AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್

Author - TV9 Kannada

surajprasad.narendra@tv9.com

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
ಹನೂರು ಶೂಟೌಟ್‌ ಕೇಸ್​: ಮೃತರ ಒಳ ಉಡುಪಿನಲ್ಲಿ ಪ್ರೈಮರ್ ಪತ್ತೆ; FSL ವರದಿಯಲ್ಲಿ ಸ್ಫೋಟಕ ಅಂಶ  ಬಯಲು

ಹನೂರು ಶೂಟೌಟ್‌ ಕೇಸ್​: ಮೃತರ ಒಳ ಉಡುಪಿನಲ್ಲಿ ಪ್ರೈಮರ್ ಪತ್ತೆ; FSL ವರದಿಯಲ್ಲಿ ಸ್ಫೋಟಕ ಅಂಶ ಬಯಲು

Hanur Encounter Case: ಚಾಮರಾಜನಗರದ ಹನೂರಿನಲ್ಲಿ ಅರಣ್ಯ ಸಿಬ್ಬಂದಿಯಿಂದ ನಡೆದ ಮೂವರ ಎನ್‌ಕೌಂಟರ್‌ ಪ್ರಕರಣದ ಮರಣೋತ್ತರ ಹಾಗೂ ಎಫ್‌ಎಸ್‌ಎಲ್ ವರದಿಗಳು ಲಭ್ಯವಾಗಿವೆ. ಮೃತ ಅಂತೋನಿಸ್ವಾಮಿ, ಪೀಟರ್, ಕುಮಾರ್ ಅವರ ದೇಹದ ಎದೆ, ತೊಡೆ, ಹೊಟ್ಟೆ ಭಾಗಕ್ಕೆ ಗುಂಡು ಬಿದ್ದಿದ್ದು, ಒಳ ಉಡುಪಿನಲ್ಲಿ ಪ್ರೈಮರ್ ಪತ್ತೆಯಾಗಿದೆ.

ಬೇಟೆಗಾರರ ಅಟ್ಟಹಾಸಕ್ಕೆ ಕಳ್ಳ ಬೇಟೆ ತಡೆ ಶಿಬಿರ ಧ್ವಂಸ: ಶೂಟೌಟ್​​​​​​​​​ ಪ್ರಕರಣದ ಗ್ರೌಂಡ್ ರಿಪೋರ್ಟ್

ಬೇಟೆಗಾರರ ಅಟ್ಟಹಾಸಕ್ಕೆ ಕಳ್ಳ ಬೇಟೆ ತಡೆ ಶಿಬಿರ ಧ್ವಂಸ: ಶೂಟೌಟ್​​​​​​​​​ ಪ್ರಕರಣದ ಗ್ರೌಂಡ್ ರಿಪೋರ್ಟ್

ಹಾನೂರು ಅರಣ್ಯ ಸಿಬ್ಬಂದಿಯಿಂದ ಮೂವರ ಎನ್ ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.. ಅಸಲಿಗೆ ಎನ್ ಕೌಂಟರ್ ನಡೆದ ಸ್ಥಳ ಹೇಗಿದೆ ಶೂಟೌಟ್ ಬಳಿಕ ಎಪಿಸಿ ಕ್ಯಾಂಪ್ ಯಾವ ರೀತಿ ಸ್ಪೋಟಿಸಲಾಯ್ತು? ಈಗ ಅರಣ್ಯ ಕಚೇರಿಗಳ ಸ್ಥಿತಿ ಹೇಗಿದೆ ಎಂಬುದರ ಕುರಿತು ಟಿವಿ9 ಎನ್ ಕೌಂಟರ್ ನಡೆದ ಸ್ಥಳಕ್ಕೆ ಹೋಗಿ ಪ್ರತ್ಯಕ್ಷ ವರದಿ ನೀಡಿದೆ.

