ಗೇಮ್ ಚೇಂಜರ್ಸ್ ಅಂತ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನೇಮ್ ಚೇಂಜರ್ ಆಗಿದೆ: ಪ್ರಿಯಾಂಕ್ ಖರ್ಗೆ

Updated on: Sep 07, 2023 | 3:16 PM

ಹೆಸರುಗಳನ್ನು ಚೇಂಜ್ ಮಾಡುವ ಬದಲು ಜನರ ಹಣೆಬರಹ ಚೇಂಜ್ ಮಾಡಲಿ ಎಂದ ಖರ್ಗೆ ಈಗಲೂ ಶೇಕಡ 74ರಷ್ಟು ಭಾರತೀಯರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಅಂತ ಸರ್ಕಾರದ ವರದಿಯೇ ಹೇಳುತ್ತದೆ, ಮೊದಲು ಆ ಸ್ಥಿತಿಯನ್ನು ಬಿಜೆಪಿ ಸರ್ಕಾರ ಚೇಂಜ್ ಮಾಡಲಿ ಅಂತ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಮ್ಮನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಬಿಜೆಪಿ (BJP) ಮತ್ತು ಆರ್ ಎಸ್ ಎಸ್ ನವರಿಗೆ (RSS) ಭಾರತ ಇತಿಹಾಸದ ಬಗ್ಗೆ ಗೊತ್ತಿದೆಯಾ? ಇಂಡಿಯಾ ಮತ್ತು ಭಾರತ್ ಅಂತ ಹೆಸರು ಯಾಕೆ ಬಂತು ಅನ್ನೋದು ಅವರಿಗೆ ಗೊತ್ತಿದೆಯಾ? ವಾಟ್ಸ್ಯಾಪ್ ಯೂನಿವರ್ಸಿಸಿಟಿ ವಿದ್ಯಾರ್ಥಿಗಳಿಗೆ ಅದು ಹೇಗೆ ಗೊತ್ತಿರಲು ಸಾಧ್ಯ ಅಂತ ಅವರು ವ್ಯಂಗ್ಯವಾಡಿದರು. ಗೇಮ್ ಚೇಂಜರ್ಸ್ ಅಂತ ಜನರನ್ನು ನಂಬಿಸುತ್ತಾ ಅಧಿಕಾರಕ್ಕೆ ಬಂದವರು ನೇಮ್ ಚೇಂಜ್ ಮಾಡುತ್ತಿದ್ದಾರೆ, ಹೆಸರುಗಳನ್ನು ಚೇಂಜ್ ಮಾಡುವ ಬದಲು ಅವರು ಜನರ ಹಣೆಬರಹ ಚೇಂಜ್ ಮಾಡಲಿ ಎಂದರು. ಈಗಲೂ ಶೇಕಡ 74ರಷ್ಟು ಭಾರತೀಯರಿಗೆ ಪೌಷ್ಟಿಕ ಆಹಾರ ಸಿಗುತ್ತ್ತಿಲ್ಲ ಅಂತ ಸರ್ಕಾರದ ವರದಿಯೇ ಹೇಳುತ್ತದೆ, ಮೊದಲು ಆ ಸ್ಥಿತಿಯನ್ನು ಬಿಜೆಪಿ ಸರ್ಕಾರ ಚೇಂಜ್ ಮಾಡಲಿ ಅಂತ ಖರ್ಗೆ ಹೇಳಿದರು. ಅಖಂಡ ಭಾರತ ಅಂತ ಬಿಜೆಪಿ ಅಂತ ಹೇಳುತ್ತದೆ, ಅದರೆ ಅರುಣಾಚಲ ಪ್ರದೇಶದಲ್ಲಿ ಚೀನಾ ನಮ್ಮ ಹಳ್ಳಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದೆ, ಅದನ್ನು ಚೇಂಜ್ ಮಾಡಲಿ ಎಂದು ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More