Chikkaballapur: ಮಿಮಿಕ್ರಿ ಮಾಡುತ್ತಾ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಲೇವಡಿ ಮಾಡಿದ ಬಿಜೆಪಿ ಶಾಸಕ ಆರ್ ಅಶೋಕ

|

Updated on: Jun 22, 2023 | 6:14 PM

ಉಚಿತ ಬಸ್ ಪ್ರಯಾಣಕ್ಕಾಗಿ ಯಾವುದೋ ಕಾಲದ ಎಕ್ಕುಟ್ಟಿ ಹೋಗಿರುವ ಬಸ್ ಗನ್ನು ನೀಡುತ್ತಿದ್ದಾರೆ ಎಂದು ಅಶೋಕ ಹೇಳಿದರು.

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಶಾಸಕ ಆರ್ ಅಶೋಕ (R Ashoka), ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಮಿಮಿಕ್ರಿ ಮಾಡುತ್ತಾ ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಗಳು, ಮಂತ್ರಿಗಳು ದೆಹಲಿಗೆ ಸುತ್ತಿದ್ದೇ ಸುತ್ತಿದ್ದು, ಮಿನಿಸ್ಟ್ರುಗಳೆಲ್ಲ ಪಂಚತಾರಾ ಹೊಟೆಲ್ ಗಳಲ್ಲಿ ಮಜಾ ಮಾಡುತ್ತಿದ್ದಾರೆ ಅಂತ ಅಶೋಕ ಹೇಳಿದರು. ಉಚಿತ ಬಸ್ ಪ್ರಯಾಣಕ್ಕಾಗಿ ಯಾವುದೋ ಕಾಲದ ಎಕ್ಕುಟ್ಟಿ ಹೋಗಿರುವ ಬಸ್ ಗನ್ನು ನೀಡುತ್ತಿದ್ದಾರೆ. ಬಸ್ ಗಳ ಟೈರ್ ಗಳು, ಡೋರ್ ಗಳು ಕಿತ್ತಿಕೊಂಡು ಬರುತ್ತಿವೆ, ಹೀಗೆ ಹಾಳಾಗಿರುವ ಬಸ್ ಗಳಲ್ಲಿ ನಮ್ಮ ಮಹಿಳೆಯರು ಪ್ರಯಾಣಿಸಬೇಕೇ? ಎಂದು ಶಾಸಕ ಅಶೋಕ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on