Anna Bhagya: ಹತ್ತು ಕೇಜಿ ಅಕ್ಕಿ ನೀಡುವ ಘೋಷಣೆ ಮಾಡುವ ಮೊದಲು ಕಾಂಗ್ರೆಸ್ ನಾಯಕರು ಕೇಂದ್ರವನ್ನು ಕೇಳಿದ್ದರೆ? ಆರ್ ಅಶೋಕ, ಶಾಸಕ
ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲು ತಾವೇ ಟೆಂಟ್ ಹಾಕಿಸಿಕೊಡುವುದಾಗಿ ಅಶೋಕ ಹೇಳಿದರು.
ಬೆಂಗಳೂರು: ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಕ್ಕೆ ಶಾಸಕ ಆರ್ ಅಶೋಕ (R Ashoka) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಭಟನೆ ನಡೆಸಲು ತಾವೇ ಟೆಂಟ್ ಹಾಕಿಸಿಕೊಡುವುದಾಗಿ ಹೇಳಿದ ಅಶೋಕ, ಅಕ್ಕಿ ಕೊಡುತ್ತೇವೆ ಅಂತ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಅನುಮತಿ ಪಡೆದು ಭರವಸೆ ನೀಡಿದ್ದರೇ? ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಈಗಾಗಲೇ ನೀಡುತ್ತಿದೆ, 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ಜನರಿಗೆ ನೀಡಿದ್ದು ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar). ಅವರೇ ಹೇಳಿರುವ ಹಾಗೆ ತಾಕತ್ತಿದ್ದರೆ, ದಮ್ಮಿದ್ರೆ ಅಕ್ಕಿ ಕೊಡಲಿ ಅಂತ ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

