AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಜಪಡೆ ತಾಲೀಮು, ವಜ್ರಖಚಿತ ಸಿಂಹಾಸನ ಜೋಡಣೆ: ಇಲ್ಲಿವೆ ಮೈಸೂರು ದಸರಾ ಸಂಭ್ರಮದ ಚಿತ್ರಗಳು

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಅಕ್ಟೋಬರ್ ಎರಡರಂದು ಜರುಗುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತರಬೇತಿಯನ್ನು ಚುರುಕುಗೊಳಿಸಲಾಗಿದೆ. ಜಂಬೂಸವಾರಿಯಲ್ಲಿ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ಅಭ್ಯಾಸ ಮಾಡಿಸಲಾಗುತ್ತಿದ್ದು, ಮೈಸೂರಿನ ರಾಜಬೀದಿಗಳಲ್ಲಿ ಗಜಪಡೆ ಕಲರವ ಜೋರಾಗಿದೆ. ಇನ್ನು ಅರಮನೆಯಲ್ಲಿ ದಸರಕ್ಕೆ ಬೇಕಾದ ಸಕಲ ಸಿದ್ಧತೆಗಳೂ ಜರುಗುತ್ತಿವೆ. ರತ್ನಕಚಿತ ಸಿಂಹಾಸನದ ಜೋಡಣೆ ಮಾಡಲಾಗಿದ್ದು, ಇದರ ಕಲರ್ ಫುಲ್ ಚಿತ್ರಗಳು ಇಲ್ಲಿವೆ

ಭಾವನಾ ಹೆಗಡೆ
| Updated By: Digi Tech Desk|

Updated on:Sep 17, 2025 | 5:55 PM

Share
ಅಕ್ಟೋಬರ್ ಎರಡರಂದು ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯುಗೆ  ಹೊರಿಸಲಾಗುತ್ತದೆ. ಹೀಗಾಗಿ ತಾಲೀಮಿನಲ್ಲಿ ಅಭಿಮನ್ಯುಗೆ ಸುಮಾರು 200 ಕೆ.ಜಿ ತೂಕದ
 ಮರದ ಅಂಬಾರಿಯನ್ನು ಕಟ್ಟಿ, 400 ಕೆ.ಜಿ. ಭಾರದ ಮರಳು ಮೂಟೆ ಹಾಕಿ 100 ಕೆ.ಜಿ ನಮ್ದ ಹೊರಿಸಿ ತಾಲೀಮು ನಡೆಸಲಾಯ್ತು.

ಅಕ್ಟೋಬರ್ ಎರಡರಂದು ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯುಗೆ ಹೊರಿಸಲಾಗುತ್ತದೆ. ಹೀಗಾಗಿ ತಾಲೀಮಿನಲ್ಲಿ ಅಭಿಮನ್ಯುಗೆ ಸುಮಾರು 200 ಕೆ.ಜಿ ತೂಕದ ಮರದ ಅಂಬಾರಿಯನ್ನು ಕಟ್ಟಿ, 400 ಕೆ.ಜಿ. ಭಾರದ ಮರಳು ಮೂಟೆ ಹಾಕಿ 100 ಕೆ.ಜಿ ನಮ್ದ ಹೊರಿಸಿ ತಾಲೀಮು ನಡೆಸಲಾಯ್ತು.

1 / 6
ಮರದ ಅಂಬಾರಿ ಹೊತ್ತ ಅಭಿಮನ್ಯು ಜೊತೆ ಉಳಿದ ಆನೆಗಳೂ ಪಾಲ್ಗೊಂಡಿದ್ದವು. ಅಭಿಮನ್ಯು ಆನೆಗೆ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಹೇಮಾವತಿ ಹಾಗೂ  ಕಾವೇರಿ ಆನೆಗಳು ಸಾಥ್​ ನೀಡಿದವು.  ಉಳಿದಂತೆ ಭೀಮ, ಗೋಪಿ, ಪ್ರಶಾಂತ,‌ ಕಂಜನ್,ಮಹೇಂದ್ರ, ಲಕ್ಷ್ಮೀ, ಏಕಲವ್ಯ, ಶ್ರೀಕಂಠ, ರೂಪ ಸೇರಿದಂತೆ ಒಟ್ಟು 14 ಆನೆಗಳು ಸಹ ತಾಲೀಮಿನಲ್ಲಿ ಹೆಜ್ಜೆ ಹಾಕಿದವು

