Assembly Session
ಕರ್ನಾಟಕದಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಮೂರು ಬಾರಿ ವಿಧಾನ ಮಂಡಲ ಅಧಿವೇಶನ ನಡೆಯುತ್ತದೆ. ಕೆಲವೊಂದು ಬಾರಿ ವಿಶೇಷ ಸಂದರ್ಭಗಳಲ್ಲಿ ವಿಶೇಷ ಅಧಿವೇಶನ ನಡೆಸಲಾಗುತ್ತದೆ. ಬಜೆಟ್ ಅಧಿವೇಶನ, ಮುಂಗಾರು ಮತ್ತು ಚಳಿಗಾಲದ ಅಧಿವೇಶನ ಮುಖ್ಯವಾಗಿ ಪ್ರತಿ ವರ್ಷ ನಡೆಯುವಂಥವು. ಬಜೆಟ್ ಅಧಿವೇಶನ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ನಡೆಯುತ್ತದೆ. ಇನ್ನು, ಚಳಿಗಾಲದ ಅಧಿವೇಶನ ಹೆಚ್ಚಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತದೆ. 2024ರ ಚಳಿಗಾಲದ ವಿಧಾನಮಂಡಲ ಅಧಿವೇಶನ ಡಿಸೆಂಬರ್ 9 ರಿಂದ ಆರಂಭವಾಗುತ್ತಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳು ಮತ್ತು ಆಡಳಿತದಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ಚರ್ಚೆಯಾಗುತ್ತದೆ. ಮಸೂದೆಗಳ ಮಂಡನೆ, ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುತ್ತದೆ. ಬಜೆಟ್ ಅಧಿವೇಶನದಲ್ಲಿ ಕರ್ನಾಟಕದ ಆಯವ್ಯಯವನ್ನು ಮಂಡಿಸಲಾಗುತ್ತದೆ. ಬಜೆಟ್ನಲ್ಲಿ ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗುತ್ತದೆ. ಮತ್ತು ಇಲಾಖೆಗಳಿಗೆ ಹಣ ನೀಡಲಾಗುತ್ತದೆ. ಕರ್ನಾಟಕ ವಿಧಾನಸಭೆ 224 ಶಾಸಕರ ಬಲ ಹೊಂದಿದೆ. ಕರ್ನಾಟಕ ವಿಧಾನ ಪರಿಷತ್ತು 75 ಸದಸ್ಯರ ಖಾಯಂ ಸಂಸ್ಥೆಯಾಗಿದೆ. ಅವರಲ್ಲಿ 64 ಮಂದಿಯನ್ನು ಚುನಾಯಿತರಾಗಿ ಆಯ್ಕೆ ಮಾಡಲಾಗುತ್ತದೆ. 11 ಮಂದಿಯನ್ನು ರಾಜ್ಯಪಾಲರು ನೇಮಿಸುತ್ತಾರೆ.
ಏರುತ್ತಲೇ ಇದೆ ಬೆಳಗಾವಿ ಅಧಿವೇಶನದ ವೆಚ್ಚ: ಈ ಬಾರಿ ಎಷ್ಟು ಖರ್ಚಾಗುತ್ತೆ ಗೊತ್ತಾ?
ಡಿಸೆಂಬರ್ 8 ರಿಂದ ವಿಧಾನಸಭೆ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿದೆ. ಅದರೊಂದಿಗೆ, ಅಧಿವೇಶನದ ಖರ್ಚುವೆಚ್ಚ ಏರಿಕೆಯಾಗುತ್ತಿರುವುದರ ಬಗ್ಗೆಯೂ ಚರ್ಚೆ ಆರಂಭಗೊಂಡಿದೆ. ಹಾಗಾದರೆ, ಬೆಳಗಾವಿ ಅಧಿವೇಶನಕ್ಕೆ ಈವರೆಗೆ ಆದ ಖರ್ಚುವೆಚ್ಚಗಳೆಷ್ಟು? ಈ ಬಾರಿ ಎಷ್ಟು ಖರ್ಚಾಗಬಹುದು? ಇದು ಕಳೆದ ವರ್ಷಕ್ಕಿಂತ ಎಷ್ಟು ಹೆಚ್ಚು? ಇಲ್ಲಿದೆ ಮಾಹಿತಿ.
