Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Session

Assembly Session

ಕರ್ನಾಟಕದಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಮೂರು ಬಾರಿ ವಿಧಾನ ಮಂಡಲ ಅಧಿವೇಶನ ನಡೆಯುತ್ತದೆ. ಕೆಲವೊಂದು ಬಾರಿ ವಿಶೇಷ ಸಂದರ್ಭಗಳಲ್ಲಿ ವಿಶೇಷ ಅಧಿವೇಶನ ನಡೆಸಲಾಗುತ್ತದೆ. ಬಜೆಟ್​ ಅಧಿವೇಶನ, ಮುಂಗಾರು ಮತ್ತು ಚಳಿಗಾಲದ ಅಧಿವೇಶನ ಮುಖ್ಯವಾಗಿ ಪ್ರತಿ ವರ್ಷ ನಡೆಯುವಂಥವು. ಬಜೆಟ್​ ಅಧಿವೇಶನ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ನಡೆಯುತ್ತದೆ. ಇನ್ನು, ಚಳಿಗಾಲದ ಅಧಿವೇಶನ ಹೆಚ್ಚಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತದೆ. 2024ರ ಚಳಿಗಾಲದ ವಿಧಾನಮಂಡಲ ಅಧಿವೇಶನ ಡಿಸೆಂಬರ್ 9 ರಿಂದ ಆರಂಭವಾಗುತ್ತಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ​ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳು ಮತ್ತು ಆಡಳಿತದಲ್ಲಿ ತರಬೇಕಾದ ಸುಧಾರಣೆಗಳ ಬಗ್ಗೆ ಚರ್ಚೆಯಾಗುತ್ತದೆ. ಮಸೂದೆಗಳ ಮಂಡನೆ, ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುತ್ತದೆ. ಬಜೆಟ್​ ಅಧಿವೇಶನದಲ್ಲಿ ಕರ್ನಾಟಕದ ಆಯವ್ಯಯವನ್ನು ಮಂಡಿಸಲಾಗುತ್ತದೆ. ಬಜೆಟ್​ನಲ್ಲಿ ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗುತ್ತದೆ. ಮತ್ತು ಇಲಾಖೆಗಳಿಗೆ ಹಣ ನೀಡಲಾಗುತ್ತದೆ. ಕರ್ನಾಟಕ ವಿಧಾನಸಭೆ 224 ಶಾಸಕರ ಬಲ ಹೊಂದಿದೆ. ಕರ್ನಾಟಕ ವಿಧಾನ ಪರಿಷತ್ತು 75 ಸದಸ್ಯರ ಖಾಯಂ ಸಂಸ್ಥೆಯಾಗಿದೆ. ಅವರಲ್ಲಿ 64 ಮಂದಿಯನ್ನು ಚುನಾಯಿತರಾಗಿ ಆಯ್ಕೆ ಮಾಡಲಾಗುತ್ತದೆ. 11 ಮಂದಿಯನ್ನು ರಾಜ್ಯಪಾಲರು ನೇಮಿಸುತ್ತಾರೆ.

ಇನ್ನೂ ಹೆಚ್ಚು ಓದಿ

ಸಿಟಿ ರವಿಗೆ ಕಬ್ಬಿನ ಗದ್ದೆ ತೋರಿಸಿದ ಅಧಿಕಾರಿಗಳು ಕಾಮಖೆಡ್ಡಾ ಮತ್ತು ರಾಜೇಂದ್ರ ಕೊಲೆ ಯತ್ನದ ಸೂತ್ರಧಾರಿಯನ್ನು ಹಿಡಿಯುವರೇ?

ಕಾಮಖೆಡ್ಡಾ ಮತ್ತು ಮಂತ್ರಿ ಕೆನ್​ ರಾಜಣ್ಣ ಅವರ ಮಗ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರನ್ನು ಕೊಲೆ ಸಂಚಿನ ಹಿಂದಿರುವ ಸೂತ್ರಧಾರ ಒಬ್ಬರೇ ಎಂಬ ಆರೋಪದ ಬಗ್ಗೆ ಎರಡೂ ಸದನಗಳ ಪೀಠಾಸೀನ ಅಧಿಕಾರಿಗಳು ಮುಂದೆ ನಿಂತು ಸದನದ ಹಕ್ಕು ಮತ್ತು ಮರ್ಯಾದೆ ಎತ್ತಿ ಹಿಡಿಯುವ ಕೆಲಸ ಮಾಡಲೇಬೇಕಾಗಿದೆ.

