ಮನೆ ಅಥವಾ ದೇವಸ್ಥಾನಗಳಲ್ಲಿ ಪೂಜೆಯ ಸಮಯದಲ್ಲಿ ಮಡಿ ಬಟ್ಟೆ ತೊಟ್ಟು ಹೋಗಬೇಕು ಎಂದು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಮತ್ತು ಈಗ ಕೆಲವರು ದೇವಸ್ಥಾನಗಳಿಗೆ ಹೋಗುವ ಸಮಯದಲ್ಲಿ ಮತ್ತು ಮನೆಯಲ್ಲಿ ಪೂಜೆಯ ಸಮಯದಲ್ಲಿ ರೇಷ್ಮೆ ಬಟ್ಟೆ ತೊಟ್ಟುಕೊಳ್ಳುತ್ತಾರೆ. ರೇಷ್ಮೆ ಬಟ್ಟೆ ಏಕೆ ತೊಡಬೇಕು? ರೇಷ್ಮೆ ಬಟ್ಟೆ ತೊಡುವುದರಿಂದ ಏನು ಲಾಭ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.