ಅರಬ್ಬಿ ಸಮುದ್ರದಲ್ಲಿ ನೋಡ ನೋಡುತ್ತಿದ್ದಂತೆ ಮುಳುಗಿದ ದೋಣಿ; ವಿಡಿಯೋ ಇಲ್ಲಿದೆ
ಮೀನುಗಾರರು ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಮುಸ್ತಾಕ್(52), ರೋಜಿ ಅಬೂಬಕ್ಕರ್(55), ಶಬ್ಬೀರ್(50), ತರಿಸಲ್ಲ ಅಶ್ರಫ್(37), ಬೊಂಬಾ ಮೊಹಮ್ಮದ್(47) ಜೀವಾಪಾಯದಿಂದ ಪಾರಾಗಿದ್ದಾರೆ.
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮ ಬಳಿ ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು (Fishing Boat) ಮುಳುಗಡೆಯಾಗಿದೆ. ಸ್ಥಳೀಯ ಮೀನುಗಾರರು ಮುಳುಗಿದ ದೋಣಿಯಲ್ಲಿದ್ದ ಐವರು ಮೀನುಗಾರರನ್ನ ರಕ್ಷಣೆ (Rescue) ಮಾಡಿದ್ದಾರೆ. ಮೀನುಗಾರರು ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಮುಸ್ತಾಕ್(52), ರೋಜಿ ಅಬೂಬಕ್ಕರ್(55), ಶಬ್ಬೀರ್(50), ತರಿಸಲ್ಲ ಅಶ್ರಫ್(37), ಬೊಂಬಾ ಮೊಹಮ್ಮದ್(47) ಜೀವಾಪಾಯದಿಂದ ಪಾರಾಗಿದ್ದಾರೆ. ಮುಳುಗಡೆಯಾಗಿರುವ ಅಮೀನಾ ಬೋಟ್ ಶಿರೂರಿನ ಮುಸ್ತಾಕ್ ಮಾಲೀಕತ್ವದ್ದು ಎಂದು ತಿಳಿದುಬಂದಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
