ಮಾಧ್ಯಮ ಪ್ರತಿನಿಧಿಗಳ ಎದುರು ಸಚಿವ ಸಿ ಎನ್ ಅಶ್ವಥ್ ನಾರಾಯಣರನ್ನು ಲೇವಡಿ ಮಾಡಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 17, 2023 | 6:11 PM

ರಾಮನಗರದಲ್ಲಿ ಆಶ್ವಥ್ ನಾರಾಯಣ ರಾಮಮಂದಿರ ಕಟ್ಟುತ್ತಾರಂತೆ ಅಂತ ಮಾಧ್ಯಮದವರೊಬ್ಬರು ಹೇಳಿದಾಗ ಶಿವಕುಮಾರ್ ಸಚಿವರನ್ನು ಏಕವಚನದಲ್ಲಿ ಜರಿಯಲು ಪ್ರಾರಂಭಿಸಿದರು

ಬೆಂಗಳೂರು: 2023-24 ಸಾಲಿನ ರಾಜ್ಯ ಮುಂಗಡ ಪತ್ರ ಮಂಡನೆಯಾದ ಬಳಿಕ ವಿಧಾನ ಸೌಧದ ಹೊರಗಡೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರನ್ನು ಅಕ್ಷರಶಃ ಲೇವಡಿ ಮಾಡಿದರು. ರಾಮನಗರದಲ್ಲಿ ಆಶ್ವಥ್ ನಾರಾಯಣ ರಾಮಮಂದಿರ (Ram Mandir) ಕಟ್ಟುತ್ತಾರಂತೆ ಅಂತ ಮಾಧ್ಯಮದವರೊಬ್ಬರು ಹೇಳಿದಾಗ ಶಿವಕುಮಾರ್ ಸಚಿವರನ್ನು ಏಕವಚನದಲ್ಲಿ ಜರಿಯಲು ಪ್ರಾರಂಭಿಸಿದರು. ಅವನೇನು ರಾಮಮಂದಿರ ಕಟ್ಟೋದು, ಮೊದಲು ಅವನು ರಾಮನಗರದಲ್ಲಿ ತನ್ನ ಪಕ್ಷದ ಕಚೇರಿ ಕಟ್ಟಿಕೊಳ್ಳಲಿ ಅಂತ ಹೇಳಿ, ಎಲ್ಹೋದ ಆ ಗಂಡು, ನಮ್ಮ ನಾಯಕರನ್ನು ಗುಂಡಿಟ್ಟು ಸಾಯಿಸುತ್ತಾನಂತೆ, ಅಯ್ಯೋ ಇವನಾ… ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.