Assembly Polls: ರೌಡಿಶೀಟರ್ ಬೆಂಗಳೂರಿನವನಾಗಲಿ ಅಥವಾ ಬೀದರ್, ಚುನಾವಣೆ ಮುಗಿಯುವವರೆಗೆ ಬಾಲ ಮುದುರಿಕೊಂಡು ಬಿದ್ದಿರಬೇಕು!

ಅರುಣ್​ ಕುಮಾರ್​ ಬೆಳ್ಳಿ

Updated on: Mar 17, 2023 | 10:26 AM

ಬೀದರ್​​ನಲ್ಲಿ ಕೆಲವು ಮನೆಯಿಂದ ನಾಪತ್ತೆಯಾಗಿದ್ದರೆ ಮನೆಯಲ್ಲಿ ಸಿಕ್ಕವರಿಗೆ ಬಾಲ ಮುದುರಿಕೊಂಡು ಬಿದ್ದಿರುವಂತೆ ಪೊಲೀಸರು ಖಡಕ್ಕಾಗಿ ಎಚ್ಚರಿಸಿದ್ದಾರೆ. ಒಬ್ಬ ರೌಡಿಯ ಮನೆಯಲ್ಲಿ ಮತ್ತು ಬರಿಸುವ ಮಾತ್ರೆಗಳ ಸ್ಟ್ರಿಪ್ ಗಳು ಸಿಕ್ಕಿವೆ.

ಬೀದರ್: ವಿಧಾನಸನಭಾ ಚುನಾವಣೆ (Assembly polls) ಮುಗಿಯುವವರೆಗೆ ರೌಡಿಶೀಟರ್ ಗಳಿಗೆ (rowdy sheeters), ಪುಡಿರೌಡಿಗಳಿಗೆ ಉಳಿಗಾಲವಿದ್ದಂತಿಲ್ಲ. ರೌಡಿಗಳು ಬೆಂಗಳೂರಿನವರೇ ಆಗಿರಬಹದು ಇಲ್ಲವೇ ಬೀದರ್(Bidar)-ಅವರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಖಬರ್ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ರಾತ್ರಿ ಬೀದರ್ ನಗರದಲ್ಲಿ ಪೊಲೀಸರು ಮನೆಗಳ ಮೇಲೆ ನಡೆಸಿದ ದಾಳಿಗಳಿಂದ ರೌಡಿಗಳು ತಲ್ಲಣಿಸಿದ್ದಾರೆ. ಕೆಲವರು ಮನೆಯಿಂದ ನಾಪತ್ತೆಯಾಗಿದ್ದರೆ ಮನೆಯಲ್ಲಿ ಸಿಕ್ಕವರಿಗೆ ಬಾಲ ಮುದುರಿಕೊಂಡು ಬಿದ್ದಿರುವಂತೆ ಪೊಲೀಸರು ಖಡಕ್ಕಾಗಿ ಎಚ್ಚರಿಸಿದ್ದಾರೆ. ಒಬ್ಬ ರೌಡಿಯ ಮನೆಯಲ್ಲಿ ಮತ್ತು ಬರಿಸುವ ಮಾತ್ರೆಗಳ ಸ್ಟ್ರಿಪ್ ಗಳು ಸಿಕ್ಕಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Mar 17, 2023 10:26 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.