Mysore Dasara: ನಟಿ ಮತ್ತು ಪಕ್ಷದ ಕಾರ್ಯಕರ್ತೆ ಭಾವನಾರ ನೃತ್ಯಕಲೆ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಂದತುಂದಿಲ!

ಅರುಣ್​ ಕುಮಾರ್​ ಬೆಳ್ಳಿ

Updated on: Oct 16, 2023 | 10:48 AM

Mysore Dasara: ಪ್ರೇಕ್ಷಕರ ನಡುವೆ ಕೂತು ಭಾವನಾ ಅವರ ನೃತ್ಯವನ್ನು ಆಸ್ವಾದಿಸಿದ ಸಿದ್ದರಾಮಯ್ಯ ಅದು ಮುಗಿದ ವೇದಿಕೆ ಮೇಲೆ ಹೋಗಿ ನಟಿಯನ್ನು ಅಭಿನಂದಿಸಿದರು. ಅವರೊಬ್ಬ ಪರಿಣಿತ ನೃತ್ಯಗಾತಿ ಅಂತ ಪ್ರಾಯಶಃ ಮುಖ್ಯಮಂತ್ರಿಯವರಿಗೆ ಗೊತ್ತಿರಲಿಲ್ಲ. ಅವರ ಕಲೆಯನ್ನು ಸಿದ್ದರಾಮಯ್ಯ ಹೊಗಳುವಾಗ ಭಾವನಾ ನಾಚುತ್ತಾ, ಸಂಕೋಚದಿಂದ ಪ್ರಶಂಸೆ ಸ್ವೀಕರಿಸಿದರು.

ಮೈಸೂರು: ಬರಗಾಲದ ಸಂಕಷ್ಟದ ನಡುವೆ ನಾಡಹಬ್ಬ ದಸರಾ ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಿ ಅದ್ದೂರಿಯಿಂದ ಆರಂಭಗೊಂಡಿದೆ. ನಿನ್ನೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ್ದ್ದರು. ಖ್ಯಾತ ನಟಿ ಭಾವನಾ (Bhavana) ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ಸೇರಿದ್ದು ಕನ್ನಡಿಗರಿಗೆ ಗೊತ್ತಿದೆ. ರವಿವಾರದ ಕಾರ್ಯಕ್ರಮದಲ್ಲಿ ಅವರು ಭರತನಾಟ್ಯದ (Bharatanatyam) ಪ್ರದರ್ಶನ ನೀಡಿ ವೀಕ್ಷಕರ ಮನಸೂರೆಗೊಂಡರು. ಭಾವನಾ ಅತ್ಯುತ್ತಮ ನಟಿಯ ಜೊತೆ ಅಸಾಧಾರಣ ನೃತ್ಯಪಟವೂ ಹೌದು. ಪ್ರೇಕ್ಷಕರ ನಡುವೆ ಕೂತು ಭಾವನಾ ಅವರ ನೃತ್ಯವನ್ನು ಆಸ್ವಾದಿಸಿದ ಸಿದ್ದರಾಮಯ್ಯ ಅದು ಮುಗಿದ ವೇದಿಕೆ ಮೇಲೆ ಹೋಗಿ ನಟಿಯನ್ನು ಅಭಿನಂದಿಸಿದರು. ಅವರೊಬ್ಬ ಪರಿಣಿತ ನೃತ್ಯಗಾತಿ ಅಂತ ಪ್ರಾಯಶಃ ಮುಖ್ಯಮಂತ್ರಿಯವರಿಗೆ ಗೊತ್ತಿರಲಿಲ್ಲ. ಅವರ ಕಲೆಯನ್ನು ಸಿದ್ದರಾಮಯ್ಯ ಹೊಗಳುವಾಗ ಭಾವನಾ ನಾಚುತ್ತಾ, ಸಂಕೋಚದಿಂದ ಪ್ರಶಂಸೆ ಸ್ವೀಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.