ಲೋಕಸಭಾ ಚುನಾವಣೆ ಸಮಯದಲ್ಲಿ ನನ್ನನ್ನು ಜೇಲ್​ನಲ್ಲಿಡುವ ಷಡ್ಯಂತ್ರ ನಡೆದಿದೆ: ಮುನಿರತ್ನ ನಾಯ್ಡು, ಶಾಸಕ

Updated on: Nov 06, 2023 | 1:45 PM

ತಿಹಾರ್ ಜೈಲಿಗಂತೂ ತನ್ನನ್ನು ಕಳಿಸಲಾಗಲ್ಲ, ಲೋಕಲ್ ಕಾರಾಗೃಹಗಳಿಗೆ ಅಟ್ಟುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದ ಮುನಿರತ್ನ ತನ್ನ ಕಚೇರಿಯ ಆಸುಪಾಸಿನಲ್ಲಿ ಯಾವುದಾದರೂ ಅಪಘಾತ ನಡೆದರೂ ನಿಶ್ಚಿತವಾಗಿ ತನ್ನ ಮೇಲೆ ಆರೋಪ ಹೊರಿಸಲಾಗುತ್ತದೆ ಎಂದರು 

ಬೆಂಗಳೂರು: ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ (Pratima murder case) ಸುಖಾಸುಮ್ಮನೆ, ದುರುದ್ದೇಶಪೂರ್ವಕ, ರಾಜಕೀಯ ಕಾರಣ ಮತ್ತು ತೆಜೋವಧೆ ಮಾಡಲು ತನ್ನ ಹೆಸರನ್ನು ಥಳುಕು ಹಾಕುವ ಪ್ರಯತ್ನ ನಡೆದಿದೆ, ಪ್ರಕರಣ ತನಿಖೆ ಜಾರಿಯಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದ ಯಾವುದೇ ಹೇಳಿಕೆ ತಪ್ಪಾಗುತ್ತದೆ, ತನಿಖೆ ಪೂರ್ಣಗೊಂಡ ಬಳಿಕ ತನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಿದ ಪ್ರತಿಯೊಬ್ಬನಿಗೆ ತಕ್ಕ ಉತ್ತರ ನೀಡುವುದಾಗಿ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು (Munirathna Naidu) ಹೇಳಿದರು. ತಮ್ಮ ಕಚೇರಿಯಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಶಾಸಕ ಮುನಿರತ್ನ ಲೋಕಸಭಾ ಚುನಾವಣೆ (Lok Sabha polls) ಸಂದರ್ಭದಲ್ಲಿ ತಾನು ಕ್ಷೇತ್ರದಲ್ಲಿರೋದು ಕೆಲವರಿಗೆ ಬೇಕಿಲ್ಲ, ಹಾಗಾಗೇ ಜೈಲಿಗೆ ಕಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು. ತಿಹಾರ್ ಜೈಲಿಗಂತೂ ತನ್ನನ್ನು ಕಳಿಸಲಾಗಲ್ಲ, ಲೋಕಲ್ ಕಾರಾಗೃಹಗಳಿಗೆ ಅಟ್ಟುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದ ಮುನಿರತ್ನ ತನ್ನ ಕಚೇರಿಯ ಆಸುಪಾಸಿನಲ್ಲಿ ಯಾವುದಾದರೂ ಅಪಘಾತ ನಡೆದರೂ ನಿಶ್ಚಿತವಾಗಿ ತನ್ನ ಮೇಲೆ ಆರೋಪ ಹೊರಿಸಲಾಗುತ್ತದೆ ಎಂದರು

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 06, 2023 01:45 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More