AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ ದಸರಾ 2025

Navratri
Navratri Navratri
ನವರಾತ್ರಿ

ಮಂತ್ರ

ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಅರ್ಥ: ಪಂಚಭೂತಗಳಾದ ಅಗ್ನಿ, ಪೃಥ್ವಿ, ವಾಯು, ಜಲ, ಆಕಾಶ ಇವೆಲ್ಲವೂಗಳಿಂದ ಸೃಷ್ಟಿಯಾಗಿರುವ ಎಲ್ಲ ಜೀವಗಳಲ್ಲೂ ಶಕ್ತಿ ರೂಪದಲ್ಲಿ ಇರುವಂಥ ದೇವಿಯೇ ನಿನಗೆ ನಮಸ್ಕಾರ ನಮಸ್ಕಾರ ನಮಸ್ಕಾರ ನಮೋ ನಮಃ

ದಸರಾ 2025

ತಾಜಾ ಸುದ್ದಿಗಳು

Mysuru Dasara 2026: Inauguration on October 11, Jumbo Savari on October 21
ಮೈಸೂರು ದಸರಾ ಮಹೋತ್ಸವ: ಅ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂಸವಾರಿ
Mysuru Dasara 2026: First Time Ever ECG and Ultrasound Scanning Done for Dasara Elephants Selection Process
ದಸರಾ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಗಜಪಡೆಗೆ ಇಸಿಜಿ ಟೆಸ್ಟ್!
Abhimanyu Tusk Broken
ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ!
Kerala: Man Found Dead Under Suspicious Circumstances in Rented Room
ಬಲೂನ್ ಮಾರುವ ಬಾಲಕಿ ಅತ್ಯಾಚಾರ ಕೊಲೆ: ಕೀಚಕನಿಗೆ ಪೊಲೀಸ್ ಗುಂಡೇಟು
10 year old girl dead found In Came to Mysuru Dasara For balloon sale
ಮೈಸೂರು ದಸರೆಗೆ ಬಲೂನ್‌ ಮಾರಲು ಬಂದಿದ್ದ ಬಾಲಕಿಯ ಬೆತ್ತಲೆ ಶವ ಪತ್ತೆ
Elephants
ಮೈಸೂರು ದಸರಾ: ನಾಡಿನಿಂದ ಕಾಡಿನತ್ತ ಹೊರಟ ಗಜಪಡೆ
Dasara Parade Cm
ದಸರಾ ಪರೇಡ್​ನಲ್ಲಿ ಸಿಎಂ ಜತೆ ಮಹದೇವಪ್ಪ ಮೊಮ್ಮಗ: ಕಾಂಗ್ರೆಸ್ ಹೈಕಮಾಂಡ್ ಗರಂ
Chikkaballapura: Three boys drown while swimming in a lake
ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರುಪಾಲು
Yogi Adityanath
ಗೋರಖನಾಥ ದೇವಾಲಯದಲ್ಲಿ ವಿಜಯದಶಮಿ ವಿಶೇಷ ಪೂಜೆ ನೆರವೇರಿಸಿದ ಸಿಎಂ ಯೋಗಿ
Governer Gehlot
Mysuru Dasara: ಪಂಜಿನ ಕವಾಯತು ವೀಕ್ಷಿಸಿದ ರಾಜ್ಯಪಾಲ ಗೆಹ್ಲೋಟ್
Smriti Irani Performs Dhunuchi Naach
ದುರ್ಗಾ ಪೂಜೆ ವೇಳೆ ಧುನುಚಿ ನಾಚ್ ಪ್ರದರ್ಶಿಸಿದ ಸ್ಮೃತಿ ಇರಾನಿ
Mys Abhimanyu Trishika Av
ಅಮ್ಮನ ಬೆನ್ನೇರಿ ಜಂಬೂ ಸವಾರಿ ವೀಕ್ಷಿಸಿದ ಯುವರಾಜ ಆದ್ಯವೀರ

