BYV in Tumakuru: ರಾಜ್ಯದ ಹಿತದೃಷ್ಟಿಯಿಂದ ಯಾವ ಕಾಂಗ್ರೆಸ್ ನಾಯಕ ಸಿಎಮ್ ಆಗಬೇಕು ಅಂತ ವಿಜಯೇಂದ್ರಗೆ ಕೇಳಿದಾಗ ಏನಂದ್ರು ಗೊತ್ತಾ?

|

Updated on: May 15, 2023 | 5:02 PM

ಅವರ ಗೊಂದಲ ಅರ್ಥಮಾಡಿಕೊಂಡ ಪತ್ರಕರ್ತ ಪ್ರಶ್ನೆಯನ್ನು ಪುನರಾವರ್ತಿಸಿದಾಗ, ಕಾಂಗ್ರೆಸ್ ಪಕ್ಷದವರು ಅದರ ಬಗ್ಗೆ ಯೋಚನೆ ಮಾಡುತ್ತಾರೆ, ನಾನ್ಯಾಕೆ ಮಾಡಲಿ? ಎಂದರು.

ತುಮಕೂರು: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಸಭೆಗೆ ಅಯ್ಕೆಯಾಗಿರುವ ಬಿವೈ ವಿಜಯೇಂದ್ರ (BY Vijayendra) ಇಂದು ಕುಟುಂಬದ ಜೊತೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ ಶಿವಕುಮಾರ ಶ್ರೀ ಗದ್ದುಗೆ ದರ್ಶನ ಪಡೆದರು. ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಪತ್ರಕರ್ತರೊಬ್ಬರು, ಡಿಕೆ ಶಿವಕುಮಾರ್ (DK Shivakumar ) ಮತ್ತು ಸಿದ್ದರಾಮಯ್ಯ (Siddaramaiah) ಇಬ್ಬರಲ್ಲಿ ಯಾರು ಮುಖ್ಯಮಂತ್ರಿಗಳಾಗಬೇಕು ಅಂತ ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದರು. ಅವರ ಗೊಂದಲ ಅರ್ಥಮಾಡಿಕೊಂಡ ಪತ್ರಕರ್ತ ಪ್ರಶ್ನೆಯನ್ನು ಪುನರಾವರ್ತಿಸಿದಾಗ, ಕಾಂಗ್ರೆಸ್ ಪಕ್ಷದವರು ಅದರ ಬಗ್ಗೆ ಯೋಚನೆ ಮಾಡುತ್ತಾರೆ, ನಾನ್ಯಾಕೆ ಮಾಡಲಿ? ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on