Karnataka Assembly Polls: ಜೆಡಿಎಸ್ ಪಕ್ಷ ಸೇರಿರುವ ವ್ಯಕ್ತಿ ನನ್ನ ಅಳಿಯನಲ್ಲ, ಅವನ-ನನ್ನ ನಡುವೆ ಯಾವ ಸಂಬಂಧವೂ ಇಲ್ಲ: ಗೋವಿಂದ ಕಾರಜೋಳ

ಅರುಣ್​ ಕುಮಾರ್​ ಬೆಳ್ಳಿ

Updated on: Apr 03, 2023 | 6:29 PM

ಕಾರಜೋಳ ಅವರು ಪಕ್ಷವನ್ನು ರೇಲ್ವೇ ನಿಲ್ದಾಣಕ್ಕೆ ಹೋಲಿಸಿ ಅಲ್ಲಿ ಎಷ್ಟೊಂದು ಜನ ಬರ್ತಾರೆ ಹೋಗ್ತಾರೆ, ಅಂಥವರದ್ದೆಲ್ಲ ಲೆಕ್ಕ ಇಡಲಾಗಲ್ಲ ಎನ್ನುತ್ತಾರೆ.

ಹುಬ್ಬಳ್ಳಿ: ಒಂದು ನಂಬಲರ್ಹ ಮೂಲದ ಪ್ರಕಾರ ಸಚಿವ ಗೋವಿಂದ ಕಾರಜೋಳ (Govind Karjol) ಹತ್ತಿರದ ಸಂಬಂಧಿಯೊಬ್ಬರು ರಾಜಕೀಯವಾಗಿ ಅವರಿಂದ ದೂರವಾಗಿದ್ದಾರೆ. ಅವರ ಅಳಿಯ ಅಂತ ಗುರುತಿಸಿಕೊಂಡಿದ್ದ ವ್ಯಕ್ತಿ ಜೆಡಿಎಸ್ (JDS) ಸೇರಿದ್ದಾರಂತೆ. ಇದು ನಿಜಾನಾ ಸರ್ ಅಂತ ಹುಬ್ಬಳ್ಳಿಯಲ್ಲಿಂದು (Hubballi) ಮಾಧ್ಯಮದ ಪ್ರತಿನಿಧಿಗಳು ಕೇಳಿದಾಗ, ಅವನ್ಯಾರೋ ನನಗೆ ಗೊತ್ತೇ ಅಲ್ಲ, ಅವನು ನನ್ನ ರಕ್ತ ಸಂಬಂಧಿ ಅಲ್ಲ. ನಾನ್ಯಾವತ್ತೂ ಅವನನ್ನು ನನ್ನ ಸಂಬಂಧಿ ಅಂತ ಹೇಳಿಕೊಂಡಿಲ್ಲ ಅಂತ ಆ ವ್ಯಕ್ತಿಯೊಂದಿಗಿನ ಸಂಬಂಧವನ್ನು ಸಾರಾಸಗಟು ತಿರಸ್ಕರಿಸಿದರು. ನಂತರ ಅವರು ಪಕ್ಷವನ್ನು ರೇಲ್ವೇ ನಿಲ್ದಾಣಕ್ಕೆ ಹೋಲಿಸಿ ಅಲ್ಲಿ ಎಷ್ಟೊಂದು ಜನ ಬರ್ತಾರೆ ಹೋಗ್ತಾರೆ, ಅಂಥವರದ್ದೆಲ್ಲ ಲೆಕ್ಕ ಇಡಲಾಗಲ್ಲ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 03, 2023 06:29 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.