Mysuru Dasara: ಶಂಖ-ಚಕ್ರ, ಗಂಡಬೇರುಂಡ ಚಿತ್ತಾರ; ಅಭಿಮನ್ಯುಗೆ ಬಣ್ಣದ ಅಲಂಕಾರ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗಿಯಾಗಲಿರುವ ಗಜಪಡೆಗೆ ವಿಶೇಷ ಅಲಂಕಾರ ಮಾಡಲಾಗಿದೆ. ಕಲಾವಿದ ನಾಗಲಿಂಗಪ್ಪ ನೇತೃತ್ವದ 8 ಜನರ ತಂಡ ಇದಕ್ಕಾಗಿ ಕೆಲಸ ಮಾಡಿದೆ. ಅಭಿಮನ್ಯು ಮೈಮೇಲೆ ಶಂಖ-ಚಕ್ರ, ಗಿಳಿ, ಗಂಡಬೇರುಂಡ ಚಿತ್ತಾರಗಳು ಮೂಡಿದ್ದು, ವಿಶೇಷ ವರ್ಣಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿವೆ.
ಮೈಸೂರು, ಅಕ್ಟೋಬರ್ 2: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಜಂಬೂ ಸವಾರಿಗೆ ಕೌಂಟ್ ಡೌನ್ ಶುರುವಾಗಿದೆ. ಕೂಂಬಿಂಗ್ ಕಿಂಗ್ ಅಭಿಮನ್ಯು ವಿಶೇಷ ವರ್ಣಾಲಂಕಾರದಿಂದ ಮಿರ ಮಿರ ಮಿಂಚುತಿದ್ದು, ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ 8 ಮಂದಿ ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ಅಭಿಮನ್ಯು ಮೈಮೇಲೆ ಶಂಖ-ಚಕ್ರ, ಗಿಳಿ, ಗಂಡಬೇರುಂಡ ಚಿತ್ತಾರಗಳು ಮೂಡಿದ್ದು, ಎಲ್ಲ ಆನೆಗಳಿಗೂ ವಿಶೇಷ ಅಲಂಕಾರ ಮಾಡಲಾಗಿದೆ. ಮೈ ಮೇಲೆ ಬಣ್ಣ ಬಳಿಯುತ್ತಿದ್ದರೂ ಅಭಿಮಾನ್ಯು ಕೂಲ್ ಆಗಿಯೇ ನಿಂತಿರುವ ದೃಶ್ಯ ಕಂಡುಬಂತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ತಮ್ಮ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
