Karnataka Assembly Polls: ಅಧಿಕಾರ ಪಡೆದು ದೆಹಲಿ ದೊರೆಗಳಿಗೆ ಎಟಿಎಮ್ ಅಗುವ ಕನಸನ್ನು ಕರ್ನಾಟಕ ಕಾಂಗ್ರೆಸ್ ಕಾಣುತ್ತಿದೆ: ಬಿವೈ ವಿಜಯೇಂದ್ರ

|

Updated on: Apr 22, 2023 | 12:22 PM

ಮತ್ತೊಂದೆಡೆ ಜೆಡಿಎಸ್ ಒಂದಷ್ಟು ಸೀಟು ಗೆದ್ದು ಅತಂತ್ರ ವಿಧಾನಸಭೆ ಸ್ಥಿತಿ ನಿರ್ಮಾಣವಾದರೆ ಅದರ ಪ್ರಯೋಜನ ಪಡೆದುಕೊಳ್ಳಲು ಎದುರು ನೋಡುತ್ತಿದೆ.

ಮೈಸೂರು: ಬಿಜೆಪಿ ಯುವನಾಯಕ ಮತ್ತು ಶಿಕಾರಿಪುರ ಕ್ಷೇತ್ರದ ಅಭ್ಯರ್ಥಿ ಬಿವೈ ವಿಜಯೇಂದ್ರ (BY Vijayendra) ಶುಕ್ರವಾರದಿಂದ ಮೈಸೂರು ಜಿಲ್ಲೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಮೈಸೂರು ನಗರದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತಾಡಿದ ವಿಜಯೇಂದ್ರ, ಕಾಂಗ್ರೆಸ್ ಈ ಬಾರಿಯ ಚುನಾವಣೆಯನ್ನು (assembly polls) ಹೇಗಾದರೂ ಮಾಡಿ ಗೆದ್ದು ಪಕ್ಷದ ದೆಹಲಿಯ ದೊರೆಗಳಿಗೆ ಎಟಿಎಮ್ ಆಗುವ ಹವಣಿಕೆಯಲ್ಲಿದೆ. ಮತ್ತೊಂದೆಡೆ ಜೆಡಿಎಸ್ ಒಂದಷ್ಟು ಸೀಟು ಗೆದ್ದು ಅತಂತ್ರ ವಿಧಾನಸಭೆ (hung assembly) ನಿರ್ಮಾಣವಾದರೆ ಅದರ ಪ್ರಯೋಜನ ಪಡೆದುಕೊಳ್ಳುವ ಸ್ಥಿತಿಯನ್ನು ಎದುರು ನೋಡುತ್ತಿದೆ. ಏತನ್ಮಧ್ಯೆ, ಬಿಜೆಪಿ ಪ್ರಜ್ಞಾವಂತ ಮತದಾರರ ನೆರವಿನಿಂದ ಪುನಃ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on