ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ

Updated on: Apr 11, 2025 | 7:03 AM

ಹೋಮದಲ್ಲಿ ತುಪ್ಪ ಮತ್ತು ಸೌದೆ ಅರ್ಪಿಸುವುದರಿಂದ ವಾತಾವರಣ ಮತ್ತು ಮನಸ್ಸು ಶುದ್ಧಿಯಾಗುತ್ತದೆ. ರೋಗಗಳಿಂದ ಮುಕ್ತಿ ಸಿಗುತ್ತದೆ. ದೀಪಾರಾಧನೆಯಲ್ಲಿ ತುಪ್ಪ ಬಳಸುವುದು ಕೂಡ ಶುಭವೆಂದು ಹೇಳಲಾಗುತ್ತದೆ. ಇದರಿಂದ ಕುಟುಂಬದಲ್ಲಿ ಆರೋಗ್ಯ ಮತ್ತು ಐಶ್ವರ್ಯ ಹೆಚ್ಚುತ್ತದೆ ಎಂಬ ನಂಬಿಕೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಏಪ್ರಿಲ್​ 11: ಹಿಂದೂ ಧರ್ಮದಲ್ಲಿ ಹೋಮ ಪ್ರಮುಖವಾದ ಆಚಾರವಾಗಿದೆ. ಹೋಮ ಮಾಡುವ ಸಂದರ್ಭದಲ್ಲಿ ತುಪ್ಪ ಮತ್ತು ಸೌದೆ ಅರ್ಪಿಸುವುದು ಬಹಳ ಮುಖ್ಯ. ತುಪ್ಪ ಮತ್ತು ಸೌದೆ ಅಗ್ನಿಗೆ ಅರ್ಪಿಸುವುದರಿಂದ ವಾತಾವರಣ ಶುದ್ಧಿಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ ಮತ್ತು ರೋಗಗಳಿಂದ ಮುಕ್ತಿ ಸಿಗುತ್ತದೆ. ಇದು ಮನಸ್ಸಿನ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಹೋಮದಲ್ಲಿ ಅರ್ಪಿಸಿದ ತುಪ್ಪ ಮತ್ತು ಸೌದೆ ಅಗ್ನಿಯ ಮೂಲಕ ಪರಮಾತ್ಮನನ್ನು ತಲುಪುತ್ತದೆ ಎಂಬ ನಂಬಿಕೆ. ವಿಡಿಯೋ ನೋಡಿ.

Published on: Apr 11, 2025 07:02 AM