AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ ದಸರಾ 2026

Navratri
Navratri Navratri
ನವರಾತ್ರಿ

ಮಂತ್ರ

ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಅರ್ಥ: ಪಂಚಭೂತಗಳಾದ ಅಗ್ನಿ, ಪೃಥ್ವಿ, ವಾಯು, ಜಲ, ಆಕಾಶ ಇವೆಲ್ಲವೂಗಳಿಂದ ಸೃಷ್ಟಿಯಾಗಿರುವ ಎಲ್ಲ ಜೀವಗಳಲ್ಲೂ ಶಕ್ತಿ ರೂಪದಲ್ಲಿ ಇರುವಂಥ ದೇವಿಯೇ ನಿನಗೆ ನಮಸ್ಕಾರ ನಮಸ್ಕಾರ ನಮಸ್ಕಾರ ನಮೋ ನಮಃ

ದಸರಾ 2026

ತಾಜಾ ಸುದ್ದಿಗಳು

Mysuru Dasara And Dk Shivakumar
ದಸರಾಗೆ ದಕ್ಷಿಣ ಭಾರತದ ಎಲ್ಲ ಸಿಎಂಗಳಿಗೆ ಆಹ್ವಾನ: ಅದ್ಧೂರಿ ಆಚರಣೆಗೆ ಪ್ಲಾನ್
Dasara Elephants (1)
ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಶ್ರೀಕಂಠನಿಗೆ ಮೊದಲ ಸ್ಥಾನ
Mysuru Dasara 2026: Srirama Elephant Panics During Gajapayana Arrival at Mysore Palace
ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ
Gaja Pooja
ಮೈಸೂರು ದಸರಾ 2026: ಅರಮನೆಗೆ ಬಂದ ಗಜಪಡೆಗೆ ಭವ್ಯ ಸ್ವಾಗತ
Dasara Gaja Pade
ಇಂದು ಅರಮನೆ ಪ್ರವೇಶಿಸಲಿರುವ ಗಜಪಡೆ, ಅರಣ್ಯ ಭವನದಲ್ಲಿ ವಿಶೇಷ ಪೂಜೆ
Mysuru Dasara 2026: Gajapayana Begins as Captain Abhimanyu Receives Emotional Farewell
ದಸರಾ ಗಜಪಯಣಕ್ಕೆ ಚಾಲನೆ: ಅಭಿಮನ್ಯುಗೆ ಭಾವುಕ ಬೀಳ್ಕೊಡುಗೆಯ ಕ್ಷಣಗಳು
Abhimanyu Elephant
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
Mysuru
ಅಭಿಮನ್ಯುಗೆ ವಿಶ್ರಾಂತಿ; ಈ ಬಾರಿ ಅಂಬಾರಿ ಹೊರುವ ಆನೆ ಯಾವುದು?
Dasara Elephants
ಮೈಸೂರು ದಸರಾ 2026: ಗಜಪಡೆಗೆ ಸಚಿವ ಯತೀಂದ್ರರಿಂದ ಚಾಲನೆ
Mysuru Kambala
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
Eshwar-khandre Letter To Forest Minister Ramalinga reddy for royal farewell for abhimanyu elephant In Mysuru Dasara
ಅಭಿಮನ್ಯು ಆನೆಗೆ ಗೌರವಯುತ ಬೀಳ್ಕೊಡಿಗೆ ನೀಡುವಂತೆ ಈಶ್ವರ್ ಖಂಡ್ರೆ ಪತ್ರ
Mysuru Dasara 2026: Abhimanyu Out, 12 Elephants Finalized for Jamboo Savari
ಮೈಸೂರು ದಸರಾ: ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ವಿದಾಯ

