ತುಂಬುತೋಳಿನ ಶರ್ಟ್ ಧರಿಸಿ ಪಿಎಸ್ ಐ ಪರೀಕ್ಷೆಗಳ ಬಂದ ಅಭ್ಯರ್ಥಿಗಳ ಅವಸ್ಥೆ ಏನಾಯ್ತು ಗೊತ್ತಾ? ವಿಡಿಯೋ ನೋಡಿ!

Updated on: Jan 23, 2024 | 2:19 PM

ಹಾಗೆಯೇ, ಮಹಿಳಾ ಕ್ಯಾಂಡಿಡೇಟ್ ಗಳು ಆಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರು. ದುಬಾರಿ ಆಭರಣಗಳನ್ನು ಧರಿಸಿದ್ದ ಕೆಲವರು ಆಕ್ಷೇಪಣೆ ಸಲ್ಲಿಸಿದರಾದರೂ ಪ್ರಾಧಿಕಾರ ಅಧಿಕಾರಿಗಳ ಮಾತನ್ನು ಅಂಗೀಕರಿಸಲೇಬೇಕಾಯ್ತು, ಕೆಲ ಮಹಿಳೆಯರು ಪರೀಕ್ಷೆ ಬರೆಯದೆ ವಾಪಸ್ಸು ಹೋದರೆಂಬ ಮಾಹಿತಿಯೂ ಇದೆ.

ಬೆಂಗಳೂರು: ಇದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ್ದೇನೂ (Karnataka Examination Authority) ತಪ್ಪಿಲ್ಲ ಅನಿಸುತ್ತೆ. ಪರೀಕ್ಷಾರ್ಥಿಗಳಿಗೆ (candidates) ನೀಡಿದ ಸೂಚನೆಗಳಲ್ಲಿ (instructions) ಪೂರ್ತಿತೋಳಿನ ಶರ್ಟ್ ಧರಿಸಿ ಬರಕೂಡದು ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಬಗೆಯ ಅಭರಣ ಧರಿಸಿ ಬರಬಾರದು ಅಂತ ಸ್ಪಷ್ಟವಾಗಿ ಹೇಳಲಾಗಿದೆ. ಆದರೂ, ಇಂದು ಬೆಂಗಳೂರಲ್ಲಿ ನಡೆದ 545 ಪಿಎಸ್ ಐ ನೇಮಕಾತಿ ಮರುಪರೀಕ್ಷೆಯಲ್ಲಿ ಕೆಲವರು ಉದ್ದತೋಳಿನ ಶರ್ಟ್ ಮತ್ತು ಮಹಿಳೆಯರು ಆಭರಣಗಳನ್ನು ಧರಿಸಿ ಬಂದಿದ್ದರು. ಪ್ರಾಧಿಕಾರದ ಸಿಬ್ಬಂದಿ ಫುಲ್ ಸ್ಲೀವ್ಸ್ ಧರಿಸಿ ಬಂದಿದ್ದ ಅಭ್ಯರ್ಥಿಗಳ ಶರ್ಟ್​​ ತೋಳುಗಳನ್ನು ಕತ್ತರಿಸಿ ಅರ್ಧತೋಳು ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನೌಕರಿಗಾಗಿ ಹಂಬಲಿಸುತ್ತಿರುವ ಯುವಕರು ಅನಿವಾರ್ಯವಾಗಿ ತಮ್ಮ ಅಂಗಿಗಳ ತೋಳಿನ ಬಲಿದಾನಕ್ಕೆ ಒಪ್ಪಲೇಬೇಕಾಯಿತು. ಹಾಗೆಯೇ, ಮಹಿಳಾ ಕ್ಯಾಂಡಿಡೇಟ್ ಗಳು ಆಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರು. ದುಬಾರಿ ಆಭರಣಗಳನ್ನು ಧರಿಸಿದ್ದ ಕೆಲವರು ಆಕ್ಷೇಪಣೆ ಸಲ್ಲಿಸಿದರಾದರೂ ಪ್ರಾಧಿಕಾರ ಅಧಿಕಾರಿಗಳ ಮಾತನ್ನು ಅಂಗೀಕರಿಸಲೇಬೇಕಾಯ್ತು, ಕೆಲ ಮಹಿಳೆಯರು ಪರೀಕ್ಷೆ ಬರೆಯದೆ ವಾಪಸ್ಸು ಹೋದರೆಂಬ ಮಾಹಿತಿಯೂ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 23, 2024 01:45 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More