AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toxic Movie

Toxic Movie

‘ಕೆಜಿಎಫ್ 2’ ಬಳಿಕ ಯಶ್ ಒಪ್ಪಿಕೊಂಡ ಮೊದಲ ಸಿನಿಮಾ ಇದು. ಯಶ್ ನಟಿಸುತ್ತಿರುವ 19ನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಕೆವಿಎನ್​ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಕೆ.ವೆಂಕಟ್ ನಾರಾಯಣ್ ಅವರು ಇದನ್ನು ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಜೊತೆಗೆ ಮಲಯಾಳಂ, ತಮಿಳು ಮೊದಲಾದ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಯಶ್​ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್​ ನಟಿಸಿದ್ದಾರೆ. ಆಗಸ್ಟ್ 8ರಂದು ಸಿನಿಮಾದ ಮುಹೂರ್ತ ನೆರವೇರಿದೆ. 2026ರ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರವನ್ನು ಹಾಲಿವುಡ್​ ಮಟ್ಟದಲ್ಲಿ ಸಿದ್ಧಪಡಿಸಲಾಗಿದೆ. ಯಶ್ ಅವರು ಈ ಚಿತ್ರಕ್ಕಾಗಿ ಬೇರೆ ಅವತಾರ ತಾಳಿದ್ದಾರೆ. ಈ ಸಿನಿಮಾದ ಬಗ್ಗೆ ಕೇವಲ ಕನ್ನಡದವರಿಗೆ ಮಾತ್ರವಲ್ಲದೆ ಪರಭಾಷೆಯ ಸಿನಿ ಪ್ರಿಯರಿಗೂ ನಿರೀಕ್ಷೆ ಸೃಷ್ಟಿ ಆಗಿದೆ ಅನ್ನೋದು ವಿಶೇಷ.

ಇನ್ನೂ ಹೆಚ್ಚು ಓದಿ

‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್​​ಗೆ ಕಾದು ಕುಳಿತವರಿಗೆ ಗುಡ್ ನ್ಯೂಸ್

ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ 'ತಬಾಹಿ' ವಿಡಿಯೋ ಹಾಡು ಇದೇ ವಾರ ಬಿಡುಗಡೆಗೆ ಸಿದ್ಧವಾಗಿದೆ. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಬೋಲ್ಡ್ ಕೆಮಿಸ್ಟ್ರಿ ಹೊಂದಿರುವ ಈ ಹಾಡು, ಲಿರಿಕಲ್ ವಿಡಿಯೋ ನಂತರ ಮತ್ತಷ್ಟು ಸಂಚಲನ ಮೂಡಿಸಲಿದೆ. ಆಗಸ್ಟ್ 26ರಂದು ಬಿಡುಗಡೆಯಾಗಲಿರುವ 'ಟಾಕ್ಸಿಕ್' ಚಿತ್ರದ ಕುರಿತು ಅಭಿಮಾನಿಗಳ ನಿರೀಕ್ಷೆಗಳನ್ನು ಈ ಹಾಡು ಹೆಚ್ಚಿಸುವುದು ಖಚಿತ.

ಆಗಸ್ಟ್ 15ಕ್ಕೆ ಬೆಂಗಳೂರಲ್ಲಿ ‘ಟಾಕ್ಸಿಕ್’ ಭರ್ಜರಿ ಈವೆಂಟ್? ಹೇಳಿದ್ದನ್ನು ಮಾಡಿ ತೋರಿಸಿದ ಯಶ್

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಸೃಷ್ಟಿಸಿದೆ. ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಪ್ಯಾನ್-ವರ್ಲ್ಡ್ ಪ್ರಚಾರ ಕಾರ್ಯಕ್ರಮಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಬೃಹತ್ ಈವೆಂಟ್‌ಗೆ ದೇಶ-ವಿದೇಶಗಳ ಪತ್ರಕರ್ತರು ಆಗಮಿಸಲಿದ್ದು, ಯಶ್ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ತಮ್ಮ ದೂರದೃಷ್ಟಿಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದಾರೆ. ಆಗಸ್ಟ್ 26ರಂದು ಈ ಬಹುನಿರೀಕ್ಷಿತ ಆಕ್ಷನ್ ಚಿತ್ರ ತೆರೆಗೆ ಬರಲಿದೆ.