ಮರದ ಅಂಬಾರಿ ಹೊತ್ತ ಅಭಿಮನ್ಯು ಜೊತೆ ಉಳಿದ ಆನೆಗಳೂ ಪಾಲ್ಗೊಂಡಿದ್ದವು. ಅಭಿಮನ್ಯು ಆನೆಗೆ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಹೇಮಾವತಿ ಹಾಗೂ ಕಾವೇರಿ ಆನೆಗಳು ಸಾಥ್​ ನೀಡಿದವು. ಉಳಿದಂತೆ ಭೀಮ, ಗೋಪಿ, ಪ್ರಶಾಂತ,‌ ಕಂಜನ್,ಮಹೇಂದ್ರ, ಲಕ್ಷ್ಮೀ, ಏಕಲವ್ಯ, ಶ್ರೀಕಂಠ, ರೂಪ ಸೇರಿದಂತೆ ಒಟ್ಟು 14 ಆನೆಗಳು ಸಹ ತಾಲೀಮಿನಲ್ಲಿ ಹೆಜ್ಜೆ ಹಾಕಿದವು

2 / 6
ದಸರಾದ ಪ್ರಯುಕ್ತ ತಾಲೀಮಿನ ಸಂದರ್ಯಾಭದಲ್ಲಿ ಯಾವುದೇ ವಿಘ್ನ ಸಂಭವಿಸದಂತೆ ಪೂಜೆ ನೆರವೇರಿಸಲಾಯಿತು.

ದಸರಾದ ಪ್ರಯುಕ್ತ ತಾಲೀಮಿನ ಸಂದರ್ಯಾಭದಲ್ಲಿ ಯಾವುದೇ ವಿಘ್ನ ಸಂಭವಿಸದಂತೆ ಪೂಜೆ ನೆರವೇರಿಸಲಾಯಿತು.

3 / 6
ಅರಮನೆ ಕೋಟೆ ಆಂಜನೇಯಸ್ವಾಮಿ ದ್ವಾರದ ಮೂಲಕ 
ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್​ ನಗರ ಬಂಬೂಬಜಾರ್ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಮರದ ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ನಡೆಸಲಾಯಿತು.

ಅರಮನೆ ಕೋಟೆ ಆಂಜನೇಯಸ್ವಾಮಿ ದ್ವಾರದ ಮೂಲಕ ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್​ ನಗರ ಬಂಬೂಬಜಾರ್ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಮರದ ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ನಡೆಸಲಾಯಿತು.

4 / 6
ಮೈಸೂರು ಅರಮನೆಯಲ್ಲಿ  ದಸರಾ ತಯಾರಿ  ಜೋರಾಗಿದೆ. ಅದರೊಂದಿಗೆ ಸಿಂಹಾಸನ ಜೋಡಣೆ ಕೆಲಸವೂ ಭರದಿಂದ ನಡೆಯುತ್ತಿದೆ

ಮೈಸೂರು ಅರಮನೆಯಲ್ಲಿ ದಸರಾ ತಯಾರಿ ಜೋರಾಗಿದೆ. ಅದರೊಂದಿಗೆ ಸಿಂಹಾಸನ ಜೋಡಣೆ ಕೆಲಸವೂ ಭರದಿಂದ ನಡೆಯುತ್ತಿದೆ

5 / 6
ನಾಡಹಬ್ಬ ದಸರಾಗಾಗಿ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ರತ್ನಕಚಿತ ಸಿಂಹಾಸನದ ಜೋಡಣೆಯ ಕಾರ್ಯ ನೆರವೇರುತ್ತಿದೆ.

ನಾಡಹಬ್ಬ ದಸರಾಗಾಗಿ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ರತ್ನಕಚಿತ ಸಿಂಹಾಸನದ ಜೋಡಣೆಯ ಕಾರ್ಯ ನೆರವೇರುತ್ತಿದೆ.

6 / 6

Published On - 5:37 pm, Wed, 17 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