Karnataka Assembly Polls: ಗಣ್ಯರಿಗೆ ಭದ್ರತೆ ಒದಗಿಸುವ ಮೈಸೂರು ಪೊಲೀಸ್ ಶ್ವಾನದಳದ ‘ಯೋಧ’ ಹತ್ತು ಜನರ ಕಾರ್ಯ ಒಬ್ಬನೇ ನಿರ್ವಹಿಸುತ್ತಾನೆ!

ಅರುಣ್​ ಕುಮಾರ್​ ಬೆಳ್ಳಿ

Updated on: May 01, 2023 | 11:58 AM

ಈ ಬೆಲ್ಜಿಯನ್ ಶೆಪ್ಹರ್ಡ್ ನಾಯಿಗೆ ಯೋಧ ಅಂತ ಹೆಸರು ನೀಡಿರುವುದು ಅತ್ಯಂತ ಸಮಂಜವಾಗಿದೆ.

ಮೈಸೂರು: ವಿಡಿಯೋದಲ್ಲಿ ಕಾಣುತ್ತಿರುವ ನಾಯಿಯನ್ನೊಮ್ಮೆ ನೋಡಿ. ಮೈಸೂರು ಪೊಲೀಸ್ ಶ್ವಾನದಳದ (dog squad) ಹೆಮ್ಮೆಯ ಸದಸ್ಯನಾಗಿರುವ ಈ ಬೆಲ್ಜಿಯನ್ ಶೆಪ್ಹರ್ಡ್ (Belgian Shepherd) ನಾಯಿಗೆ ಯೋಧ (Yodha) ಅಂತ ಹೆಸರು ನೀಡಿರುವುದು ಅತ್ಯಂತ ಸಮಂಜವಾಗಿದೆ. ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ದೆಹಲಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾಡ್ರಾ, ರಾಹುಲ್ ಗಾಂಧಿ ಮೊದಲಾದ ನಾಯಕರ ದಂಡು ಪ್ರಚಾರಕ್ಕೆಂದು ರಾಜ್ಯದ ಸಾಂಸ್ಕೃತಿಕ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದು ಮಾಡಲಿರುವುದು ನಮಗೆ ಗೊತ್ತಿದೆ. ಗಣ್ಯ ಮತ್ತು ಅತಿಗಣ್ಯ ನಾಯಕರಿಗೆ ಮೈಸೂರು ಪೊಲೀಸ್ ಒದಗಿಸುತ್ತಿರುವ ಭದ್ರತೆಯ ಪ್ರಮುಖ ಭಾಗ ಈ ಯೋಧ ಆಗಿದೆ. ಅದು ಅಪಾರ ಬುದ್ಧಿಮತ್ತೆ ತಳಿಯ ನಾಯಿಯಾಗಿದ್ದು ಹತ್ತು ಜನ ಪೋಲಿಸರ ಕಾರ್ಯವನ್ನು ಒಂಟಿಯಾಗಿ ನಿರ್ವಹಿಸುವ ಕ್ಷಮತೆ ಹೊಂದಿದೆ ವಾಕ್ ಥ್ರೂ ಮಾಡಿರುವ ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.