ನವರಾತ್ರಿ ವಿಶೇಷ
ಶರದ್ ಋತುವಿನಲ್ಲಿ ಒಂಬತ್ತು ದಿನ ಜಗನ್ಮಾತೆಯ ಸ್ವರೂಪವನ್ನು ಆರಾಧಿಸುವುದೇ ಶರನ್ನವರಾತ್ರಿ
ನವರಾತ್ರಿ ಅಥವಾ ಶರನ್ನವರಾತ್ರಿ ಎಂದು ಕರೆಯುವ ಪರ್ವ ಕಾಲದಲ್ಲಿ ಆ ಜಗನ್ಮಾತೆಯ ಆರಾಧನೆಗೆ ಪ್ರಾಶಸ್ತ್ಯ. ಬಹಳ ಮಂದಿ ಈ ಸಮಯದಲ್ಲಿ ವ್ರತಾಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಉಪವಾಸವಿದ್ದು, ಆ ಜಗನ್ಮಾತೆಯ ಆರಾಧನೆ ಮಾಡುತ್ತಾರೆ. . ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರತಿಪದ (ಪಾಡ್ಯ)ದಿಂದ ಆರಂಭ ಆಗುವ ಈ ಪೂಜೆಯು ನವಮಿ ಪರ್ಯಂತ ಮಾಡಲಾಗುತ್ತದೆ. ಹೀಗೆ ಪ್ರತೀ ದಿನ ದೇವಿಯನ್ನು ಒಂದೊಂದು ವಿಶಿಷ್ಟ ಸ್ವರೂಪದಲ್ಲಿ ಆರಾಧನೆ ನಡೆಸಲಾಗುತ್ತದೆ. ಇದು ಒಂಬತ್ತು ದಿನಗಳ ಸುದೀರ್ಘ ಕೈಂಕರ್ಯ. ಶರದ್ ಋತುವಿನಲ್ಲಿ ಆರಂಭದ ಒಂಬತ್ತು ದಿನಗಳು ಈ ಆಚರಣೆ ಮಾಡುವದಿಂದಾಗಿ ‘ಶರನ್ನವರಾತ್ರಿ’ ಎಂದು ಸಹ ಹೇಳುತ್ತಾರೆ.

ಒಂಬತ್ತು ದಿನಗಳಲ್ಲಿ ಆಕೆಯ ಸ್ವರೂಪ ಹೀಗಿರುತ್ತದೆ:

ಪ್ರಥಮಮ್ ಶೈಲ ಪುತ್ರಿ
ದ್ವಿತೀಯಂ ಬ್ರಹ್ಮಚಾರಿಣಿ
ತೃತೀಯಂ ಚಂದ್ರ ಘಂಟಾ
ಚತುರ್ಥಿಕಮ್ ಕೂಶ್ಮಾಂಡಾ
ಪಂಚಮಮ್ ಸ್ಕಂದ ಮಾತಾ
ಷಷ್ಟಮ್ ಕಾತ್ಯಾಯಿನಿ
ಸಪ್ತಮಮ್ ಕಾಳ ರಾತ್ರಿ
ಅಷ್ಟಮಮ್ ಮಹಾ ಗೌರಿ
ನವಮಮ್ ಸಿದ್ಧಿಧಾತ್ರಿ

ಮೊದಲ ದಿನ ಆ ಜಗನ್ಮಾತೆಯ ಸ್ವರೂಪವನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ. ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರ ಘಂಟಾ, ನಾಲ್ಕನೇ ದಿನ ಕೂಶ್ಮಾಂಡಾ, ಐದನೇ ದಿನ ಸ್ಕಂದ ಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಳ ರಾತ್ರಿ, ಎಂಟನೇ ದಿನ ಮಹಾ ಗೌರಿ ಹಾಗೂ ಒಂಬತ್ತನೆ ದಿನ ಸಿದ್ಧಿಧಾತ್ರಿ ಸ್ವರೂಪದಲ್ಲಿ ಆರಾಧನೆ ಮಾಡಲಾಗುತ್ತದೆ.

ಲೋಕಕಂಟಕರಾದ ರಾಕ್ಷಸರ ಸಂಹಾರವನ್ನು ಮಾಡಿ, ಜಗತ್ತಿನ ಉದ್ಧಾರ ಮಾಡಿದ ಜಗಜ್ಜನನಿಯ ನವವಿಧ ಸ್ವರೂಪವನ್ನು ಆರಾಧಿಸುತ್ತೇವೆ.

ಪೂಜಾ ವಿಧಾನ
ಸ್ನಾನ ಮತ್ತು ಆ ನಂತರ್ರದ ನಿತ್ಯ ಶುದ್ಧಿ ಆದ ಮೇಲೆ ಮನೆಯ ಈಶಾನ್ಯ ಭಾಗದಲ್ಲಿ ಅಥವಾ ದೇವರ ಕೋಣೆಯಲ್ಲಿ ರಂಗೋಲಿಯಲ್ಲಿ ಅಷ್ಟದಳವನ್ನು ಬರೆದು, ಅದರ ಮೇಲೆ ಕಲಶ ಸ್ಥಾಪನೆ ಮಾಡಬೇಕು. ಆ ಕಲಶದಲ್ಲಿ ಗಂಧ ಸಹಿತ ಶುದ್ಧ ನೀರನ್ನು ತುಂಬಿಸಿ, ನವರಾತ್ರಿಯ ದಿನಗಳಂದು ಆಯಾ ದೇವಿಯ ಸ್ವರೂಪವನ್ನು ಆರಾಧನೆ ಮಾಡಬೇಕು.