ಎಟಿಎಂಗಳಲ್ಲಿ ಹಣ ತುಂಬುತ್ತಿದ್ದ ಔಟ್​ಸೌರ್ಸಿಂಗ್ ಸಿಬ್ಬಂದಿಯೇ ದುಡ್ಡು ಕಳುವು ಮಾಡಿ ಸಿಕ್ಕಿಬಿದ್ದ!

Updated on: Dec 03, 2024 | 8:01 PM

ಪ್ರಾಯಶಃ ಇತ್ತೀಚಿಗೆ ಮದುವೆಯಾಗಿರುವ ದೇಸಾಯಿ ಕಳುವು ಮಾಡಿದ ಹಣದಿಂದ ಹೆಂಡತಿಗೆ ಎರಡು ಚಿನ್ನದ ಸರಗಳನ್ನು ಖರೀದಿಸಿದ್ದಾನೆ. ಅವನಿಂದ ₹ 7.3 ಲಕ್ಷ ಹಣವನ್ನು ರಿಕವರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾರ್ಟಿನ್ ಹೇಳುತ್ತಾರೆ. ಚಿನ್ನ ಖರೀದಿಯಲ್ಲದೆ ದುಂದು ವೆಚ್ಚದ ಮೂಲಕವೂ ಅವನು ಹಣ ಖರ್ಚು ಮಾಡಿದ್ದಾನೆ ಎಂದು ಅವರು ಹೇಳುತ್ತಾರೆ.

ಬೆಳಗಾವಿ: ಬ್ಯಾಂಕುಗಳ ಎಟಿಎಸ್ ಕಿಯಾಸ್ಕ್​ಗಳಲ್ಲಿ ಹಣ ತುಂಬುವ ಕೆಲಸ ಮಾಡುವ ಔಟ್​ಸೌರ್ಸಿಂಗ್ ಸಿಬ್ಬಂದಿಯೊಬ್ಬ ತಾನು ದುಡ್ಡು ಜಮಾ ಮಾಡಿದ ಹೆಚ್​​ಡಿಎಫ್​ಸಿ ಬ್ಯಾಂಕಿನ ಎಟಿಎಂ ಒಂದರಿಂದ ₹ 8.65 ಲಕ್ಷ ಕಳುವು ಮಾಡಿ ಸಿಕ್ಕಿಬಿದ್ದಿದ್ದಾನೆ. ಕಳ್ಳ, ಕಳುವು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಬೆಳಗಾವಿಯ ಪೊಲೀಸ್ ಕಮೀಶನರ್ ಅಡಾ ಮಾರ್ಟಿನ್ ಮಾರ್ಬನಿಯಾಂಗ್ ನೀಡಿದ್ದಾರೆ. ಕೇವಲ 23-ವರ್ಷ ವಯಸ್ಸಿನ ಕಳ್ಳ ಕೃಷ್ಣ ಸುರೇಶ್ ದೇಸಾಯಿ ನಗರದ ಜ್ಯೋತಿ ನಗರದ ನಿವಾಸಿ. ಇದಕ್ಕೆ ಮೊದಲು ದೇಸಾಯಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಅಂದರೆ ಅವನು ಹ್ಯಾಬಿಚುಯಲ್ ಅಫೆಂಡರ್ ಅಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More