ಯಶ್ ‘ಟಾಕ್ಸಿಕ್’ ವಿರುದ್ಧ ಸೆಣೆಸಲು ವಿವಾದ ಬಗೆಹರಿಸಿಕೊಂಡ ಶ್ರದ್ಧಾ ಕಪೂರ್

ಬಾಲಿವಿಡ್ ನಟಿ ಶ್ರದ್ಧಾ ಕಪೂರ್ ಅವರ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ಎದುರಿಸುತ್ತಿದ್ದ ಶೀರ್ಷಿಕೆ ವಿವಾದಕ್ಕೆ ಈಗ ತೆರೆ ಬಿದ್ದಿದೆ. ವಿಠಾಬಾಯಿ ಅವರ ಕುಟುಂಬಸ್ಥರು ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಚಿತ್ರಕ್ಕಿದ್ದ ಆರಂಭಿಕ ವಿಘ್ನವನ್ನು ನಿವಾರಿಸಿದ್ದಾರೆ. ವಿವಾದ ಮುಕ್ತವಾಗಿರುವ ಈ ಚಿತ್ರವು ಆಗಸ್ಟ್ 28 ರಂದು ಬಿಡುಗಡೆಯಾಗಲಿದ್ದು, ಆಗಸ್ಟ್ 26 ಕ್ಕೆ ಬರಲಿರುವ ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಮುಖಾಮುಖಿಯಾಗಲು ಸಜ್ಜಾಗಿದೆ.

‘ಟಾಕ್ಸಿಕ್’ ಟೀಸರ್​​ನಲ್ಲಿ ಅಷ್ಟು ದೊಡ್ಡ ಎಚ್ಚರಿಕೆ ಕೊಡಲು ಇದೆ ದೊಡ್ಡ ಕಾರಣ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿರುವ ವಿಭಿನ್ನ ಎಚ್ಚರಿಕೆ ಸಂದೇಶ ಭಾರಿ ಚರ್ಚೆ ಹುಟ್ಟುಹಾಕಿದೆ. ಚಿತ್ರದ 'ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಎಂಬ ಅಡಿಬರಹಕ್ಕೆ ತಕ್ಕಂತೆ ಕಥೆಯಲ್ಲಿ ಅತಿಯಾದ ಹಿಂಸಾಚಾರ ಹಾಗೂ ಬೋಲ್ಡ್ ಕಂಟೆಂಟ್ ಇರಲಿದೆ ಎಂಬುದನ್ನು ಚಿತ್ರತಂಡವೇ ನೇರವಾಗಿ ಸೂಚಿಸಿದೆ. ಹಿಂದಿನ ವಿವಾದಗಳು ಹಾಗೂ ಭವಿಷ್ಯದ ಸೆನ್ಸಾರ್ ಸಮಸ್ಯೆಗಳನ್ನು ತಪ್ಪಿಸಲು ಚಿತ್ರತಂಡ ಈ ಮುನ್ನೆಚ್ಚರಿಕೆ ವಹಿಸಿದೆ ಎಂದು ನೆಟ್ಟಿಗರು ಪತ್ತೆಹಚ್ಚಿದ್ದಾರೆ.

