ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ

Edited By: ವಿವೇಕ ಬಿರಾದಾರ

Updated on: Apr 15, 2025 | 9:30 PM

ಚಿಕ್ಕಮಗಳೂರಿನ ಶೆಟ್ಟಿಕೊಪ್ಪ ಗ್ರಾಮದ ಜೇಮ್ಸ್ ಮತ್ತು ಜೆಸ್ಸಿ ದಂಪತಿಗಳು ಗೃಹಲಕ್ಷಮಿ ಯೋಜನೆಯ 13 ತಿಂಗಳ ಹಣವನ್ನು ಬಳಸಿ ತಮ್ಮ ತೋಟದಲ್ಲಿ ಬೋರ್‌ವೆಲ್ ಕೊರೆಸಿದ್ದಾರೆ. 3 ಇಂಚು ನೀರು ಚಿಮ್ಮಿದೆ. ಕಳೆದ ವರ್ಷದ ಎರಡು ವಿಫಲ ಪ್ರಯತ್ನಗಳ ನಂತರ ಈ ಯಶಸ್ಸು ಸಾಧ್ಯವಾಗಿದೆ. ಈ ದಂಪತಿಗಳು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಅವರನ್ನು ಸನ್ಮಾನಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪ ಗ್ರಾಮದ ದಂಪತಿ ತಮ್ಮ ತೋಟದಲ್ಲಿ ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್​ ಕೊರೆಸಿದ್ದು, ಮೂರು ಇಂಚು ನೀರು ಚಿಮ್ಮಿದೆ. ಜೇಮ್ಸ್ ಮತ್ತು ಜೆಸ್ಸಿ ದಂಪತಿ 13 ತಿಂಗಳ ಹಣ 52 ಸಾವಿರ ರೂ. ಗೃಹ ಲಕ್ಷ್ಮೀ ಹಣದಲ್ಲಿ ಬೋರ್​ವೆಲ್​ ಕೊರೆಸಿದ್ದಾರೆ. ಕಳೆದ ವರ್ಷ ಎರಡು ಬೋರ್ ತೆಗೆಸಿದ್ದರು. ಆದರೆ, ಫೇಲ್ ಆಗಿದ್ದವು. ಅಮ್ಮ ಮತ್ತು ಪತ್ನಿ ಇಬ್ಬರ 13 ತಿಂಗಳ ಹಣ ಹಣ ಒಂದುಗೂಡಿಸಿ ಜೇಮ್ಸ್ ಬೋರ್ ತೆಗೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಂಪತಿ ಅಭಿನಂದನೆ ಸಲ್ಲಿಸಿದ್ದಾರೆ. ಎಬ್​ಆರ್ ಪುರ ತಾಲೂಕು ಕಚೇರಿಯಲ್ಲಿ ದಂಪತಿಗೆ ಅಧಿಕಾರಿಗಳು ಸನ್ಮಾನ ಮಾಡಿದ್ದಾರೆ.

Follow Us
Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More