗ್ರೆಸ್ ಶಾಸಕ ಶರತ್ ಕುಮಾರ್ ಬಚ್ಚೇಗೌಡ (Sharath Kumar Bache Gowda) ನಡುವೆ ಭಯಂಕರ ಎನಿಸುವಷ್ಟು ಪ್ರತಿಸ್ಪರ್ಧೆ ಇದೆ. ಸಚಿವರು ಈಗಾಗಲೇ ಸೀರೆ ಮತ್ತು ಇತರ ವಸ್ತುಗಳನ್ನು ಮತದಾರರರಿಗೆ ಗಿಫ್ಟ್ ಮಾಡುವ ಕೆಲಸ ಶುರುಮಾಡಿದ್ದಾರೆ. ಹೊಸಕೇಟೆ ಕ್ಷೇತ್ರದಲ್ಲಿ ಒಕ್ಕಲಿಗರ (Vokkaliga) ಪ್ರಾಬಲ್ಯ ಜೋರಾಗಿದೆ ಮತ್ತು ಅವರ ವೋಟುಗಳೇ ನಿರ್ಣಾಯಕ. ಹಾಗಾಗೇ, ಶರತ್ ಹೊಸಕೋಟೆಯಲ್ಲಿದ್ದ ತಮ್ಮ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರೇ ಹೇಳುವ ಹಾಗೆ ಜಮೀನು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಅವರು ಹೇಳುವುದನ್ನು ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

https://www.youtube.com/@tv9kannada/videos

Published On - 11:07 am, Wed, 15 February 23

Follow us on