ಚಾಮರಾಜನಗರ ಶೂಟೌಟ್: ಘಟನೆ ನಡೆದ ಹೊಳೆ ದಟ್ಟಿ ಅರಣ್ಯದಿಂದಲೇ ಟಿವಿ9 ವಿಶೇಷ ತನಿಖಾ ವರದಿ

ಚಾಮರಾಜನಗರ ಶೂಟೌಟ್: ಘಟನೆ ನಡೆದ ಹೊಳೆ ದಟ್ಟಿ ಅರಣ್ಯದಿಂದಲೇ ಟಿವಿ9 ವಿಶೇಷ ತನಿಖಾ ವರದಿ

ಚಾಮರಾಜನಗರದ ಹೊಳೆ ದಟ್ಟಿ ಅರಣ್ಯದಲ್ಲಿ ಆಗಸ್ಟ್ 15ರಂದು ಜಿಂಕೆ ಬೇಟೆಗಾರರ ಮೇಲೆ ನಡೆದ ಎನ್​ಕೌಂಟರ್​ನ ನಡೆದ ಸ್ಥಳದಿಂದ ಟಿವಿ9 ಗ್ರೌಂಡ್​​ ರಿಪೋರ್ಟ್​​ ಮಾಡಿದೆ. ಅರಣ್ಯ ಸಿಬ್ಬಂದಿ ಗುಂಡಿಗೆ ಕುಮಾರ್, ಆಂಥೋನಿ ಸ್ವಾಮಿ, ಪೀಟರ್ ಎಂಬ ಮೂವರು ಬೇಟೆಗಾರರು ಬಲಿಯಾಗಿದ್ದರು. ಘಟನೆ ಬಳಿಕ ಉದ್ರಿಕ್ತ ಗುಂಪು ಅರಣ್ಯ ಇಲಾಖೆಯ ಆ್ಯಂಟಿ ಪೋಚಿಂಗ್ ಕ್ಯಾಂಪ್ ಅನ್ನು ಧ್ವಂಸಗೊಳಿಸಿತ್ತು.

ಶೂಟೌಟ್​​​​​​ಗೆ ಪ್ರತೀಕಾರ: ಅರಣ್ಯಾಧಿಕಾರಿಗಳ ಹತ್ಯೆಗೆ ಶಿಬಿರ ಸ್ಫೋಟ ಬಳಿಕ ಸೋಲಾರ್ ಫೆನ್ಸಿಂಗ್ ಪುಡಿ-ಪುಡಿ

ಶೂಟೌಟ್​​​​​​ಗೆ ಪ್ರತೀಕಾರ: ಅರಣ್ಯಾಧಿಕಾರಿಗಳ ಹತ್ಯೆಗೆ ಶಿಬಿರ ಸ್ಫೋಟ ಬಳಿಕ ಸೋಲಾರ್ ಫೆನ್ಸಿಂಗ್ ಪುಡಿ-ಪುಡಿ

ಚಾಮರಾಜನಗದ ಹಾನೂರು ಅರಣ್ಯ ಅಧಿಕಾರಿಗಳ ಎನ್ ಕೌಂಟರ್ ಗೆ ಮೂವರು ಸಾವನ್ನಪ್ಪಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ನಡುವೆ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಹೌದು.. ಎನ್ ಕೌಂಟರ್ ಬಳಿಕ ಅರಣ್ಯ ಇಲಾಖೆಯನ್ನೇ ಕಾಡುಗಳ್ಳರು ಟಾರ್ಗೆಟ್ ಮಾಡಿದ್ದು, ತನಿಖೆ ವೇಳೆ ರಿವೀಲ್ ಆಗಿದೆ. ಆಗಸ್ಟ್ 15 ರ ಬಳಿಕ ನಡೆದ ಪ್ರತಿಭಟನೆಯ ದೊಡ್ಡ ಷಡ್ಯಂತ್ರವನ್ನ ಟಿವಿ9 ದಾಖಲೆ ನಮೇತ ಬಟಾಬಯಲು ಮಾಡಿದೆ.

