ಸಮೀಕ್ಷೆಗೆ ಮೊದಲ ದಿನವೇ ಅಡಚಣೆ: ಕಚೇರಿಯ ಕೀ ಸಿಗದೇ ಬೀಗ ಒಡೆದು ಬಾಗಿಲು ತೆರೆದ ಸಿಬ್ಬಂದಿ

Updated on: Oct 04, 2025 | 11:41 AM

ಬೆಂಗಳೂರಿನಲ್ಲಿ ಇಂದಿನಿಂದ ಆರಂಭಗೊಂಡ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬಿಬಿಎಂಪಿ ಸಿಬ್ಬಂದಿಗೆ ಮೊದಲ ದಿನವೇ ಅಡಚಣೆಯುಂಟಾಗಿದೆ. ಶ್ರೀರಾಮಪುರದ ದೇವಯ್ಯ ಪಾರ್ಕ್ ಬಳಿಯ ಬಿಬಿಎಂಪಿ ಕಚೇರಿಯ ಕೀ ಸಿಗದೆ ಬೀಗ ಒಡೆದು ಬಾಗಿಲು ತೆರೆಯಲಾಗಿದೆ. ಈ ಘಟನೆ ಸಮೀಕ್ಷೆಯ ಮೊದಲ ದಿನದ ಆರಂಭಿಕ ಅವ್ಯವಸ್ಥೆಯನ್ನು ಎತ್ತಿ ತೋರಿಸಿದೆ.

ಬೆಂಗಳೂರು, ಅ.4: ಬೆಂಗಳೂರಿನಲ್ಲಿ ಇಂದಿನಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (Cast Census Karnataka) ನಡೆಸಲು ಮುಂದಾಗಿದ್ದು, ಸಮೀಕ್ಷೆಯ ಮೊದಲ ದಿನವೇ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಹೋದ ಸಿಬ್ಬಂದಿಗಳು ಕಚೇರಿಯ ಮುಂದೆ ಕಾದು ಕುಳಿತ್ತಿದ್ದಾರೆ. ಶ್ರೀರಾಮಪುರದ ದೇವಯ್ಯ ಪಾರ್ಕ್ ಬಳಿಯ ಬಿಬಿಎಂಪಿ ಕಚೇರಿಯ ಬಾಗಿಲಿನ ಕೀ ಸಿಗದೇ ಸಿಬ್ಬಂದಿಗಳು ಪರದಾಡಿದ್ದಾರೆ. ಬೆಳಿಗ್ಗೆ 9:30ಕ್ಕೆ ಸಮೀಕ್ಷೆ ಆರಂಭಗೊಳ್ಳಬೇಕಿತ್ತು. ಆದರೆ, ಕಚೇರಿ ತೆರೆಯಲು ಕೀ ಇಲ್ಲದ ಕಾರಣ ಸಮೀಕ್ಷಕರು ಕಾಯಬೇಕಾದ ಸ್ಥಿತಿ ಎದುರಾಗಿತ್ತು. ಕೊನೆಗೆ ಕೀ ಸಿಗದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಬೀಗ ಒಡೆದು ಬಾಗಿಲು ತೆರೆದಿದ್ದಾರೆ. ಇದು ಸಮೀಕ್ಷೆಯ ಮೊದಲ ದಿನದ ಸಿದ್ಧತೆಯಲ್ಲಿನ ಲೋಪವನ್ನು ಎತ್ತಿ ತೋರಿಸಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ನಡೆಯುವ ಈ ಮಹತ್ವದ ಸಮೀಕ್ಷೆಗೆ ಮೊದಲ ದಿನವೇ ಇಂತಹ ಅಡೆತಡೆ ಎದುರಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More