R Ashoka commits faux pause; ಸರ್ಕಾರ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿದೆ, ಕಾಂಗ್ರೆಸ್ ಅಂದ್ರೆ ಗೂಂಡಾಗಿರಿ: ಆರ್ ಅಶೋಕ, ಬಿಜೆಪಿ ಶಾಸಕ
ಸರ್ಕಾರ ಅಸ್ತಿತ್ವಕ್ಕೆ ಬಂದು 3-4 ದಿನಗಳಾಗಿವೆ ಮತ್ತು ಜೂನ್ ಆರಂಭವಾಗಲು ಇನ್ನೂ ಒಂದು ವಾರ ಬಾಕಿಯಿದೆ, ಆದರೆ ಮಾಜಿ ಸಚಿವರು ಸರ್ಕಾರ ಬಂದು ಮತ್ತು ಜೂನ್ ಕಳೆದು ಬಹಳ ದಿನಗಳಾಯ್ತು ಅನ್ನುತ್ತಾರೆ!!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿನ್ನೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರಿಗೆ ಬೆದರಿಕೆ ಹಾಕಿದ್ದಾರೆ, ಕಾಂಗ್ರೆಸ್ ಅಂದರೆ ಗೂಂಡಾಗಿರಿ, ಗೂಂಡಾಗಿರಿ ಅಂದರೆ ಕಾಂಗ್ರೆಸ್, ಎಂದು ಬಿಜೆಪಿ ಶಾಸಕ ಆರ್ ಅಶೋಕ (R Ashoka) ಇಂದು ಬೆಂಗಳೂರಲ್ಲಿ ಹೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಹೇಳಿತ್ತು. ಸಭೆಯಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟ ರೀತಿಯಲ್ಲಿ ಗ್ಯಾರಂಟಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಿದ ಅವರು ಆವೇಶದ ಭರದಲ್ಲಿ ಮಾತಾಡುವಾಗ ಎಡವಿದರು. ಕಾಂಗ್ರೆಸ್ ಪಕ್ಷ ಜೂನ್ ತಿಂಗಳಲ್ಲಿ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಹೇಳಿತ್ತು, ಆದರೆ ಜೂನ್ ಕಳೆದು ಬಹಳ ದಿನಗಳಾಯ್ತು ಎಂದು ಅಶೋಕ ಹೇಳಿದರು! ಸರ್ಕಾರ ಅಸ್ತಿತ್ವಕ್ಕೆ ಬಂದು 3-4 ದಿನಗಳಾಗಿವೆ ಮತ್ತು ಜೂನ್ ಆರಂಭವಾಗಲು ಇನ್ನೂ ಒಂದು ವಾರ ಬಾಕಿಯಿದೆ, ಆದರೆ ಮಾಜಿ ಸಚಿವರು ಸರ್ಕಾರ ಬಂದು ಮತ್ತು ಜೂನ್ ಕಳೆದು ಬಹಳ ದಿನಗಳಾಯ್ತು ಅನ್ನುತ್ತಾರೆ!!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Wed, 24 May 23