ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?

Updated on: Jan 28, 2025 | 6:04 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಿದೆ. ಈ ಸೀಸನ್​ನ ಆರಂಭದಲ್ಲಿಯೇ ಲಾಯರ್ ಜಗದೀಶ್ ಹಾಗೂ ರಂಜಿತ್ ಅನ್ನು ಕೈ ಕೈ ಮಿಲಾಯಿಸಿದರು ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಭವ್ಯಾ, ಹನುಮಂತುಗೆ ಹೊಡೆದರೂ ಅವರನ್ನು ಹೊರಗೆ ಹಾಕಲಿಲ್ಲ ಏಕೆಂದು ಉಗ್ರಂ ಮಂಜು ವಿವರಿಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಹನುಮಂತು ವಿನ್ನರ್ ಆಗಿದ್ದಾನೆ. ಇದೇ ಸೀಸನ್​ನಲ್ಲಿ ಪರಸ್ಪರ ಕೈ-ಕೈ ಮಿಲಾಯಿಸಿದರು ಎಂಬ ಕಾರಣಕ್ಕೆ ಲಾಯರ್ ಜಗದೀಶ್ ಮತ್ತು ರಂಜಿತ್ ಅನ್ನು ಮೊದಲಿನಲ್ಲೇ ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಇದೇ ಸೀಸನ್​ನ ಟಾಸ್ಕ್ ಒಂದರ ವಿಚಾರದಲ್ಲಿ ಭವ್ಯಾ ಗೌಡ, ಸ್ಪರ್ಧಿ ಹನುಮಂತು ಮೇಲೆ ಹಲ್ಲೆ ಮಾಡಿದ್ದರು. ಹನುಮಂತುಗೆ ಹೊಡೆದಿದ್ದರು ಆದರೆ ಅವರನ್ನು ಹೊರಗೆ ಹಾಕಿರಲಿಲ್ಲ. ಅದು ಏಕೆ? ಜಗದೀಶ್​ಗೆ ಒಂದು ನ್ಯಾಯ, ಭವ್ಯಾಗೆ ಒಂದು ನ್ಯಾಯ ಏಕಾಯ್ತು? ಎಂಬ ಬಗ್ಗೆ ಐದನೇ ರನ್ನರ್ ಅಪ್ ಉಗ್ರಂ ಮಂಜು ಮಾತನಾಡಿದ್ದಾರೆ. ಭವ್ಯಾ ಅನ್ನು ಮನೆಯಿಂದ ಹೊರಗೆ ಹಾಕದಿರಲು ಕಾರಣ ತಿಳಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More