ಇದು ಪ್ರಾರಂಭ ಅಷ್ಟೆ, ಪಿಕ್ಚರ್ ಇನ್ನೂ ಬಾಕಿ ಇದೆ ಎಂದ ಜಗದೀಶ್

|

Updated on: Oct 02, 2024 | 10:00 AM

ಬಿಗ್​ಬಾಸ್ ಕನ್ನಡ ಸೀಸನ್ 11 ಆರಂಭವಾಗದ್ದು, ಆರಂಭವಾದಾಗಿನಿಂದಲೂ ಜಗಳಗಳೇ ನಡೆಯುತ್ತಿವೆ. ಸ್ಪರ್ಧಿಗಳು ಬಿಡುವು ಕೊಡದಂತೆ ಒಬ್ಬರ ಮೇಲೊಬ್ಬರು ಜಗಳ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಲಾಯರ್ ಜಗದೀಶ್, ಧನರಾಜ್ ಆಚಾರ್ ಮೇಲೆ ಹರಿಹಾಯ್ದಿದ್ದಾರೆ.

ಬಿಗ್​ಬಾಸ್​ ಸೀಸನ್ 11 ಆರಂಭವಾಗಿದೆ. ಈ ಬಾರಿ ಬಿಗ್​ಬಾಸ್ ಮನೆಗೆ ಬಂದಿರುವ ಸದಸ್ಯರು, ನಾವು ಬಂದಿರುವುದೇ ಜಗಳವಾಡಲು ಎಂದು ನಿರ್ಧರಿಸಿಯೇ ಮನೆ ಒಳಗೆ ಕಾಲಿಟ್ಟಂತಿದೆ. ಒಬ್ಬರ ಮೇಲೊಬ್ಬರು ಹಾರಿ ಬೀಳುತ್ತಿದ್ದಾರೆ, ಜಗಳ ಆಡುವುದರಲ್ಲಿ, ದ್ವೇಷ ಸಾಧಿಸುವುದರಲ್ಲಿ ಯಾರು ಮೇಲೆಂದು ಸ್ಪರ್ಧೆಗೆ ಬಿದ್ದವರಂತೆ ಒಬ್ಬರ ಮೇಲೊಬ್ಬರು ಜಗಳ ಮಾಡುತ್ತಿದ್ದಾರೆ. ಬಿಗ್​ಬಾಸ್ ಆರಂಭವಾದಾಗಿನಿಂದ ಲಾಯರ್ ಜಗದೀಶ್ ಸಖತ್ ಸದ್ದು ಮಾಡುತ್ತಿದ್ದಾರೆ. ಹೊರಗಿದ್ದಾಗಲೂ ಸಾಮಾಜಿಕ ಜಾಲತಾಣದ ವಿಡಿಯೋಗಳಲ್ಲಿ ಭರ್ಜರಿ ಡೈಲಾಗ್​ಗಳನ್ನು ಹೊಡೆಯುತ್ತಾ ಸದ್ದು ಮಾಡುತ್ತಿದ್ದ ಜಗದೀಶ್ ಈಗ ಬಿಗ್​ಬಾಸ್​ನಲ್ಲೂ ಅದೇ ಮುಂದುವರೆಸಿದ್ದಾರೆ. ಇದೀಗ ಜಗದೀಶ್, ಧನರಾಜ್ ವಿರುದ್ಧ ಹರಿಹಾಯ್ದಿದ್ದಾರೆ. ಪಿಕ್ಚರ್ ಅಭಿ ಬಾಕಿ ಹೇ ಎಂದು ಬೆದರಿಕೆ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on