Toxic Ladies Teaser: ಬಂದೇ ಬಿಟ್ಟರು ಲೇಡೀಸ್: ‘ಟಾಕ್ಸಿಕ್’ನ ಪವರ್​ಫುಲ್ ಮಹಿಳೆಯರ ಪವರ್​​ಫುಲ್ ಎಂಟ್ರಿ

ಯಶ್, ಟಾಕ್ಸಿಕ್ ಲೇಡೀಸ್ ಟೀಸರ್: ಇಂದು (ಜುಲೈ 1) ‘ಟಾಕ್ಸಿಕ್’ ಸಿನಿಮಾದ ಹೊಸ ಟೀಸರ್ ಬಿಡುಗಡೆ ಆಗಿದ್ದು, ಟೀಸರ್​​ನ ಆರಂಭದಲ್ಲಿಯೇ ಎಚ್ಚರಿಕೆಯನ್ನು ಸಹ ಚಿತ್ರತಂಡ ನೀಡಿದೆ. ಮಕ್ಕಳು ಈ ಟೀಸರ್​ ನೋಡಬೇಡಿ, ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ ಎಂದು ಪೋಷಕರಿಗೆ, ವಯಸ್ಸಾದವರು ನಿಮ್ಮ ರಿಸ್ಕ್​​ನಲ್ಲಿ ನೋಡಿ ಎಂಬ ಎಚ್ಚರಿಕೆಯನ್ನು ಟೀಸರ್ ನ ಆರಂಭದಲ್ಲಿಯೇ ನೀಡಲಾಗಿದೆ. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಿನಿಮಾನಲ್ಲಿ ನಟಿಸಿರುವ ನಾಯಕಿಯರ ಪಾತ್ರಗಳ ಝಲಕ್ ತೋರಿಸಲಾಗಿದೆ.

‘ರಾಮಾಯಣ’ ಚಿತ್ರಕ್ಕೆ ನಂ.1 ಸ್ಥಾನ; 2026ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅಬ್ಬರ

IMDb ವೆಬ್‌ಸೈಟ್‌ಗೆ ಜಗತ್ತಿನಾದ್ಯಂತ ಪ್ರತಿ ತಿಂಗಳು ಭೇಟಿ ನೀಡುವ 25 ಕೋಟಿಗೂ ಅಧಿಕ ಓದುಗರು ಜನವರಿ 1ರಿಂದ ಜೂನ್ 28ರವರೆಗೆ ಯಾವ ಸಿನಿಮಾಗಳ ಪುಟಗಳನ್ನು ಅತಿ ಹೆಚ್ಚು ವೀಕ್ಷಿಸಿದ್ದಾರೆ ಎಂಬುದರ ಆಧಾರದ ಮೇಲೆ ಈ ರ‍್ಯಾಂಕಿಂಗ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಟಾಪ್ 20 ಪಟ್ಟಿಯಲ್ಲಿ 12 ಹಿಂದಿ ಸಿನಿಮಾಗಳು, 4 ತಮಿಳು, 2 ಮಲಯಾಳಂ ಸಿನಿಮಾಗಳ ಜೊತೆ ತೆಲುಗು ಮತ್ತು ಕನ್ನಡದಿಂದ ತಲಾ ಒಂದು ಸಿನಿಮಾ ಸ್ಥಾನ ಪಡೆದುಕೊಂಡಿವೆ.

‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು

ನಟಿ ಪ್ರಿಯಾ ಆನಂದ್ ಕನ್ನಡ ಚಿತ್ರರಂಗದ ಜಾಗತಿಕ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. 'ಕೆಜಿಎಫ್', 'ಕಾಂತಾರ'ದಂತಹ ಸಿನಿಮಾಗಳ ನಂತರ ಚಂದನವನದ ಮಾರುಕಟ್ಟೆ ವಿಸ್ತಾರವಾಗಿದ್ದು, ಯಶ್ ಒಬ್ಬ ನಾಯಕನಾಗಿ ಇಡೀ ಉದ್ಯಮಕ್ಕೆ ಸ್ಫೂರ್ತಿದಾಯಕ ಎಂದಿದ್ದಾರೆ. ಯಶ್ ಅವರ ಮುಂಬರುವ 'ಟಾಕ್ಸಿಕ್' ಚಿತ್ರದ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದು, ಅದ್ಭುತ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದಲ್ಲೇ ‘ರಾಮಾಯಣ’ ಪ್ರಚಾರ; ಯಶ್ ಮಾಸ್ಟರ್ ಪ್ಲ್ಯಾನ್