ಹನೂರು ಫೈರಿಂಗ್​​ ಪ್ರಕರಣ: ಧರಣಿ ನಿರತರಿಗೆ ಪ್ರಚೋದನೆ ನೀಡಿದ್ದು ಮರಿ ವೀರಪ್ಪನ್​​!; ವಿಡಿಯೋ ವೈರಲ್​​

ಹನೂರು ಫೈರಿಂಗ್​​ ಪ್ರಕರಣ: ಧರಣಿ ನಿರತರಿಗೆ ಪ್ರಚೋದನೆ ನೀಡಿದ್ದು ಮರಿ ವೀರಪ್ಪನ್​​!; ವಿಡಿಯೋ ವೈರಲ್​​

ಹನೂರು ಶೂಟೌಟ್ ಖಂಡಿಸಿ ನಡೆದ ಧರಣಿಯಲ್ಲಿ ಮರಿ ವೀರಪ್ಪನ್ ಎಂದೇ ಕುಖ್ಯಾತನಾದ ಗಂಗನದೊಡ್ಡಿ ಗೋವಿಂದ ಪ್ರಚೋದನೆ ನೀಡಿರುವ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಮತ್ತೊಂದೆಡೆ ಅರಣ್ಯಕ್ಕೆ ಬೆಂಕಿ ಇಟ್ಟ ಇವರು ಅಮಾಯಕರಾ? ಎಂದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ರಚಿಸಿರುವ ಮ್ಯಾಜಿಸ್ಟ್ರೇಟ್ ನೇತೃತ್ವದ ತನಿಖಾ ತಂಡ ನೀಡುವ ವರದಿ ಮೇಲೆ ಸದ್ಯ ಎಲ್ಲರ ಚಿತ್ತ ನೆಟ್ಟಿದೆ.

ಚಾಮರಾಜನಗರ ಫೈರಿಂಗ್​​ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆಯಿಂದ ಮತ್ತಷ್ಟು ಸಾಕ್ಷ್ಯ ರಿಲೀಸ್​​

ಚಾಮರಾಜನಗರ ಫೈರಿಂಗ್​​ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆಯಿಂದ ಮತ್ತಷ್ಟು ಸಾಕ್ಷ್ಯ ರಿಲೀಸ್​​

ಚಾಮರಾಜನಗರ ಹನೂರು ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರು ಬೇಟೆಗಾರರು ಎಂಬುದಕ್ಕೆ ಅರಣ್ಯ ಇಲಾಖೆ ಮತ್ತಷ್ಟು ಹೊಸ ಸಾಕ್ಷ್ಯ ಬಿಡುಗಡೆ ಮಾಡಿದೆ. ಸ್ಥಳದಲ್ಲಿದ್ದ ಜಿಂಕೆ ಮಾಂಸದಲ್ಲಿ ಗುಂಡಿನ ಗುರುತು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಮತ್ತೊಂದೆಡೆ ದುಷ್ಕರ್ಮಿಗಳು ಅರಣ್ಯ ಇಲಾಖೆಯನ್ನೇ ಟಾರ್ಗೆಟ್​​ ಮಾಡಿರುವ ಹಿನ್ನೆಲೆ ಕಚೇರಿ, ವಸತಿಗೃಹಗಳ ಭದ್ರತೆ ಹೆಚ್ಚಿಸಲಾಗಿದೆ.

ಚಾಮರಾಜನಗರ ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಕುಮಾರ್​​ ಮನೆಯಲ್ಲೀಗ ಸೂತಕ!

ಚಾಮರಾಜನಗರ ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಕುಮಾರ್​​ ಮನೆಯಲ್ಲೀಗ ಸೂತಕ!

ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ಎನ್​ಕೌಂಟರ್​​ನಲ್ಲಿ ಕುಮಾರ್ ಸಾವನ್ನಪ್ಪಿದ್ದು, ಅವರ ಹೊಸ ಮನೆ ಗೃಹಪ್ರವೇಶದ ಸಂಭ್ರಮ ಶ್ರಾದ್ಧ ಕಾರ್ಯವಾಗಿ ಬದಲಾಗಿದೆ. ಮನೆಯವರು ನಕಲಿ ಎನ್​ಕೌಂಟರ್ ಆರೋಪ ಮಾಡಿದ್ದು, ಮೃತರಾದ ಮೂವರ ಕುಟುಂಬಗಳೂ ನ್ಯಾಯಕ್ಕೆ ಆಗ್ರಹಿಸುತ್ತಿವೆ. ಈ ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸಲು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ.

ಚಾಮರಾಜನಗರ ಫೈರಿಂಗ್​​ ಕೇಸ್​​: ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿ ಕುರಿತು ಮಹತ್ವದ ಸುಳಿವು ಲಭ್ಯ

ಚಾಮರಾಜನಗರ ಫೈರಿಂಗ್​​ ಕೇಸ್​​: ತಲೆಮರೆಸಿಕೊಂಡಿರುವ ನಾಲ್ಕನೇ ಆರೋಪಿ ಕುರಿತು ಮಹತ್ವದ ಸುಳಿವು ಲಭ್ಯ

Chamarajanagar Forest Firing: ಚಾಮರಾಜನಗರ ಫೈರಿಂಗ್ ಪ್ರಕರಣದ ನಾಲ್ಕನೇ ಆರೋಪಿ ಮಹಿಮ ದಾಸ್ ಲೊಕೇಷನ್ ಪತ್ತೆಯಾಗಿದ್ದು, ಪೊಲೀಸರು ಕಣ್ಗಾವಲು ವಹಿಸಿದ್ದಾರೆ. ಮತ್ತೊಂದೆಡೆ ಪ್ರಕರಣ ಸಂಬಂಧ ಮಾಜಿಸ್ಟ್ರೇಟ್ ನೇತೃತ್ವದ ತನಿಖೆಯ ವರದಿ ಶನಿವಾರ ಕೈಸೇರಲಿದ್ದು, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಚಾಮರಾಜನಗರ: ಎನ್‌ಕೌಂಟರ್ ಪ್ರತಿಕಾರಕ್ಕೆ ಅರಣ್ಯವೇ ಬಲಿ: ಮಲೆ ಮಹದೇಶ್ವರ ಬೆಟ್ಟದ 10 ಎಕರೆ ಕಾಡಿಗೆ ಬೆಂಕಿ

ಚಾಮರಾಜನಗರ: ಎನ್‌ಕೌಂಟರ್ ಪ್ರತಿಕಾರಕ್ಕೆ ಅರಣ್ಯವೇ ಬಲಿ: ಮಲೆ ಮಹದೇಶ್ವರ ಬೆಟ್ಟದ 10 ಎಕರೆ ಕಾಡಿಗೆ ಬೆಂಕಿ

ಚಾಮರಾಜನಗರದ ಕೊಳ್ಳೇಗಾಲ ಅರಣ್ಯದಲ್ಲಿ ದುಷ್ಕರ್ಮಿಗಳಿಂದ ಸರಣಿ ಕೃತ್ಯಗಳು ಹೆಚ್ಚಾಗಿವೆ. ಮೂವರ ಎನ್‌ಕೌಂಟರ್ ನಂತರ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 10 ಎಕರೆ ಅರಣ್ಯಕ್ಕೆ ಬೆಂಕಿ ಹಚ್ಚಲಾಗಿದೆ. ಕಾವೇರಿ ವನ್ಯಜೀವಿಧಾಮದ ಕಳ್ಳಬೇಟೆ ತಡೆ ಕ್ಯಾಂಪ್‌ಗಳನ್ನು ಜಿಲೆಟಿನ್ ಬಳಸಿ ಸ್ಫೋಟಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಾಣಭಯ ಎದುರಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ತನಿಖೆ ತೀವ್ರಗೊಂಡಿದೆ.

