ಮಾತಾಡುವಾಗ ನಾಲಗೆ ಮೇಲೆ ಸ್ವಾಧೀನ ಕಳೆದುಕೊಳ್ಳದಿದ್ದರೆ ರಾಜು ಕಾಗೆಗೆ ಕ್ಷಮಾಪಣೆ ಕೇಳುವ ಪ್ರಮೇಯ ಬರುತ್ತಿರಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ

Updated on: Oct 23, 2023 | 2:15 PM

ಮೊನ್ನೆ, ಬೆಳಗಾವಿಯ ಅಮರಖೋಡದಲ್ಲಿ ಆಯೋಜಿಸಲಾಗಿದ್ದ್ದ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ಮಾತಾಡಿದ್ದ ಕಾಗೆ, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚೆಂದನೆಯ ನರ್ಸ್ ಗಳು ಬಂದು ಹೇಗಿದ್ದೀರಿ ಅಜ್ಜಾ? ಅಂತ ಕೇಳಿದಾಗ ಮಾನಸಿಕ ವೇದನೆಯಾಗುತಿತ್ತು ಅಂತ ಹೇಳಿ ರಸಿಕತೆಯನ್ನು ಪ್ರದರ್ಶಿಸಿದ್ದರು.

ಚಿಕ್ಕೋಡಿ: ವಯಸ್ಸಾಗುತ್ತಿದ್ದಂತೆ ಬಾಯಿ ಚಪಲ ಜಾಸ್ತಿ ಅಂತ ಕನ್ನಡದಲ್ಲಿ ಗಾದೆಮಾತಿದೆ, ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ಬಿಡುಗಡೆ ಮಾಡಿರುವ ಕ್ಷಮಾಪಣೆಯ (apology) ವಿಡಿಯೋದಲ್ಲಿ ಅವರಾಡಿರುವ ಮಾತು ತನಗೆ ಮೇಲಿನ ಗಾದೆ ಸೂಕ್ತವಾಗಿ ಅನ್ವಯಿಸುತ್ತದೆ ಅಂತ ಹೇಳಿದ ಹಾಗಿದೆ. ಮೊನ್ನೆ, ಬೆಳಗಾವಿಯ ಅಮರಖೋಡದಲ್ಲಿ ಆಯೋಜಿಸಲಾಗಿದ್ದ್ದ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ (Dasara Utsav) ಭಾಗವಹಿಸಿ ಮಾತಾಡಿದ್ದ ಕಾಗೆ, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚೆಂದನೆಯ ನರ್ಸ್ ಗಳು (beautiful nurses) ಬಂದು ಹೇಗಿದ್ದೀರಿ ಅಜ್ಜಾ? ಅಂತ ಕೇಳಿದಾಗ ಮಾನಸಿಕ ವೇದನೆಯಾಗುತಿತ್ತು ಅಂತ ಹೇಳಿ ರಸಿಕತೆಯನ್ನು ಪ್ರದರ್ಶಿಸಿದ್ದರು. ಕಾಗೆ ಆಡಿದ ಮಾತುಗಳು ವಿವಾದಕ್ಕೀಡಾಗಿ ಜನ ಅವರನ್ನು ತಿವ್ರವಾಗಿ ಟೀಕಿಸಿದ್ದರು. ಇದೇ ಹಿನ್ನೆಲೆಯಲ್ಲಿ ತಮ್ಮ ತಪ್ಪೊಪ್ಪಿಗೆ ವಿಡಿಯೋ ರಿಲೀಸ್ ಮಾಡಿರುವ ಕಾಗೆ, ಯಾರನ್ನೂ ನೋಯಿಸುವ ಉದ್ದೇಶದಿಂದ ಹಾಗೆ ಹೇಳಿಲ್ಲ, ನನಗೆ ವಯಸ್ಸಾಗಿರುವ ಬೇಸರಿಕೆಯನ್ನು ಹಾಗೆ ಹೇಳಿಕೊಂಡಿದ್ದೇನೆ, ಅಷ್ಟಾಗಿಯೂ ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಅಂತ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.