ರಾಜಣ್ಣ ಪ್ರಸ್ತಾಪಿಸಿದ ಹನಿ ಟ್ರ್ಯಾಪ್ ಪ್ರಕರಣ ಕರ್ನಾಟಕ ಇತಿಹಾಸದ ಅತಿದೊಡ್ಡ ಲೈಂಗಿಕ ಹಗರಣ: ಸುರೇಶ್ ಗೌಡ

ಪೀಠಕ್ಕೆ ಆಗೌರವ ತೋರುವ ಕೆಲಸ ಬಿಜೆಪಿ ಶಾಸಕರಿಂದ ನಡೆದಿಲ್ಲ, ಅದರ ಬಗ್ಗೆ ತಮಗೆ ಆಪಾರವಾದ ಗೌರವವಿದೆ, ವಿಧಾನ ಸಭೆಯ ಮೇಲ್ಮನೆ ಮತ್ತು ಕೆಳಮನೆಯನ್ನು ಬಿಜೆಪಿ ಪ್ರಜಾಪ್ರಭುತ್ವದ ದೇಗುಲಗಳೆಂದು ಭಾವಿಸುತ್ತದೆ, ಸದನವನ್ನು ನಿರ್ವಹಿಸುವುದು ಕಷ್ಟದ ಕೆಲಸವೆಂದು ತಮಗೂ ಗೊತ್ತಿದೆ, ಆದರೆ ಸ್ಪೀಕರ್ ತಮ್ಮನ್ನು ಸಸ್ಪೆಂಡ್ ಮಾಡಿದ್ದು ರಾಜ್ಯ ಸಂಸದೀಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ ಎಂದು ಸುರೇಶ್ ಗೌಡ ಹೇಳಿದರು.

ಸಂವಿಧಾನದ ಆಶಯದಂತೆ ನಡೆದುಕೊಂಡಿದ್ದೇನೆ, ಇವತ್ತು ನಡೆದಿದ್ದು ದುರದೃಷ್ಟಕರ: ಯುಟಿ ಖಾದರ್, ಸ್ಪೀಕರ್

ಸ್ಪೀಕರ್ ಸರ್ಕಾರದ ಭಾಗವಾಗಿದ್ದಾರೆಂದು ಬಿಜೆಪಿ ಶಾಸಕರು ಅರೋಪಿಸುತ್ತಿದ್ದಾರೆ, ಅದನ್ನು ಜನ ತೀರ್ಮಾನಿಸುತ್ತಾರೆ, ವಿಷಯವನ್ನು ಜನರ ವಿವೇಚನೆಗೆ ಬಿಡುವುದೇ ಒಳಿತು, ಸಸ್ಪೆಂಡ್ ಆಗಿರುವ ಬಿಜೆಪಿ ಶಾಸಕರು ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಭಾಗಿವಹಿಸುತ್ತಾರೋ ಇಲ್ಲವೋ ಅನ್ನೋದು ಬೇರೆ ವಿಚಾರ, ಅಧಿವೇಶನ ಯಾವಾಗ ನಡೆಸಲಾಗುತ್ತದೆ ಅಂತ ಇನ್ನೂ ತೀರ್ಮಾನವಾಗಿಲ್ಲ ಎಂದು ಖಾದರ್ ಹೇಳಿದರು.