- Ganapathi Sharma
- Updated on: Dec 4, 2025
- 2:31 pm
ಬೆಳಗಾವಿ ಅಧಿವೇಶನಕ್ಕೆ ಸುವರ್ಣಸೌಧ ಸಜ್ಜು: 12 ಸಾವಿರ ಸಿಬ್ಬಂದಿ, 3 ಸಾವಿರ ರೂಮ್ಗಳು ಬುಕ್
ಡಿಸೆಂಬರ್ 8ರಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿರಲಿದ್ದು, ಅಚ್ಚುಕಟ್ಟಾಗಿ ಅಧಿವೇಶನ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ದೆಹಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಬಿಗಿ ಬಂದೋಬಸ್ತ್ ಸಹ ಮಾಡಲಾಗಿದೆ.
- Sahadev Mane
- Updated on: Dec 4, 2025
- 6:23 am
ಬೆಳಗಾವಿ ಅಧಿವೇಶನ: ಕಟ್ಟೆಚ್ಚರಕ್ಕೆ ಸೂಚಿಸಿದ ಕೇಂದ್ರ ಗುಪ್ತಚರ ಇಲಾಖೆ, ಪೊಲೀಸರು ಹೈ ಅಲರ್ಟ್
Belagavi Assembly Session Security: ದೆಹಲಿ ಸ್ಫೋಟದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಹೈ ಅಲರ್ಟ್ ಘೋಷಿಸಿದೆ. ಇಂಟೆಲಿಜೆನ್ಸ್ ಅಲರ್ಟ್ ಕಾರಣ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗುತ್ತಿದೆ. ಸುವರ್ಣ ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದ್ದು, ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
- Sahadev Mane
- Updated on: Dec 3, 2025
- 9:10 am
ಬೆಳಗಾವಿ ಅಧಿವೇಶನ ಮೋಜು-ಮಸ್ತಿಗೆ ನಡೆಯುತ್ತಾ!? ಏನಂದ್ರು ಖಾದರ್?
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಬೆಳಗಾವಿ ಅಧಿವೇಶನ ಫಲಪ್ರದವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಲಹರಣದ ಆರೋಪಗಳನ್ನು ತಳ್ಳಿ ಹಾಕಿದ ಅವರು, ಶಾಸಕರು ಸಕಾರಾತ್ಮಕವಾಗಿ ಪಾಲ್ಗೊಳ್ಳುತ್ತಾರೆ ಎಂದರು. ಹಲವು ವರ್ಷಗಳಿಂದ ಕೇಳಿಬರುತ್ತಿರುವ ಪ್ರತ್ಯೇಕ ರಾಜ್ಯದ ಬೇಡಿಕೆಯ ಬಗ್ಗೆ ಶಾಸಕ ರಾಜು ಕಾಗೆ ಜೊತೆ ಚರ್ಚಿಸುವುದಾಗಿ ಸ್ಪೀಕರ್ ತಿಳಿಸಿದ್ದಾರೆ. ಸದನದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.
- Sahadev Mane
- Updated on: Nov 14, 2025
- 10:06 am
Karnataka Assembly Session; ಆಪರೇಷನ್ ಕಮಲದ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸ್ವಂತ ಬಲದಲ್ಲಿ ಒಮ್ಮೆಯೂ ಇಲ್ಲ: ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರದ ದುರಾಡಳಿದಿಂದ ಬೇಸತ್ತಿರುವ ಜನ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ತರಲಿದ್ದಾರೆ, ನೀವು ಬೇಕಾದರೆ ಬರೆದಿಟ್ಟುಕೊಳ್ಳಿ, 2028ರಲ್ಲಿ ಬಿಜೆಪಿ 175 ಸ್ಥಾನಗಳನ್ನು ಗೆಲ್ಲಲಿದೆ ಎಂದ ಅಶೋಕ, ರಾಜಣ್ಣ ಅವರು ನವೆಂಬರ್ ಕ್ರಾಂತಿ ಅನ್ನುತ್ತಿದ್ದರು, ನಾವೆಲ್ಲ ಆ ಕ್ರಾಂತಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ ಅಂತ ಹೇಳಿದರು.
