Udupi News: ಶಿರ್ವದಲ್ಲಿ ಕಾಡುಕೋಣಗಳ ಹಿಂಡು ಪತ್ತೆ, ನಾಶವಾಗುತ್ತಿವೆ ಬೆಳೆಗಳು

Rakesh Nayak Manchi

Updated on: Jul 30, 2023 | 8:49 PM

ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ಕಾಡುಕೋಣಗಳು ಪತ್ತೆಯಾಗಿವೆ. ಕಾಡುಕೋಣಗಳ ಹಿಂಡು ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.

ಉಡುಪಿ, ಜುಲೈ 30: ಜಿಲ್ಲೆಯ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ರವಿ ಕುಲಾಲ್ ಎಂಬುವವರಿಗೆ ಸೇರಿದ ಮನೆಯ ವರಾಂಡದಲ್ಲಿ ಕಾಡುಕೋಣಗಳು (Bison) ಪತ್ತೆಯಾಗಿವೆ. ಮನೆಯ ಸುತ್ತಲೂ ತಿರುಗಿ ಬಾವಿ ಬಳಿ ತೆರಳಿ ನಂತರ ಕಾಡಿಗೆ ನುಗ್ಗಿವೆ. ಪಿಲಾರುಕಾನ ಮೀಸಲು ಅರಣ್ಯದ ಸುತ್ತ ಮುಳ್ಳುತಂತಿ ಬೇಲಿ ಇದ್ದರೂ ಕೆಲವೊಮ್ಮೆ ಕಾಡುಕೋಣಗಳ ಹಿಂಡು ಮೀಸಲು ಅರಣ್ಯದ ಅಂಚಿನಲ್ಲಿರುವ ಸೂಡ, ಪಿಲಾರು, ಮಜಲಬೆಟ್ಟು, ಮಿತ್ತಬೀಟು, ಕುದುರೆಬೆಟ್ಟು ಮತ್ತು ಗುಂಡುಪಾದೆ ಪ್ರದೇಶಗಳಲ್ಲಿನ ಕೃಷಿ ಜಮೀನುಗಳಿಗೆ ನುಗ್ಗಿ ಭತ್ತ, ತರಕಾರಿ, ಬಾಳೆ ಮತ್ತು ಅಡಿಕೆ ಕೃಷಿಯನ್ನು ನಾಶಗೊಳಿಸುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.