ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ವಾರವಾಗುತ್ತಾ ಬಂದಿದ್ದು ಇಂದು ಈ ಸೀಸನ್ನ ಮೊದಲ ವಾರದ ಪಂಚಾಯ್ತಿ ನಡೆಯುತ್ತಿದ್ದು ಬಿಗ್ಬಾಸ್ ಎಕ್ಸ್ಪೋಸ್ ಮಾಡುವೆ ಎಂದ ಲಾಯರ್ನ ವಿಚಾರಣೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ವಾರವಾಗುತ್ತಾ ಬಂದಿದೆ. ಇದೀಗ ಈ 11ನೇ ಸೀಸನ್ನ ಮೊದಲ ವಾರದ ಪಂಚಾಯಿತಿ ಇಂದು ನಡೆಯಲಿದೆ. ಇದೀಗ ಮೊದಲ ಪಂಚಾಯಿತಿಯ ಪ್ರೋಮೋ ಬಿಡುಗಡೆ ಆಗಿದ್ದು, ಸುದೀಪ್ ಪ್ರತಿ ಬಾರಿಯಂತೆ ಸ್ಟೈಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೋಮೋನಲ್ಲಿ ಜಗದೀಶ್ ಅವರು ಮಾತನಾಡಿದ ವಿಚಾರವನ್ನೇ ಪ್ರಮುಖವಾಗಿ ಪ್ರಸ್ತಾಪ ಮಾಡಿರುವ ಕಿಚ್ಚ ಸುದೀಪ್, ‘ಬಿಗ್ಬಾಸ್ ಬೇಕು ಎಂದು ಬಂದವರೇ ಈಗ ಬಿಗ್ಬಾಸ್ ಎಕ್ಸ್ಪೋಸ್ ಮಾಡುತ್ತೀನಿ ಎಂದು ನಿಂತಿದ್ದಾರೆ’ ಎಂದಿದ್ದಾರೆ. ಆ ಮೂಲಕ ಇಂದಿನ ಎಪಿಸೋಡ್ನಲ್ಲಿ ಲಾಯರ್ ಜಗದೀಶ್ ಅನ್ನು ವಿಚಾರಣೆ ಮಾಡುವ ಸುಳಿವನ್ನು ಸುದೀಪ್ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 05, 2024 03:14 PM
Loading...
Unable to load recommendations.
Follow Us