ಸೂರ್ಯ ಸಿಂಹ ರಾಶಿಯಲ್ಲೂ, ಚಂದ್ರ ವೃಷಭ ರಾಶಿಯಲ್ಲೂ ಸಂಚಾರ

Updated on: Sep 13, 2025 | 6:26 AM

ಸೆಪ್ಟೆಂಬರ್ 13ರ ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮೇಷ ಮತ್ತು ವೃಷಭ ರಾಶಿಯವರಿಗೆ ಸಂಪತ್ತು ವೃದ್ಧಿ, ಉದ್ಯೋಗದಲ್ಲಿ ಬಡ್ತಿ ಹಾಗೂ ಕೆಲವು ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವಂತೆ ಸಲಹೆ ನೀಡಲಾಗಿದೆ. ಪಶ್ಚಿಮ ದಿಕ್ಕಿನ ಪ್ರಯಾಣ ಶುಭಕರ ಎಂದೂ ಹೇಳಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​ 13: ಇಂದಿನ ದಿನದ ಪಂಚಾಂಗದ ಪ್ರಕಾರ ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಕೃಷ್ಣ ಪಕ್ಷ, ಷಷ್ಠಿ, ಕೃತಿಕ ನಕ್ಷತ್ರ, ಹರ್ಷಣ ಯೋಗ, ವಣಿಕ ಕರಣ ಇದೆ. ರಾಹುಕಾಲ 9 ಗಂಟೆ 11 ನಿಮಿಷದಿಂದ 10 ಗಂಟೆ 43 ನಿಮಿಷದವರೆಗೆ ಇರಲಿದೆ. ಸಂಕಲ್ಪ ಕಾಲ 1 ಗಂಟೆ 47 ನಿಮಿಷದಿಂದ 3 ಗಂಟೆ 19 ನಿಮಿಷದವರೆಗೆ ಇರುತ್ತದೆ. ಮಂಗಳ ಗ್ರಹ ಇಂದು ಕನ್ಯಾ ರಾಶಿಯಿಂದ ತುಲಾ ರಾಶಿಗೆ 9 ಗಂಟೆ 34 ನಿಮಿಷಕ್ಕೆ ಪ್ರವೇಶಿಸುತ್ತದೆ. ಇಂದು ಚಂದನ ಶಸ್ತಿ, ಪಿತ್ರಪಕ್ಷದ ವಿಶೇಷ ದಿನವಾಗಿದೆ ಮತ್ತು ಬ್ಯಾಂಕ್ ರಜೆಯೂ ಇದೆ. ಸೂರ್ಯ ಸಿಂಹ ರಾಶಿಯಲ್ಲೂ, ಚಂದ್ರ ವೃಷಭ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ.

 

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More