ಮುಸ್ಲಿಂ ಮೀಸಲಾತಿ ವಿಧೇಯಕ ಪಾಸು ಮಾಡಿಕೊಳ್ಳಲು ಬಿಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಲಾಗಿದೆ: ಯತ್ನಾಳ್

ಇವತ್ತು ಸದನದಲ್ಲಿ ನಡೆದ ಎಲ್ಲ ವಿದ್ಯಮಾನಗಳನ್ನು ಕೇಂದ್ರದ ನಾಯಕರ ಗಮನಕ್ಕೆ ತರಲಾಗಿದೆ, ಚೀಟಿ ವಿಷಯದ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಬಸನಗೌಡ ಯತ್ನಾಳ್, ಸರಕಾರದ ವಿರುದ್ಧ ಬಿಜೆಪಿಯ ಹೋರಾಟ ಮುಂದುವರಿಯುತ್ತದೆ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ನಾಯಕ ಅಶೋಕ ಸಭೆಯೊಂದನ್ನು ಕರೆದಿದ್ದಾರೆ, ಅದರಲ್ಲಿ ಭಾಗವಹಿಸಲು ಹೋಗುತ್ತಿರುವುದಾಗಿ ಹೇಳಿದರು.

ನನ್ನನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಅಂತ ಸಚಿವರೊಬ್ಬರು ಹೇಳಿದಾಗ ಸಿಎಂಗೆ ಅಶ್ಲೀಲ ಅನಿಸಲಿಲ್ಲವೇ? ಅಶೋಕ

ಸದನದ ಮಾನ ಉಳಿಸಲು ಬಿಜೆಪಿ ನ್ಯಾಯ ಕೇಳಿದ್ದೇವೆ, ನ್ಯಾಯಾಂಗ ತನಿಖೆ ನಡೆಯಲಿ, ತನಿಖೆಯನ್ನು ಸಿಬಿಐಗೆ ಒಪ್ಪಿಸಲಿ ಅಂತ ಅಂತ ಹೋರಾಟ ಮಾಡಿದ್ದು ಕೇವಲ ಸದನದ ಗೌರವ ಉಳಿಸೋದಿಕ್ಕೆ, ಅಸಲಿಗೆ ಆಡಳಿತ ಪಕ್ಷವೇ ತನ್ನ ಸಚಿವನ ಬೆನ್ನಿಗೆ ನಿಲ್ಲಬೇಕಿತ್ತು, ಅದ್ಯಾವ ಮುಖ ಇಟ್ಕೊಂಡು ಇವರು ಸದನದ ಕಲಾಪಗಳಿಗೆ ಬರುತ್ತಾರೆ ಎಂದು ಆರ್ ಅಶೋಕ ಖಾರವಾಗಿ ಪ್ರಶ್ನಿಸಿದರು.

Karnataka Budget session: ಸಭಾಧ್ಯಕ್ಷನ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಿದ ಸ್ಪೀಕರ್ ಯುಟಿ ಖಾದರ್

ಸಭಾಧ್ಯಕ್ಷ ಖಾದರ್ ಸದಸ್ಯರನ್ನು ಸಸ್ಪೆಂಡ್ ಮಾಡುವ ಮೊದಲು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ಬಿಜೆಪಿ ಶಾಸಕರು ತಮ್ಮ ವರ್ತನೆಯಿಂದ ಸ್ಪೀಕರ್ ಸ್ಥಾನಕ್ಕೆ ಅಗೌರವ ತಂದಿದ್ದಾರೆ, ಅವರ ವರ್ತನೆಯನ್ನು ಸದನ ಕ್ಷಮಿಸುವುದು ಸಾಧ್ಯವಿಲ್ಲ, ಅವರನ್ನು ಸಸ್ಪೆಂಡ್ ಮಾಡಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ನಂತರ ಖಾದರ್ ಶಾಸಕರ ಹೆಸರುಗಳನ್ನು ಓದಿ ವಜಾ ಮಾಡಿರುವುದಾಗಿ ಘೋಷಿಸುತ್ತಾರೆ.