- Arun Belly
- Updated on: Aug 22, 2025
- 7:04 pm
Karnataka Assembly Session: ಸಿದ್ದರಾಮಯ್ಯ ತಮ್ಮ ತಂದೆಗೆ ಬೇರೆಯವರು ಫೇಲಾಗಿದ್ದು ಹೇಳಿದರೇ ಹೊರತು ತಾವು ಫೇಲಾಗಿದ್ದು ಹೇಳಲಿಲ್ಲ! ಅಶೋಕ
ನಿನ್ನೆ ಗೃಹ ಸಚಿವ ಪರಮೇಶ್ವರ್ ಹೇಳದಿರುವುದನ್ನು ತಾನು ಹೇಳುವುದಾಗಿ ತಿಳಿಸಿದ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕಾರ್ಯಕ್ರಮ ನಡೆಸುವ ಪರವಾನಗಿ ಇರಲಿಲ್ಲ ಅಂತಷ್ಟೇ ಹೇಳಿದರು. ಒಂದು ಪಕ್ಷ ಕೆಎಸ್ಸಿಎಯವರಿಗೆ ಅನುಮತಿ ಇರಲಿಲ್ಲ ಅಂತಾದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು? ನಮಗೆ ಇದಕ್ಕೆ ಸ್ಪಷ್ಟನೆ ಬೇಕು ಅಂತ ಅಶೋಕ ಒತ್ತಾಯಿಸಿದರು.
- Arun Belly
- Updated on: Aug 22, 2025
- 3:30 pm
ಆರ್ಸಿಬಿ ವಿಜಯೋತ್ಸವ ಕಾಲ್ತುಳಿತ: ಬಿಜೆಪಿ ಅವಧಿಯ ದುರಂತಗಳ ಲೆಕ್ಕ ಕೊಟ್ಟು ಸರ್ಕಾರವನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ
ಆರ್ಸಿಬಿ ವಿಜಯೋತ್ಸವ ಸಂದರ್ಭದ ಕಾಲ್ತುಳಿತ ಪ್ರಕರಣ ವಿಧಾನಸಭೆಯಲ್ಲಿ ಭಾರಿ ಸದ್ದು ಮಾಡಿತು. ಕಾಲ್ತುಳಿತ ಕೇಸನ್ನೇ ಅಸ್ತ್ರವಾಗಿ ಮಾಡಿಕೊಂಡು ಬಂದಿದ್ದ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದವು. ಆದರೆ, ಕಾಲ್ತುಳಿತ ಘಟನೆ ಸಂಬಂಧ ದೀರ್ಘವಾದ ಸ್ಪಷ್ಟನೆ ಕೊಟ್ಟ ಸಿಎಂ ಸಿದ್ದರಾಮಯ್ಯ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೆ, ಬಿಜೆಪಿ ಆಡಳಿತಾವಧಿಯ ಸಾವುಗಳು, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಹಿಂದೆ ಸಂಭವಿಸಿದ ಕಾಲ್ತುಳಿತಗಳ ಲೆಕ್ಕ ಕೊಟ್ಟು ಸರ್ಕಾರವನ್ನು ಸಮರ್ಥಿಸಿಕೊಂಡರು.
