Sign In

By signing in or creating an account, you agree with Associated Broadcasting Company's Terms & Conditions and Privacy Policy.

Dasara

Dasara

ಮೈಸೂರು ದಸರಾ

ನಾಡ ಹಬ್ಬ ಎಂದೇ ಮೈಸೂರು ದಸರಾ ವಿಶ್ವವಿಖ್ಯಾತಿ ಪಡೆದಿದೆ. ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ‘ವಿಜಯದಶಮಿ ಆಚರಣೆ’ಯನ್ನು ಮೊದಲ ಬಾರಿಗೆ 1610 ರಲ್ಲಿ ಆಚರಿಸಿದರು ಎಂಬುದು ಇತಿಹಾಸದಲ್ಲಿದೆ. ದಸರಾಗೆ ಇಡೀ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗತ ವೈಭವ ಮರುಕಳಿಸುತ್ತದೆ. ಭವ್ಯ ಅರಮನೆಯ ಮುಂದೆ ರಾಜ ಗಾಂಭೀರ್ಯದಲ್ಲಿ ಸಾಗುವ ಗಜಪಡೆ, ಚಾಮುಂಡಿ ತಾಯಿಯ ಮೆರವಣಿಗೆ ನೋಡಲು ಜನ ದೇಶ-ವಿದೇಶದಿಂದ ಬರುತ್ತಾರೆ.

ಮೈಸೂರು ದಸರಾ ಉತ್ಸವ 10 ದಿನಗಳ ಕಾಲ ನಡೆಯುತ್ತದೆ. ನವರಾತ್ರಿಯ ಸಂದರ್ಭದಲ್ಲಿ 9 ದಿನವೂ ಉತ್ಸವ ನಡೆಯುತ್ತದೆ. 10ನೇ ದಿನ ವಿಜಯ ದಶಮಿಯಂದು ದಸರಾ ಜಂಬೂ ಸವಾರಿ ಆಚರಿಸಲಾಗುತ್ತದೆ. ಇದು ದಸರಾದ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾದ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಗಜಪಡೆ ನೋಡಲು ಲಕ್ಷಾಂತರ ಮಂದಿ ಸೇರುತ್ತಾರೆ.

ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ದಸರಾ ಪ್ರಾರಂಭವಾಗುತ್ತದೆ. ಮೈಸೂರಿನ ರಾಜ ಮನೆತನದವರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯಲ್ಲಿ ದರ್ಬಾರ್, ಆಯುಧ ಪೂಜೆ ಸೇರಿದಂತೆ ಇತರೆ ಎಲ್ಲಾ ಪೂಜೆಗಳನ್ನು ನೆರವೇರಿಸುತ್ತಾರೆ.

ಇನ್ನೂ ಹೆಚ್ಚು ಓದಿ

ಮತ್ತೆ ಬಂದ ದಸರಾ ಆನೆ ಅರ್ಜುನ: ಸಮಾಧಿ ಮೇಲೆ ಪುತ್ಥಳಿ ಸ್ಥಾಪನೆಗೆ ದಿನಗಣನೆ

ಆನೆ ಅರ್ಜುನ ವೀರ ಮರಣವನ್ನು ಹೊಂದಿ ಒಂದು ವರ್ಷವಾಯಿತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಅರ್ಜುನನ ಅದ್ಭುತವಾದ ಸ್ಮಾರಕ ನಿರ್ಮಾಣಗೊಂಡಿದೆ.ಪ್ರತಿಷ್ಠಿತ ಕಲಾವಿದರ ಕೈಚಳಕದಿಂದ ನಿರ್ಮಾಣಗೊಂಡ 9.8 ಅಡಿ ಎತ್ತರದ ಪುತ್ಥಳಿಯು ಅರ್ಜುನನ ಸಮಾಧಿಯ ಮೇಲೆ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಸ್ಮಾರಕದ ಸುತ್ತ ಆನೆ ಕಂದಕ ಮತ್ತು ಸೋಲಾರ್ ಬೇಲಿಯನ್ನು ಅಳವಡಿಸಿ ಸುರಕ್ಷತೆಯನ್ನು ಒದಗಿಸಲಾಗಿದೆ.ಕೋಟಿ ಕೋಟಿ ಅಭಿಮಾನಿಗಳ ಆಸೆ ಈಡೇರಿದೆ.