ನವರಾತ್ರಿ ವಿಶೇಷ
ಶರದ್ ಋತುವಿನಲ್ಲಿ ಒಂಬತ್ತು ದಿನ ಜಗನ್ಮಾತೆಯ ಸ್ವರೂಪವನ್ನು ಆರಾಧಿಸುವುದೇ ಶರನ್ನವರಾತ್ರಿ
ನವರಾತ್ರಿ ಅಥವಾ ಶರನ್ನವರಾತ್ರಿ ಎಂದು ಕರೆಯುವ ಪರ್ವ ಕಾಲದಲ್ಲಿ ಆ ಜಗನ್ಮಾತೆಯ ಆರಾಧನೆಗೆ ಪ್ರಾಶಸ್ತ್ಯ. ಬಹಳ ಮಂದಿ ಈ ಸಮಯದಲ್ಲಿ ವ್ರತಾಚರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಉಪವಾಸವಿದ್ದು, ಆ ಜಗನ್ಮಾತೆಯ ಆರಾಧನೆ ಮಾಡುತ್ತಾರೆ. . ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರತಿಪದ (ಪಾಡ್ಯ)ದಿಂದ ಆರಂಭ ಆಗುವ ಈ ಪೂಜೆಯು ನವಮಿ ಪರ್ಯಂತ ಮಾಡಲಾಗುತ್ತದೆ. ಹೀಗೆ ಪ್ರತೀ ದಿನ ದೇವಿಯನ್ನು ಒಂದೊಂದು ವಿಶಿಷ್ಟ ಸ್ವರೂಪದಲ್ಲಿ ಆರಾಧನೆ ನಡೆಸಲಾಗುತ್ತದೆ. ಇದು ಒಂಬತ್ತು ದಿನಗಳ ಸುದೀರ್ಘ ಕೈಂಕರ್ಯ. ಶರದ್ ಋತುವಿನಲ್ಲಿ ಆರಂಭದ ಒಂಬತ್ತು ದಿನಗಳು ಈ ಆಚರಣೆ ಮಾಡುವದಿಂದಾಗಿ ‘ಶರನ್ನವರಾತ್ರಿ’ ಎಂದು ಸಹ ಹೇಳುತ್ತಾರೆ.

ಒಂಬತ್ತು ದಿನಗಳಲ್ಲಿ ಆಕೆಯ ಸ್ವರೂಪ ಹೀಗಿರುತ್ತದೆ:

ಪ್ರಥಮಮ್ ಶೈಲ ಪುತ್ರಿ
ದ್ವಿತೀಯಂ ಬ್ರಹ್ಮಚಾರಿಣಿ
ತೃತೀಯಂ ಚಂದ್ರ ಘಂಟಾ
ಚತುರ್ಥಿಕಮ್ ಕೂಶ್ಮಾಂಡಾ
ಪಂಚಮಮ್ ಸ್ಕಂದ ಮಾತಾ
ಷಷ್ಟಮ್ ಕಾತ್ಯಾಯಿನಿ
ಸಪ್ತಮಮ್ ಕಾಳ ರಾತ್ರಿ
ಅಷ್ಟಮಮ್ ಮಹಾ ಗೌರಿ
ನವಮಮ್ ಸಿದ್ಧಿಧಾತ್ರಿ

ಮೊದಲ ದಿನ ಆ ಜಗನ್ಮಾತೆಯ ಸ್ವರೂಪವನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ. ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರ ಘಂಟಾ, ನಾಲ್ಕನೇ ದಿನ ಕೂಶ್ಮಾಂಡಾ, ಐದನೇ ದಿನ ಸ್ಕಂದ ಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಳ ರಾತ್ರಿ, ಎಂಟನೇ ದಿನ ಮಹಾ ಗೌರಿ ಹಾಗೂ ಒಂಬತ್ತನೆ ದಿನ ಸಿದ್ಧಿಧಾತ್ರಿ ಸ್ವರೂಪದಲ್ಲಿ ಆರಾಧನೆ ಮಾಡಲಾಗುತ್ತದೆ.

ಲೋಕಕಂಟಕರಾದ ರಾಕ್ಷಸರ ಸಂಹಾರವನ್ನು ಮಾಡಿ, ಜಗತ್ತಿನ ಉದ್ಧಾರ ಮಾಡಿದ ಜಗಜ್ಜನನಿಯ ನವವಿಧ ಸ್ವರೂಪವನ್ನು ಆರಾಧಿಸುತ್ತೇವೆ.

ಪೂಜಾ ವಿಧಾನ
ಸ್ನಾನ ಮತ್ತು ಆ ನಂತರ್ರದ ನಿತ್ಯ ಶುದ್ಧಿ ಆದ ಮೇಲೆ ಮನೆಯ ಈಶಾನ್ಯ ಭಾಗದಲ್ಲಿ ಅಥವಾ ದೇವರ ಕೋಣೆಯಲ್ಲಿ ರಂಗೋಲಿಯಲ್ಲಿ ಅಷ್ಟದಳವನ್ನು ಬರೆದು, ಅದರ ಮೇಲೆ ಕಲಶ ಸ್ಥಾಪನೆ ಮಾಡಬೇಕು. ಆ ಕಲಶದಲ್ಲಿ ಗಂಧ ಸಹಿತ ಶುದ್ಧ ನೀರನ್ನು ತುಂಬಿಸಿ, ನವರಾತ್ರಿಯ ದಿನಗಳಂದು ಆಯಾ ದೇವಿಯ ಸ್ವರೂಪವನ್ನು ಆರಾಧನೆ ಮಾಡಬೇಕು.