Karnataka Assembly Session: ಕಾಂಗ್ರೆಸ್ ಎಮ್ಮೆಲ್ಸಿ ಪುಟ್ಟಣ್ಣರಿಂದ ಆಕ್ಷೇಪಾರ್ಹ ಪದ ಬಳಕೆ, ವಿಪಕ್ಷ ಸದಸ್ಯರಿಂದ ಗಲಾಟೆ

ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರಾದರೂ ಸಾಧ್ಯವಾಗಲ್ಲ. ಪುಟ್ಟಣ್ಣ ಅವರು ಬಳಸಿದ ಪದವನ್ನು ಕಡತದಿಂದ ತೆಗೆದುಹಾಕಿರುವುದಾಗಿ ಹೊರಟ್ಟಿ ಅವರು ಹೇಳುತ್ತಾರೆ, ಅದರೆ ವಿಪಕ್ಷಗಳ ಸದಸ್ಯರು ಮಾತ್ರ ಸುಮ್ಮನಾಗಲ್ಲ. ಅಸಲಿಗೆ ಸಿದ್ದರಾಮಯ್ಯ ಮತ್ತ ಶಿವಕುಮಾರ್ ಪರಿಷತ್​ನೊಳಗೆ ಬಂದ ಬಳಿಕ ಗಲಾಟೆ ಮತ್ತಷ್ಟು ಜೋರು ಹಿಡಿಯುತ್ತದೆ.

Karnataka Budget Session: ವಿಧೇಯಕಗಳನ್ನು ಧ್ವನಿಮತಕ್ಕೆ ಹಾಕಿದಾಗ ಸದನದಲ್ಲಿ ಕೋಲಾಹಲ

ಸದನದ ಮಾರ್ಷಲ್ ಗಳು ಸ್ಪೀಕರ್ ಸುತ್ತ ನಿಂತರೆ ಅಡಳಿತ ಪಕ್ಷದ ಶಾಸಕರು ಮತ್ತು ಮಂತ್ರಿಗಳು ಸಿಎಂ ಅವರನ್ನು ಘೇರಾಯಿಸಿ ಕೋಟೆಯಂಥ ಸನ್ನಿವೇಶ ಸೃಷ್ಟಿ ಮಾಡುತ್ತಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರ ನಡುವೆ ಮಾತಿನ ಚಕಮಕಿಯೂ ನಡೆಯುತ್ತದೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವೇಶದಲ್ಲಿ ಮಾತಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು.

Karnataka Budget Session: ಬಜೆಟ್ ಮೇಲಿನ ಚರ್ಚೆಗಳಿಗೆ ಉತ್ತರಿಸುವಾಗ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ

ತಮ್ಮ ಉತ್ತರವನ್ನು ಸಿದ್ದರಾಮಯ್ಯ ಕುಳಿತು ಓದುತ್ತಿದ್ದರೆ, ಹನಿ ಟ್ರ್ಯಾಪ್ ಕೆಲಸಗಳಿಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ ಹೇಳಿ ಎಂದು ವಿರೋಧ ಪಕ್ಷದ ಶಾಸಕರು ಪ್ರಶ್ನಿಸುತ್ತಾರೆ. ತಮ್ಮ ಉತ್ತರವನ್ನು ಮುಂದುವರಿಸುವ ಸಿಎಂ, ಬಜೆಟ್ ಮೇಲಿನ ಚರ್ಚೆಯಲ್ಲಿ 80 ಸದಸ್ಯರು ಭಾಗಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಸದನದ ಹೊರಗೂ ಬಜೆಟ್​ಗೆ ವಿವಿಧ ಕ್ಷೇತ್ರಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳುತ್ತಾರೆ.

ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!

‘‘ಹನಿಟ್ರ್ಯಾಪ್ ಸರ್ಕಾರ, ಹನಿಟ್ರ್ಯಾಪ್ ಸರ್ಕಾರ’’ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಪಕ್ಷ ನಾಯಕರು ಮುಸ್ಲಿಂ ಮೀಸಲಾತಿ ವಿಧೇಯಕದ ಪ್ರತಿಗಳನ್ನು ಹರಿದು ಕಾಗದ ಚೂರುಗಳನ್ನು ಸ್ಪೀಕರ್ ಮೇಲೆ ಎಸೆದ ಕರಾಳ ಇತಿಹಾಸಕ್ಕೆ ಕರ್ನಾಟಕ ವಿಧಾನಸಭೆ ಶುಕ್ರವಾರ ಸಾಕ್ಷಿಯಾಯಿತು. ವಿಧಾನಸಭೆ ಹೈಡ್ರಾಮಾದ ವಿಡಿಯೋ ಇಲ್ಲಿದೆ ನೋಡಿ.