ಮೈಸೂರಿಗೆ ತೆರಳುವ ಪ್ರವಾಸಿಗರಿಗೆ ನಿರಾಸೆ: ಚಿನ್ನದ ಅಂಬಾರಿ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ

ಮೈಸೂರು ಅರಮನೆಯ ಪ್ರಸಿದ್ಧ ಚಿನ್ನದ ಅಂಬಾರಿಯ ವೀಕ್ಷಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 750 ಕೆಜಿ ತೂಕದ ಈ ಅಂಬಾರಿಯ ಕೆಳಭಾಗ ಮತ್ತು ಹಿಂಭಾಗದ ಮರದ ಕೆಲಸ ಸೇರಿದಂತೆ ಹಲವು ರಿಪೇರಿ ಕಾರ್ಯಗಳು ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರವಾಸಿಗರಿಗೆ ಇದು ನಿರಾಶೆಯನ್ನುಂಟು ಮಾಡಿದ್ದರೂ, ಅಂಬಾರಿಯ ಸಂರಕ್ಷಣೆಗಾಗಿ ಈ ಕ್ರಮ ಅವಶ್ಯಕವಾಗಿದೆ.

  • Ram
  • Updated on: Dec 6, 2024
  • 11:01 am

ಮೈಸೂರು ದಸರಾ 2024: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ

ವಿಶ್ವವಿಖ್ಯಾತ ಮೈಸೂರು ದಸರಾ ಸಂಪನ್ನಗೊಂಡಿದೆ. ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಕಲಾ ತಂಡಗಳು ಕೂಡ ತಮ್ಮ ತಮ್ಮ ಊರು ಸೇರಿವೆ. ಇತ್ತ, ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಕಲಾ ತಂಡಗಳಿ ಬಹುಮಾನ ಘೋಷಣೆಯಾಗಿದೆ. ವಿಜಯಪುರ ಜಿಲ್ಲೆಯ ಕಲಾ ತಂಡಕ್ಕೆ ಮೊದಲ ಬಹುಮಾನ ಬಂದಿದೆ.

  • Ram
  • Updated on: Oct 15, 2024
  • 1:33 pm

ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಸ್ತಬ್ಧಚಿತ್ರಗಳಿಗೆ ಬಹುಮಾನ ಘೋಷಣೆ: ಮಂಡ್ಯಕ್ಕೆ ಪ್ರಥಮ ಬಹುಮಾನ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಸ್ತಬ್ಧಚಿತ್ರಗಳ‌ ಬಹುಮಾನ ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮ ಕೃಷ್ಣರಾಜ ಸಾಗರ ಅಣೆಕಟ್ಟು ಸ್ತಬ್ಧಚಿತ್ರಕ್ಕೆ ಪ್ರ‌ಥಮ‌ ಬಹುಮಾನ ಲಭಿಸಿದೆ. ಧಾರವಾಡ ಜಿಲ್ಲೆಯ ಇಸ್ರೋ ಗಗನಯಾನದ ಸ್ತಬ್ಧಚಿತ್ರಗೆ ದ್ವಿತೀಯ ಬಹುಮಾನ ಬಂದಿದ್ದು, ಚಾಮರಾಜನಗರ ಜಿಲ್ಲೆಗೆ ತೃತೀಯ ಬಹುಮಾನ ಬಂದಿದೆ.

  • Ram
  • Updated on: Oct 14, 2024
  • 7:38 pm

ಎರಡು ತಿಂಗಳು ರಾಜಾತಿಥ್ಯ ಸವಿದ ದಸರಾ ಆನೆಗಳಿಗೆ ಕಾಡಿಗೆ ವಾಪಸ್ಸಾಗುವ ಮನಸ್ಸು ಬರುತ್ತಿಲ್ಲ!

ಆನೆಗಳ ನಿಷ್ಠೆ ಮತ್ತು ಜನರೆಡೆಗಿನ ಪ್ರೀತಿಯನ್ನು ಇಲ್ಲಿ ನೋಡಬಹುದು. ಗುಂಪಿನಲ್ಲಿದ್ದ ಚಿಕ್ಕ ಆನೆ ಅರಮನೆ ಆವರಣದಿಂದ ಹೊರಡುವ ಮೊದಲು ನೆರೆದಿದ್ದ ಜನರತ್ತ ನೋಡಿ ಪೊಡಮಟ್ಟುತ್ತದೆ ಅಂದರೆ ಸೊಂಡಿಲೆತ್ತಿ ನಮಸ್ಕಾರ ಮಾಡುತ್ತದೆ. ಜನರಿಗೆ ಕೃತಜ್ಞತೆಯನ್ನು ಸಲ್ಲಿಸುವ ಆನೆಯ ಮನಸ್ಥಿತಿ ಮನಮುಟ್ಟುತ್ತದೆ.