ಚಾಮರಾಜನಗರ ಶೂಟೌಟ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ, ಹೊರಬರುತ್ತಾ ಅಸಲಿ ಸತ್ಯ?

ಚಾಮರಾಜನಗರ ಶೂಟೌಟ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ, ಹೊರಬರುತ್ತಾ ಅಸಲಿ ಸತ್ಯ?

ಚಾಮರಾಜನಗರ ಮೂವರ ಶೂಟೌಟ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಇನ್ನೊಂದಡೆ ಮ್ಯಾಜಿಸ್ಟ್ರೀಟ್ ತನಿಖೆಗೆ ನೀಡಲಾಗಿದೆ. ಇದರ ಮಧ್ಯೆ ಇದೀಗ ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ ಕೊಟ್ಟಿದ್ದು, ಮೂವರ ಸಾವಿನ ಕುರಿತು ಸತ್ಯಾ ಸತ್ಯತೆ ತಿಳಿಯಲು ಮಾನವ ಹಕ್ಕುಗಳ ಆಯೋಗದ ಡಿವೈ ಎಸ್ಪಿ ಅಶ್ವತ್ಥನಾರಾಯಣ ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದೆ.

ಗುಂಡೇಟಿಗೆ ಮೂವರು ಬಲಿ ಪ್ರಕರಣ: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ; ಘಟನೆ ಬಗ್ಗೆ ಕುಟುಂಬಸ್ಥರ ಆಕ್ರೋಶ

ಗುಂಡೇಟಿಗೆ ಮೂವರು ಬಲಿ ಪ್ರಕರಣ: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ; ಘಟನೆ ಬಗ್ಗೆ ಕುಟುಂಬಸ್ಥರ ಆಕ್ರೋಶ

Chamarajanagara Firing Case: ಚಾಮರಾಜನಗರ ಗುಂಡೇಟು ಪ್ರಕರಣದಲ್ಲಿ ಮೃತಪಟ್ಟ ಕುಮಾರ್ ಅವರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿದೆ. ಹನೂರು ತಾಲೂಕಿನ ಲಾಸರ್ ದೊಡ್ಡಿ ಗ್ರಾಮದಲ್ಲಿ ಕುಟುಂಬಸ್ಥರನ್ನು ಭೇಟಿ ಮಾಡಿದ ನಿಯೋಗದ ಬಳಿ, ಕುಟುಂಬದವರು ಅರಣ್ಯ ಇಲಾಖೆ ಸಿಬ್ಬಂದಿ ತಮ್ಮವರನ್ನುಗುಂಡು ಹಾರಿಸಿ ಕೊಂದಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

“ವಿಜಯ್ ಮಾಮ ಒಮ್ಮೆ ನಮ್ ಮನೆಗೆ ಬನ್ನಿ”: ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್

“ವಿಜಯ್ ಮಾಮ ಒಮ್ಮೆ ನಮ್ ಮನೆಗೆ ಬನ್ನಿ”: ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಕುಮಾರ್ ಪುತ್ರಿಯ ಕಣ್ಣೀರಿನ ವಿಡಿಯೋ ವೈರಲ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದರು. ಈ ದುರ್ಘಟನೆಯಲ್ಲಿ ಮೃತಪಟ್ಟ ಕುಮಾರ್ ಅವರ ಪುತ್ರಿ, ತಮಿಳು ನಟ ವಿಜಯ್ ಅವರಿಗೆ ಭಾವನಾತ್ಮಕವಾಗಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಕುಟುಂಬಕ್ಕೆ ನೆರವು ಕೋರಿ ಮಾಡಿದ ಈ ಕಣ್ಣೀರಿನ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.