ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಿಲ್ಲಿಸುವಂತೆ ಮಂತ್ರಿಯೊಬ್ಬ 10 ಕೋಟಿ ರೂ. ಆಮಿಶವೊಡ್ಡಿದ್ದ: ಬಸನಗೌಡ ಪಾಟೀಲ್ ಯತ್ನಾಳ್

|

Updated on: Feb 14, 2024 | 6:21 PM

ಇದೇ ಹೋರಾಟ ಹೊಸಪೇಟೆಯಲ್ಲಿ ನಡೆಯುತ್ತಿದ್ದಾಗ ತಮ್ಮದೇ ಸಮುದಾಯದ ಮಂತ್ರಿಯೊಬ್ಬ ಅದನ್ನು ನಿಲ್ಲಿಸಲು ಸ್ವಾಮೀಜಿಗಳಿಗೆ 10 ಕೋಟಿ ರೂ.ಗಳ ಆಮಿಶವೊಡ್ಡಿದ್ದ ಎಂದು ಯತ್ನಾಳ್ ಹೇಳಿದರು. ಆದರೆ ಗುರುಗಳು ಎಷ್ಟೇ ಕೋಟಿ ಕೊಟ್ಟರೂ ಸಮುದಾಯಕ್ಕೆ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನಿಲ್ಲಿಸಲ್ಲ ಅಂದರು ಎಂದು ಯತ್ನಾಳ್ ಹೇಳಿದರು.

ಶಿವಮೊಗ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ (Panchamasali 2A reservation protest) ಪುನಃ ಶುರುವಾಗಿದೆ. ಸಮುದಾಯದವರು ಶಿವಮೊಗ್ಗದಲ್ಲಿ ಕೂಡಲಸಂಗಮ ಮಠಾಧೀಶ  ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ (Basava Jaya Mruthyunjaya Swamy) ನೇತೃತ್ವದಲ್ಲಿ ನಗರದ ಶಿವಪ್ದ ನಾಯಕ್ ವೃತ್ತದಿಂದ ಗೋಪಿವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಚೌಕಿಮಠದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಯವರು ಲಿಂಗ ಪೂಜೆ ನೆರವೇರಿಸಿದ ಬಳಿಕ ಪ್ರತಿಭಟನೆ ಯಲ್ಲಿ ಭಾಗಿಯಾಗಿರುವ ಶಾಸಕ ಬಸನನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಾತಾಡಿ, ಪಂಚಮಸಾಲಿ ಸಮಾಜದ ಹೋರಾಟವನ್ನು ಮೊಟಕುಗೊಳಿಸಲು ಸರ್ಕಾರದ ಮಂತ್ರಿಗಳು ಏನೆಲ್ಲ ಆಮಿಶವೊಡ್ಡುತ್ತಾರೆ, ಹತ್ತಿಪ್ಪತ್ತು ಕೋಟಿ ರೂ. ಮಠಕ್ಕೆ ನೀಡ್ತೀವಿ ಅನ್ನುತ್ತಾರೆ, ಐಷಾರಾಮಿ ಕಾರುಗಳನ್ನು ಕೊಡಿಸುವುದಾಗಿ ಹೇಳುತ್ತಾರೆ, ಅಂಥವರ ಬಗ್ಗೆ ಎಚ್ಚರದಿಂದಿರಬೇಕು ಅಂತ ಹೇಳಿದರು.

ಪ್ರಾಯಶಃ ಇದೇ ಅಂಶವನ್ನು ವೇದಿಕೆ ಮೇಲಿದ್ದ ಮಲ್ಲಿಕರ್ಜುನ ಹೆಸರಿನ ವ್ಯಕ್ತಿ ಹೇಳಿದ್ದರು ಅಂತ ಕಾಣುತ್ತೆ. ಅವರ ಹೇಳಿದ್ದನ್ನು  ಉಲ್ಲೇಖಿಸಿದ ಯತ್ನಾಳ್, ಹಿಂದೆ ಇದೇ ಹೋರಾಟ ಹೊಸಪೇಟೆಯಲ್ಲಿ ನಡೆಯುತ್ತಿದ್ದಾಗ ತಮ್ಮದೇ ಸಮುದಾಯದ ಮಂತ್ರಿಯೊಬ್ಬ ಅದನ್ನು ನಿಲ್ಲಿಸಲು ಸ್ವಾಮೀಜಿಗಳಿಗೆ 10 ಕೋಟಿ ರೂ.ಗಳ ಆಮಿಶವೊಡ್ಡಿದ್ದ ಎಂದು ಯತ್ನಾಳ್ ಹೇಳಿದರು. ಆದರೆ ಗುರುಗಳು ಎಷ್ಟೇ ಕೋಟಿ ಕೊಟ್ಟರೂ ಸಮುದಾಯಕ್ಕೆ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ನಿಲ್ಲಿಸಲ್ಲ ಅಂದರು ಎಂದು ಯತ್ನಾಳ್ ಹೇಳಿದಾಗ ನೆರೆದಿದ್ದ ಜನ ಜೋರಾಗಿ ಚಪ್ಪಾಳೆ ತಟ್ಟಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on