ಸೌಜನ್ಯ ಪ್ರಕರಣದಲ್ಲಿ ಅಮಾಯಕನನ್ನು ಜೈಲಲ್ಲಿ ಕೊಳೆಸಲಾಗಿದೆ, ಮರುತನಿಖೆಯಾಗಬೇಕು: ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ಅರುಣ್​ ಕುಮಾರ್​ ಬೆಳ್ಳಿ

Updated on: Aug 01, 2023 | 7:15 PM

ಒಬ್ಬ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ ಸೌಜನ್ಯ ಮತ್ತು ಇತರ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಮೈಸೂರು: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik), ಸೌಜನ್ಯ ಹತ್ಯೆ ಪ್ರಕರಣದಲ್ಲಿ ಮರುತನಿಖೆಯಾಗಬೇಕಿದೆ (reinvestigation) ಎಂದು ಹೇಳಿದರು. ಆ ಪ್ರಕರಣ ಬಹಳ ಗಂಭೀರ ಸ್ವರೂಪದ್ದು, ಸಮಗ್ರ ತನಿಖೆಯಾಗಬೇಕಿದೆ, ಯಾವುದೋ ಅಮಾಯಕನನ್ನು (innocent) ಜೈಲಲ್ಲಿ 10 ವರ್ಷಗಳಿಂದ ಸೆರೆಮನೆಯಲ್ಲಿ ಕೊಳೆಸಲಾಗುತ್ತಿದೆ, ಸೌಜನ್ಯ ಮೇಲೆ ಅತ್ಯಾಚಾರವೆಸಗಿದವನು ಯಾರು, ಹತ್ಯೆ ಮಾಡಿದವನು ಯಾರು ಅನ್ನೋದು ಬಯಲಿಗೆ ಬರಬೇಕಿದೆ. ಇದೊಂದೇ ಅಲ್ಲ, ಇಂಥ 20-25 ಪ್ರಕರಣಗಳು ಆ ಭಾಗದಲ್ಲಿ ನಡೆದಿವೆ ಎಂದು ಮುತಾಲಿಕ್ ಹೇಳಿದರು. ಒಬ್ಬ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ ಸೌಜನ್ಯ ಮತ್ತು ಇತರ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us