ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಪದ್ಯದ ಸಾಲುಗಳನ್ನು ಹೇಳುತ್ತಾ ದಿ ಸಿದ್ದಲಿಂಗಯ್ಯರನ್ನು ಸ್ಮರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: Aug 25, 2023 | 4:27 PM

ಅವರು ಹಾಗೆ ಹೇಳುತ್ತಿದ್ದಾಗ ಸಭಿಕರಲ್ಲಿ ಒಬ್ಬರು ಪದೇಪದೆ ಪ್ರಾಂಮ್ಟ್ ಮಾಡುತ್ತಿದ್ದರು. ಮೊದಲಿಗೆ ಅವರು (ಸಭಿಕ) ಹೇಳಿದ ಪದಗಳನ್ನು ತಮ್ಮ ಭಾಷಣದಲ್ಲಿ ಉಪಯೋಗಿಸಿದ ಮುಖ್ಯಮಂತ್ರಿಗಳಿಗೆ ನಂತರ ಬೇಸರ ತರಿಸತೊಡಗಿತು. ಮತ್ತೊಮ್ಮೆ ಸಭಿಕ ಪ್ರಾಂಮ್ಟ್ ಮಾಡಲು ಮುಂದಾದಾಗ ಅವರು, ಹೇ ಸಾಕು ಸುಮ್ಮಿರಯ್ಯ ಅಂತ ಸುಮ್ಮನಾಗಿಸಿದರು!

ಬೆಂಗಳೂರು: ನಗರದ ಗಾಂಧಿಭವನದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ (Dalit poet Siddalingaiah) ಅವರ ಸ್ಮರಣೆ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಮಾಜಿ ಸಚಿವ ಹೆಚ್ ಆಂಜನೇಯ (H Anjaneya) ಮತ್ತು ಹಲವಾರು ಸಾಹಿತಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದರು. ಸಿದ್ದಲಿಂಗಯ್ಯನವರು ಬರೆದ ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ಯಾತಂತ್ರ್ಯ ಪದ್ಯದ ಮೊದಲ ಸಾಲುಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಸಿದ್ದರಾಮಯ್ಯ ಅದನ್ನು ಪ್ರಸ್ತುತ ವಿದ್ಯಮಾನಗಳೊಂದಿಗೆ ಥಳಕು ಹಾಕಿದರು. ಕೇವಲ ಜೇಬು ತುಂಬಿಸುವ ಅಂಬಾನಿ ಮತ್ತು ಅದಾನಿ ಅವರಿಗೆ ಬಂತು 47ರ ಸ್ವಾತಂತ್ರ್ಯ ಎಂದು ಅವರು ಹೇಳಿದರು. ಅವರು ಹಾಗೆ ಹೇಳುತ್ತಿದ್ದಾಗ ಸಭಿಕರಲ್ಲಿ ಒಬ್ಬರು ಪದೇಪದೆ ಪ್ರಾಂಮ್ಟ್ ಮಾಡುತ್ತಿದ್ದರು. ಮೊದಲಿಗೆ ಅವರು (ಸಭಿಕ) ಹೇಳಿದ ಪದಗಳನ್ನು ತಮ್ಮ ಭಾಷಣದಲ್ಲಿ ಉಪಯೋಗಿಸಿದ ಮುಖ್ಯಮಂತ್ರಿಗಳಿಗೆ ನಂತರ ಬೇಸರ ತರಿಸತೊಡಗಿತು. ಮತ್ತೊಮ್ಮೆ ಸಭಿಕ ಪ್ರಾಂಮ್ಟ್ ಮಾಡಲು ಮುಂದಾದಾಗ ಅವರು, ಹೇ ಸಾಕು ಸುಮ್ಮಿರಯ್ಯ ಅಂತ ಸುಮ್ಮನಾಗಿಸಿದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on