ಟಿವಿ9 ಎಜುಕೇಶನ್ ಎಕ್ಸ್​​ಪೋ, ರೋಚಕ ಡ್ರೋನ್ ದೃಶ್ಯ
ಟಿವಿ9 ಎಜುಕೇಶನ್ ಎಕ್ಸ್​​ಪೋ, ರೋಚಕ ಡ್ರೋನ್ ದೃಶ್ಯ
ರಾಜಿನಾಮೆ ನೀಡಿ ಚುನಾವಣೆಗೆ ಬಾ: ವಿಜಯೇಂದ್ರಗೆ ಯತ್ನಾಳ್​ ಸವಾಲು
ರಾಜಿನಾಮೆ ನೀಡಿ ಚುನಾವಣೆಗೆ ಬಾ: ವಿಜಯೇಂದ್ರಗೆ ಯತ್ನಾಳ್​ ಸವಾಲು
‘ವಿದ್ಯಾಪತಿ’ ಸಿನಿಮಾಕ್ಕೆ ಭಿನ್ನವಾಗಿ ಆಹ್ವಾನ ನೀಡಿದ ಡಾಲಿ ಧನಂಜಯ್
‘ವಿದ್ಯಾಪತಿ’ ಸಿನಿಮಾಕ್ಕೆ ಭಿನ್ನವಾಗಿ ಆಹ್ವಾನ ನೀಡಿದ ಡಾಲಿ ಧನಂಜಯ್
Jasprit Bumrah: ಜಸ್​ಪ್ರೀತ್ ಬುಮ್ರಾ ಎಂಟ್ರಿ: RCB ಗೆ ಟೆನ್ಶನ್ ಶುರು
Jasprit Bumrah: ಜಸ್​ಪ್ರೀತ್ ಬುಮ್ರಾ ಎಂಟ್ರಿ: RCB ಗೆ ಟೆನ್ಶನ್ ಶುರು
ರಾಮನವಮಿ ದಿನವೇ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಸೇತುವೆ ಉದ್ಘಾಟಿಸಿದ ಮೋದಿ
ರಾಮನವಮಿ ದಿನವೇ ರಾಮೇಶ್ವರಂನಲ್ಲಿ ಪಂಬನ್ ರೈಲ್ವೆ ಸೇತುವೆ ಉದ್ಘಾಟಿಸಿದ ಮೋದಿ
ಕಾರಿನ ಟಾಪ್ ಮೇಲೆ ಕುಳಿತು ಹುಚ್ಚಾಟ: ಸ್ವಲ್ಪ ಹೆಚ್ಚು ಕಡಿಮೆ ಆದ್ರು ಯಮನಪಾದ!
ಕಾರಿನ ಟಾಪ್ ಮೇಲೆ ಕುಳಿತು ಹುಚ್ಚಾಟ: ಸ್ವಲ್ಪ ಹೆಚ್ಚು ಕಡಿಮೆ ಆದ್ರು ಯಮನಪಾದ!
ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಅಯೋಧ್ಯೆಯಲ್ಲಿ ಬಾಲ ರಾಮನ ಹಣೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ
ಬೇಕರಿಗೆ ಬಂದಿದ್ದ ಬಾಲಕಿಗೆ ಚಾಕೊಲೇಟ್ ಕೊಟ್ಟು ಲೈಂಗಿಕ ಕಿರುಕುಳ
2,300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಮೋದಿ ಭೇಟಿ
2,300 ವರ್ಷ ಹಳೆಯ ಬೋಧಿ ವೃಕ್ಷವಿರುವ ಬೌದ್ಧ ದೇವಾಲಯಕ್ಕೆ ಮೋದಿ ಭೇಟಿ
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಪರವಾಗಿ ಹಾಲಿ ಕಾಂಗ್ರೆಸ್ ಅಧ್ಯಕ್ಷ ಪ್ರಾರ್ಥನೆ
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರ ಪರವಾಗಿ ಹಾಲಿ ಕಾಂಗ್ರೆಸ್ ಅಧ್ಯಕ್ಷ ಪ್ರಾರ್ಥನೆ