ರಾಕಿಂಗ್ ಸ್ಟಾರ್ ಯಶ್ ತಮ್ಮ 'ಟಾಕ್ಸಿಕ್' ಸಿನಿಮಾದ ಬಿಡುಗಡೆ ಜೊತೆಗೇ 'ರಾಮಾಯಣ' ಚಿತ್ರದ ಪ್ರಚಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆಗಸ್ಟ್ 26ರಂದು 'ಟಾಕ್ಸಿಕ್' ತೆರೆಕಾಣಲಿದ್ದು, ಅದರೊಂದಿಗೆ 'ರಾಮಾಯಣ'ದ ಟೀಸರ್ ಅಥವಾ ಟ್ರೇಲರ್ ಬಿಡುಗಡೆಯಾಗಲಿದೆ. ಇದು ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ ನೀಡಲಿದ್ದು, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯಶ್‌ನ ಸ್ಮಾರ್ಟ್ ತಂತ್ರವಾಗಿದೆ.

‘ಟಾಕ್ಸಿಕ್’ ಚಿತ್ರವನ್ನು ತುಳಿಯಲು ಬಾಲಿವುಡ್​​ನಲ್ಲಿ ನಡೀತಿದೆ ಸೀಕ್ರೆಟ್ ಪ್ಲ್ಯಾನ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಬೆನ್ನಲ್ಲೇ, ಚಿತ್ರದ ಹೈಪ್ ಕಮ್ಮಿ ಮಾಡಲು ಹಾಗೂ ಇಮೇಜ್‌ಗೆ ಧಕ್ಕೆ ತರಲು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ತಂತ್ರ ನಡೆದಿದೆ. 'ಈಥಾ' ತಂಡದಿಂದ ನಡೆಯುತ್ತಿದೆ ಎನ್ನಲಾದ ಈ ಪಿಆರ್ ಸ್ಟಂಟ್‌ನಲ್ಲಿ ಒಂದೇ ರೀತಿಯ ಟ್ವೀಟ್‌ಗಳನ್ನು ಕಾಪಿ-ಪೇಸ್ಟ್ ಮಾಡಿ 'ಟಾಕ್ಸಿಕ್' ಅನ್ನು ಗುರಿಯಾಗಿಸಲಾಗುತ್ತಿದೆ. ಚಿತ್ರರಂಗದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಭಾರತಕ್ಕೊಂದು, ವಿದೇಶಕ್ಕೊಂದು; ಎರಡು ಬೇರೆ ಬೇರೆ ಪ್ರಿಂಟ್​​ಗಳಲ್ಲಿ ‘ಟಾಕ್ಸಿಕ್’ ತೆರೆಗೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಭಾರತ ಮತ್ತು ವಿದೇಶಗಳಲ್ಲಿ ವಿಭಿನ್ನ ವರ್ಷನ್‌ಗಳಲ್ಲಿ ತೆರೆಗೆ ಬರಲಿದ್ದು, ವಿದೇಶಗಳಲ್ಲಿ ಕಟ್ ಇಲ್ಲದೆ ಪ್ರದರ್ಶನಗೊಳ್ಳಲಿದೆ. ಭಾರತದಲ್ಲಿ ಮಾದಕ ದ್ರವ್ಯ, ಹಿಂಸೆ, ಬೋಲ್ಡ್ ದೃಶ್ಯಗಳಿರುವ 'ರಾ' ಕಂಟೆಂಟ್ ಕಾರಣ ಸೆನ್ಸಾರ್ ಮಂಡಳಿ ಕತ್ತರಿ ಹಾಕಲಿದೆ. ಇದರಿಂದ ಎರಡೂ ಕಡೆ ಪ್ರೇಕ್ಷಕರು ವಿಭಿನ್ನ ಅನುಭವ ಪಡೆಯಲಿದ್ದಾರೆ.

ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ ಟಾಕ್ಸಿಕ್ ಸಿನಿಮಾ; ಸಿಕ್ತು ಅಧಿಕೃತ ಮಾಹಿತಿ

Toxic Release Date: ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಿಗ್ ಅಪ್​ಡೇಟ್ ನೀಡುವುದಾಗಿ ಯಶ್ ಅವರು ತಿಳಿಸಿದ್ದರು. ಅದರಂತೆ ಚಿತ್ರತಂಡ ಈಗ ರಿಲೀಸ್ ದಿನಾಂಕ ಪ್ರಕಟಿಸಿದೆ. ಆಗಸ್ಟ್ 26ರಂದು ವಿಶ್ವಾದ್ಯಂತ ‘ಟಾಕ್ಸಿಕ್’ ಚಿತ್ರ ಬಿಡುಗಡೆ ಆಗಲಿದೆ. ಹೊಸ ಪೋಸ್ಟರ್ ಮೂಲಕ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಳ್ಳಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಟಾಕ್ಸಿಕ್’ ಸೆಟ್‌ನಿಂದ ಬಿಗ್ ಅಪ್ಡೇಟ್: ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ಮೇಕಿಂಗ್ ಝಲಕ್ ರಿಲೀಸ್

'ಟಾಕ್ಸಿಕ್' ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್ ಹುಟ್ಟುಹಬ್ಬಕ್ಕೆ ವಿಶೇಷ ಬಿಟಿಎಸ್ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋ, ಚಿತ್ರದ ಬೃಹತ್ ಮೇಕಿಂಗ್, ಅದ್ದೂರಿ ಆಕ್ಷನ್ ಹಾಗೂ ಗೀತು ಮೋಹನ್‌ದಾಸ್ ಅವರ ಅದ್ಭುತ ನಿರ್ದೇಶನ ಶೈಲಿಯನ್ನು ಅನಾವರಣಗೊಳಿಸಿದೆ. ಪ್ಯಾನ್-ಇಂಡಿಯಾ ಪ್ರಾಜೆಕ್ಟ್ 'ಟಾಕ್ಸಿಕ್' ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಪ್ರಜ್ವಲ್ ದೇವರಾಜ್ ಅಭಿಮಾನಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗುರುದತ್
ಪ್ರಜ್ವಲ್ ದೇವರಾಜ್ ಅಭಿಮಾನಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗುರುದತ್
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ
ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ
ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ
ನರಸಿಂಹವಾಡಿ ದತ್ತ ಮಂದಿರ ಜಲಾವೃತ!
ನರಸಿಂಹವಾಡಿ ದತ್ತ ಮಂದಿರ ಜಲಾವೃತ!
ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ವಿದ್ಯಾರ್ಥಿನಿ ತೇಜು ಆತ್ಮಹತ್ಯೆ
ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ವಿದ್ಯಾರ್ಥಿನಿ ತೇಜು ಆತ್ಮಹತ್ಯೆ
ಪ್ರಕೃತಿಯ ಮಡಿಲಲ್ಲಿ ಅಕುಲ್ ಬಾಲಾಜಿ ಕನಸಿನ ಮನೆ; ಎಷ್ಟು ಸುಂದರವಾಗಿದೆ ನೋಡಿ
ಪ್ರಕೃತಿಯ ಮಡಿಲಲ್ಲಿ ಅಕುಲ್ ಬಾಲಾಜಿ ಕನಸಿನ ಮನೆ; ಎಷ್ಟು ಸುಂದರವಾಗಿದೆ ನೋಡಿ
ಚಾರ್ಮಾಡಿ ಘಾಟಿಯಲ್ಲಿ ರಣಮಳೆ, ದಟ್ಟ ಮಂಜು, ಫಾಲ್ಸ್​ಗಳ ಅಬ್ಬರ
ಚಾರ್ಮಾಡಿ ಘಾಟಿಯಲ್ಲಿ ರಣಮಳೆ, ದಟ್ಟ ಮಂಜು, ಫಾಲ್ಸ್​ಗಳ ಅಬ್ಬರ