Loading video

DK brothers: ಬೇಸರ ಹಾಗೂ ವಿಷಾದದ ಮುಖಭಾವದೊಂದಿಗೆ ರಾಹುಲ್ ಗಾಂಧಿ ಮನೆಯಿಂದ ಹೊರಬಿದ್ದ ಡಿಕೆ ಸಹೋದರರು

|

Updated on: May 17, 2023 | 2:57 PM

ಮುಖ್ಯಮಂತ್ರಿ ಯಾರೆನ್ನುವ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲವಾದರೂ ಮೂಲಗಳ ಪ್ರಕಾರ ಹೈಕಮಾಂಡ್ ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದೆ.

ದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಅವರ ಸಹೋದರ ಡಿಕೆ ಸುರೇಶ್ (DK Suresh) ತುಂಬಾ ಬೇಸರಗೊಂಡಿದ್ದಾರೆ. ರಾಹುಲ್ ಗಾಂಧಿಯೊಂದಿಗೆ (Rahul Gandhi) ಅವರ ನಿವಾಸದಲ್ಲಿ ಚರ್ಚೆ ನಡೆಸಿ ಹೊರಬಿದ್ದಾಗ ಅವರಿಬ್ಬರ ಮುಖದಲ್ಲಿ ನಿರಾಶೆ ಮಡುಗಟ್ಟಿದ್ದು ಸ್ಪಷ್ಟವಾಗಿ ಗೋಚರಿಸುತಿತ್ತು. ಅವರು ಯಾರೊಂದಿಗೂ ಮಾತಾಡುವ ಮನಸ್ಥಿತಿಯಲ್ಲಿರಲಿಲ್ಲ. ಡಿಕೆ ಸಹೋದರರು ಅಲ್ಲಿಂದ ನೇರವಾಗಿ ತೆರಳಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರ ನಿವಾಸಕ್ಕೆ. ಮುಖ್ಯಮಂತ್ರಿ ಯಾರೆನ್ನುವ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲವಾದರೂ ಮೂಲಗಳ ಪ್ರಕಾರ ಹೈಕಮಾಂಡ್ ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