ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೀಗೆ ಮಾಡುತ್ತಿದ್ದರು. ತಮ್ಮ ಸಂಪುಟದ ಸಹೋದ್ಯೋಗಿಗಳನ್ನು, ಶಾಸಕರನ್ನು ಜೊತೆಗೂಡಿಸಿಕೊಂಡು ಯಾವುದಾದರೂ ಹೆಸರುವಾಸಿ ಹೋಟೆಲ್ ಗೆ ನುಗ್ಗಿ ಅಲ್ಲಿನ ಹೆಚ್ಚು ಜನಪ್ರಿಯ ತಿಂಡಿಗಳನ್ನು ಅವರು ಸವಿಯುತ್ತಿದ್ದರು. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕೂಡ ಇಂದು ಸಚಿವರಾದ ಆರ್ ಅಶೋಕ (R Ashoka) ಮತ್ತು ಬಿಸಿ ನಾಗೇಶ (BC Nagesh) ಅವರೊಂದಿಗೆ ಬೆಳ್ಳಂಬೆಳಗ್ಗೆಯೇ ನಗರದ ಖ್ಯಾತ ಹೋಟೆಲೊಂದರಲ್ಲಿ ಮಸಾಲೆ ದೋಸೆ ತಿಂದರು. ವಿಐಪಿಗಳು ಹೋಟೆಲಿಗೆ ಬಂದಾಗ ಅದರ ಮಾಲೀಕ ಬಹಳ ಸಂತೋಷ ಪಡುವುದೇನೋ ನಿಜ, ಆದರೆ; ಅವರನ್ನು ನೋಡಲು ಆಗಮಿಸುವ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