ಅಂಬಾರಿ ಹಸ್ತಾಂತರಿಸುವಲ್ಲಿ ವಿಳಂಬ ಆರೋಪ: ಪತ್ರದ ಮೂಲಕ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಚಿನ್ನದ ಅಂಬಾರಿ‌ ಹಸ್ತಾಂತರಿಸುವಲ್ಲಿ ವಿಳಂಬ ಆರೋಪ ಕೇಳಿಬಂದಿದೆ. ಸದ್ಯ ಈ ವಿಚಾರವಾಗಿ ಪತ್ರ ಬರೆಯುವ ಮೂಲಕ ಗೊಂದಲಗಳಿಗೆ ಸ್ವತಃ ಪ್ರಮೋದಾದೇವಿ ಒಡೆಯರ್ ತೆರೆಯೆಳಿದಿದ್ದಾರೆ. ಇದು ಬೇಜವಾಬ್ದಾರಿ ಹೇಳಿಕೆ. ಏಕೆಂದರೆ ಅಂಬಾರಿಯನ್ನು ಮಧ್ಯಾಹ್ನ 2 ಗಂಟೆಯ ನಂತರ 2 ನಿಮಿಷಕ್ಕೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.

ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಕ್ಯಾಂಪ್​ನಲ್ಲಿ 50ಕ್ಕೂ ಹೆಚ್ಚು ಗೌಳಿ ಕುಟುಂಬಗಳಿಂದ ವಿಭಿನ್ನವಾಗಿ ದಸರಾ ಆಚರಿಸಲಾಯಿತು. ಗೌಳಿ ಸಮುದಾಯದವರು ದಸರಾ ಅನ್ನು ಶಿಲ್ಲೇಂಗಾನ್ ಎಂದು ಕರೆಯುತ್ತಾರೆ. ಗೌಳಿ ಸಮುದಾಯದ ವಿಭಿನ್ನ ದಸರಾ ಆಚರಣೆ ವಿಡಿಯೋ ನೋಡಿ

Mysuru Dasara Mahotsav-2024: ಮೈಸೂರು ದಸರಾ….ಹಾಡು ಕೇಳುತ್ತಾ ಜಂಬೂ ಸವಾರಿ ನೋಡ್ತಿದ್ರೆ ನೋಸ್ಟಾಲ್ಜಿಕ್ ಅನುಭವ!

Mysuru Dasara Mahotsav-2024: ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಸಿದ್ದರಾಮಯ್ಯ ಸರ್ಕಾರ ಅತ್ಯಂತ ವಿಜೃಂಭಣೆ ಮತ್ತು ಅದ್ದೂರಿಯಾಗಿ ನೆರವೇರಿಸಿದೆ ಎಂದರೆ ಉತ್ಪ್ರೇಕ್ಷೆ ಅನಿಸದು. ಮುಡಾ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟಕ್ಕೆ ದಸರಾ ಉತ್ಸವದ ಯಶಸ್ವೀ ಆಚರಣೆ ಕೊಂಚ ನಿರಾಳತೆ ಒದಗಿಸಿರಬಹುದು.

Mysuru Dasara: ಮೈಸೂರು ದಸರಾ ಜಂಬೂಸವಾರಿ: ಅದ್ಭುತ ಕ್ಷಣ ಕಣ್ತುಂಬಿಕೊಂಡ ಕೋಟ್ಯಂತರ ಜನರು

Jamboo Savari: ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಇಂದು ದಸರಾ ಸಂಭ್ರಮ ಮನೆ ಮಾಡಿತ್ತು. ಮುಡಾ ಸಂಕಷ್ಟದ ನಡುವೆಯೇ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಅದ್ಧೂರಿ ಚಾಲನೆ ನೀಡಿದರು. ಜಂಬೂಸವಾರಿಯ ಅದ್ಭುತ ಕ್ಷಣಗಳು ಇಲ್ಲಿವೆ.

Mysuru Dasara Mahotsav-2024: ಅಂಬಾರಿಯೊಳಗೆ ಚಾಮುಂಡಿಯನ್ನು ಹೊತ್ತ ಅಭಿಮನ್ಯುನ ನಡಿಗೆ ವರ್ಣಿಸಲದಳ!

Mysuru Dasara Mahotsav 2024: ಜಂಬೂ ಸವಾರಿಗೆ ಮಳೆ ಅಡ್ಡಿಯಾಗುತ್ತಿಲ್ಲ ಅನ್ನೋದು ಸಂತಸದ ಸಂಗತಿ. ಆದರೆ, ಅದು ಶುರುವಾಗುವ ಮೊದಲು ಮೈಸೂರು ನಗರದಲ್ಲಿ ಮಳೆ ಸುರಿಯಲಾರಂಭಿಸಿತ್ತು. ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭಗೊಂಡ ಮಳೆ ಸ್ವಲ್ಪಹೊತ್ತಿನ ನಂತರ ನಿಂತಿತು. ನಗರದಲ್ಲಿ ಈಗಲೂ ಮೋಡ ಕವಿದ ವಾತಾವರಣವಿದೆ.

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