ನಿತ್ಯ ಭಕ್ತಿ: ಬೈಕ್, ಕಾರ್​ನಲ್ಲಿ ಕಾಳು ಮೆಣಸಿದ್ರೆ ಅಪಘಾತದಿಂದ ಪಾರಾಗಬಹುದಾ?

Updated on: Aug 28, 2025 | 7:02 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರುಜಿ ವಾಹನಗಳ ಸುರಕ್ಷತೆಗಾಗಿ ಏನು ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ಅರಿಶಿನದ ದಾರದಲ್ಲಿ ಕಟ್ಟಿದ 11 ಕಾಳುಮೆಣಸುಗಳನ್ನು ವಾಹನಕ್ಕೆ ಕಟ್ಟುವುದರಿಂದ ಮೂರು ವರ್ಷಗಳವರೆಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗಿದೆ. ಮಂಗಳವಾರ ಅಥವಾ ಶುಕ್ರವಾರ ಈ ವಿಧಾನವನ್ನು ಅನುಸರಿಸುವುದು ಶುಭವೆಂದು ನಂಬಲಾಗಿದೆ.

ವಾಹನ ಸುರಕ್ಷತೆಗೆ ಸಂಬಂಧಿಸಿದ ಒಂದು ಸಾಂಪ್ರದಾಯಿಕ ವಿಧಾನವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರುಜಿ ತಿಳಿಸಿದ್ದಾರೆ. 11 ಕಾಳುಮೆಣಸುಗಳನ್ನು ಅರಿಶಿನದ ಚಿಕ್ಕ ಬಟ್ಟೆಯಲ್ಲಿ ಕಟ್ಟಿ, ಅರಿಶಿನದ ದಾರದಿಂದ ಕಟ್ಟಿ ವಾಹನಕ್ಕೆ ಕಟ್ಟಬೇಕು. ಮಂಗಳವಾರ ಅಥವಾ ಶುಕ್ರವಾರ ಈ ಕ್ರಿಯೆಯನ್ನು ಮಾಡುವುದು ಶುಭಕರ ಎಂದು ಹೇಳಲಾಗಿದೆ. ಈ ಪದ್ಧತಿಯಿಂದ ವಾಹನ ಮೂರು ವರ್ಷಗಳ ಕಾಲ ಅಪಘಾತಗಳಿಂದ ರಕ್ಷಣೆ ಪಡೆಯುತ್ತದೆ ಎಂಬ ನಂಬಿಕೆಯಿದೆ. ಈ ವಿಧಾನವನ್ನು ಕೈಗೊಳ್ಳುವಾಗ “ಓಂ ಶರವಣಭವಾಯ ನಮಃ” ಎಂಬ ಮಂತ್ರವನ್ನು 11ಬಾರಿ ಜಪಿಸಬೇಕು ಎಂದು ತಿಳಿಸಲಾಗಿದೆ. ಇದು ನಂಬಿಕೆಯ ಆಧಾರದ ಮೇಲೆ ಮಾಡುವ ಒಂದು ವಿಧಾನ ಎಂದು ಸ್ಪಷ್ಟಪಡಿಸಲಾಗಿದೆ.