- Ganapathi Sharma
- Updated on: Aug 22, 2025
- 2:06 pm
ಜಮೀರ್ರನ್ನು ಛೇಡಿಸಲು ಹೋಗಿ ಸಿದ್ದರಾಮಯ್ಯರಿಂದ ಬುದ್ಧಿಮಾತು ಹೇಳಿಸಿಕೊಂಡ ಅರವಿಂದ್ ಬೆಲ್ಲದ್
ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವೇ ಪ್ರಚೋದಕ ಅಂತ ಹೇಳಿದ್ದನ್ನು ಸಿಎಂ ಸಿದ್ದರಾಮಯ್ಯ ಒಪ್ಪಲ್ಲ. ಅವರು ಸರ್ಕಾರವನ್ನು ಯಾಕೆ ಅಬೆಟರ್ ಅಂತಾರೋ ಗೊತ್ತಿಲ್ಲ, ಆದರೆ ವಿಷಯವನ್ನು ಸಾರ್ವಜನಿಕರ ಸುಪರ್ದಿಗೆ ಬಿಡುತ್ತೇನೆ, ಅವರೇ ನಿರ್ಧಾರ ತೆಗೆದುಕೊಳ್ಳಲಿ, ಕಾಲ್ತುಳಿತ ಪ್ರಕರಣದಲ್ಲಿ 11 ಜನ ಅಮಾಯಕ ಯುವಕರು ಪ್ರಾಣ ಕಳೆದುಕೊಂಡಿದ್ದಕ್ಕೆ ಸರ್ಕಾರ ಕಾರಣವೇ ಅಲ್ಲವೇ ಅನ್ನೋದನ್ನು ಅವರೇ ಹೇಳಲಿ ಎಂದು ಸಿಎಂ ಹೇಳಿದರು.
- Arun Belly
- Updated on: Aug 22, 2025
- 1:37 pm
Karnataka Assembly Session; ಗೋವಿಂದೇಗೌಡರ ಫೋಟೋ ಈಗಲೂ ಕೆಲ ಶಿಕ್ಷಕರು ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾರೆ: ಸುರೇಶ್ ಕುಮಾರ್
ಸರ್ಕಾರೀ ಶಾಲೆಗಳ ಬಗ್ಗೆ ಜನರಲ್ಲಿ ವಿಶ್ವಾಸಾರ್ಹತೆ ಕಡಿಮೆ, ಈ ಶಾಲೆಗಳಲ್ಲಿ ಸಿಗುವ ಶಿಕ್ಷಣದ ಗುಣಮಟ್ಟದ ಬಗ್ಗೆ ಅವರಲ್ಲಿ ನಂಬಿಕೆಯಿಲ್ಲ, ಇಲ್ಲಿ ಸೇರಿಸಿದರೆ ಮಕ್ಕಳು ಓದಲ್ಲ ಅನ್ನೋದು ಖಾತರಿಯಾಗಿರುವ ಕಾರಣ ಕಾನ್ವೆಂಟ್ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಹಾಗೆ ನೋಡಿದರೆ, ಸರ್ಕಾರೀ ಶಾಲೆಗಳಲ್ಲಿ ಈಗ ಉತ್ತಮ ಶಿಕ್ಷಕರಿದ್ದಾರೆ, ಸರ್ಕಾರ ಎಲ್ಲ ಸವಲತ್ತುಗಳನ್ನು ಅವರಿಗೆ ನೀಡುತ್ತಿದೆ, ಆದರೆ ಶಿಕ್ಷಣದ ಗುಣಮಟ್ಟ ಮಾತ್ರ ನಶಿಸುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.
- Arun Belly
- Updated on: Aug 22, 2025
- 11:42 am
Karnataka Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Karnataka Assembly Session Live: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 11 ರಿಂದಲೇ ಪ್ರಾರಂಭ ಆಗಿದೆ. ನಿತ್ಯ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಇಂದಿನ ಕಲಾಪ ಕೂಡ ಇದೀಗ ಆರಂಭಗೊಂಡಿದೆ. ವಿಧಾನಸಭೆ ಅಧಿವೇಶನದ ಕಲಾಪದ ನೇರ ಪ್ರಸಾರ ಇಲ್ಲಿದೆ ನೋಡಿ.
- Gangadhar Saboji
- Updated on: Aug 22, 2025
- 2:04 pm