Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ, ವಿಡಿಯೋ ನೋಡಿ
ನಿತ್ಯ ಭಕ್ತಿ

Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ, ವಿಡಿಯೋ ನೋಡಿ

Updated on: Jan 13, 2025 | 7:00 AM

ಹಣೆಬರಹ ಅಥವಾ ಪ್ರಾರಬ್ಧದ ಪರಿಕಲ್ಪನೆ ಬಗ್ಗೆ ತಿಳಿಯಿರಿ. ಮನುಷ್ಯನ ಆಯುಷ್ಯ, ಕರ್ಮ, ಹಣ, ವಿದ್ಯೆ ಮತ್ತು ಮರಣ ಈ ಐದು ಪ್ರಾರಬ್ಧಗಳು ಗರ್ಭದಲ್ಲಿಯೇ ನಿರ್ಧರಿತವಾಗುತ್ತವೆ ಎಂಬ ನಂಬಿಕೆಯನ್ನು ವಿವರಿಸಲಾಗಿದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರುಜಿ ಅವರು ಹಣೆಬರಹವನ್ನು ಬದಲಾಯಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಲೇಖನವು ಸ್ವಯಂ ಇಚ್ಛೆ ಮತ್ತು ವಿಧಿಯ ನಡುವಿನ ಸಂಘರ್ಷವನ್ನು ಪರಿಶೀಲಿಸುತ್ತದೆ.

ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ | ಪಂಚೈತಾನಿ ಹಿ ಸೃಜ್ಯಂತೇ ಗರ್ಭಸ್ಥ ವ ದೇಹಿನಃ ||
ಹಣೆ ಬರಹ ಅಥವಾ ವಿಧಿ ಲಿಖಿತ. ಮನುಷ್ಯನ ಐದು ಪ್ರಾರಬ್ಧಗಳಿವು. ಮನುಷ್ಯನ ಆಯುಷ್ಯ, ಕರ್ಮ, ಹಣ, ವಿದ್ಯೆ ಮತ್ತು ಮರಣ ಎಂಬ ಈ ಐದು ಯೋಗಗಳು, ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಸೃಷ್ಟಿಯಾಗಿಬಿಟ್ಟಿರುತ್ತವೆ. ಅನೇಕ ವಿಷಯಗಳು ನಮಗೆ ಅರ್ಥವಾಗುವುದೇ ಇಲ್ಲ. ನಾವು ಎಷ್ಟೇ ಪ್ರಯತ್ನಪಟ್ಟರೂ ಕೆಲವು ಘಟನೆಗಳನ್ನು ತಪ್ಪಿಸುವುದಕ್ಕಾಗಲೀ ಬದಲಿಸುವುದಕ್ಕಾಗಲೀ ನಮಗೆ ಆಗುವುದೇ ಇಲ್ಲ. ಇದಕ್ಕೇ ಹಣೆಬರಹ, ಅಥವಾ ಪ್ರಾರಬ್ಧ ಎಂದು. ತಾಯಿಯ ಗರ್ಭವನ್ನು ಪ್ರವೇಶಿಸಿದ ಕೂಡಲೇ ಆ ಭ್ರೂಣದ ಮೇಲೆ ಬ್ರಹ್ಮನು ಬರೆದುಬಿಡುತ್ತಾನಂತೆ. ಅದಕ್ಕೇ ಬ್ರಹ್ಮ ಲಿಖಿತ ಎಂದೂ ಹೆಸರು. ಹಣ ಬರಹವನ್ನು ಬದಲಾಯಿಸಿಕೊಳ್ಳಲು ಸಾಧ್ಯವೆ ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗೂರುಜಿ ಉತ್ತರ ನೀಡಿದ್ದಾರೆ.

Follow Us
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Read More