Bagalkot: ಮಹಾಲಿಂಗಪುರದಲ್ಲಿ ಭಾರೀ ಮಳೆಗಾಳಿಯಿಂದ ಮನೆಗಳ ಮೇಲೆ ಉರುಳಿಬಿದ್ದ ಮರ, ಯಾವುದೇ ಪ್ರಾಣಾಪಾಯವಿಲ್ಲ
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವುಂಟಾಗಿಲ್ಲ. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಬಾಗಲಕೋಟೆ: ಪ್ರಕೃತಿ ಅದ್ಯಾಕೆ ಕನ್ನಡಿಗರ ಮೇಲೆ ಈ ಪಾಟಿ ಮುನಿಸಿಕೊಂಡಿದೆ ಅಂತ ಅರ್ಥವಾಗುತ್ತಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ (untimely rains) ಬೆಳೆಗಳನ್ನು ಹಾಳುಮಾಡುತ್ತಿದೆ, ಮನೆಗಳು ಕುಸಿದು ಬೀಳುವಂತೆ ಮತ್ತು ಮರಗಿಡಗಳನ್ನು ಬುಡಸಮೇತ ಉರುಳಿ ಬೀಳುವಂತೆ ಮಾಡುತ್ತಿದೆ. ನಿನ್ನೆ ರಾತ್ರಿ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರದಲ್ಲಿ (Mahalingapur) ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ (heavy rains) ಬಡಾವಣೆಯೊಂದರಲ್ಲಿದ್ದ ಭಾರೀ ಗಾತ್ರದ ಮರ 4-5 ಮನೆಗಳ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ಭಾರಕ್ಕೆ ಮನೆಗಳು ಬಿದ್ದುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವುಂಟಾಗಿಲ್ಲ. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us