Video: ಊಟ ತರಿಸಿ ದುಡ್ಡು ಕೊಡದೆ ಸತಾಯಿಸಿದ ಕುಡುಕ, ಪೊಲೀಸರು ಬಂದ ಮೇಲೆ ಏನಾಯ್ತು ನೋಡಿ

Updated on: Oct 01, 2025 | 2:59 PM

ಕುಡುಕನೊಬ್ಬ ಆನ್​ಲೈನ್​​ನಲ್ಲಿ ಊಟ ಆರ್ಡರ್ ಮಾಡಿ, ಡೆಲಿವರಿ ಏಜೆಂಟ್​​ಗೆ ದುಡ್ಡು ಕೊಡದೆ ಸತಾಯಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಕುಡುಕ ಶಿಕ್ಷಕರೊಬ್ಬರು ಊಟ ತರಿಸಿ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಆತ ಅತಿಯಾಗಿ ಕುಡಿದಿದ್ದ, ಬಳಿಕ ಡೆಲಿವರಿ ಏಜೆಂಟ್ ಪೊಲೀಸರನ್ನು ಕರೆಸಿ ಸಮಸ್ಯೆ ಇತ್ಯರ್ಥ ಪಡಿಸಿದರು. ಆವರು ಮೊದಲು ಪೊಲೀಸ್ ಠಾಣೆಗೆ ಎಳೆದುಕೊಂಡು ಬಂದರು. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಕುಡಿದಿದ್ದಾನೆಂದು ಗೊತ್ತಾಗಿತ್ತು.

ನವದೆಹಲಿ, ಅಕ್ಟೋಬರ್ 01: ಕುಡುಕನೊಬ್ಬ ಆನ್​ಲೈನ್​​ನಲ್ಲಿ ಊಟ ಆರ್ಡರ್ ಮಾಡಿ, ಡೆಲಿವರಿ ಏಜೆಂಟ್​​ಗೆ ದುಡ್ಡು ಕೊಡದೆ ಸತಾಯಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಕುಡುಕ ಶಿಕ್ಷಕರೊಬ್ಬರು ಊಟ ತರಿಸಿ ದುಡ್ಡು ಕೊಡಲು ನಿರಾಕರಿಸಿದ್ದಾರೆ. ಆತ ಅತಿಯಾಗಿ ಕುಡಿದಿದ್ದ, ಬಳಿಕ ಡೆಲಿವರಿ ಏಜೆಂಟ್ ಪೊಲೀಸರನ್ನು ಕರೆಸಿ ಸಮಸ್ಯೆ ಇತ್ಯರ್ಥ ಪಡಿಸಿದರು. ಆವರು ಮೊದಲು ಪೊಲೀಸ್ ಠಾಣೆಗೆ ಎಳೆದುಕೊಂಡು ಬಂದರು. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಕುಡಿದಿದ್ದಾನೆಂದು ಗೊತ್ತಾಗಿತ್ತು.

ಆ ವ್ಯಕ್ತಿ ಮಾಡಿದ ತಪ್ಪಿನಿಂದಾಗಿ ಹೆಚ್ಚಿನ ಹಣ ಕೊಡಬೇಕಾಯಿತು. ಆತನ ಮನೆ ಬಾಗಿಲಿನ ಹೊರಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಪೊಲೀಸರು ಶಿಕ್ಷಕ ರಿಷಿ ಕುಮಾರ್ ಅವರನ್ನು ಬಲವಂತವಾಗಿ ಅವರ ಕಟ್ಟಡದ ಮೆಟ್ಟಿಲುಗಳಿಂದ ಕೆಳಗೆ ಕರೆದೊಯ್ಯುತ್ತಿರುವುದು ಸೆರೆಯಾಗಿದೆ. ಯಾವುದೇ ದೂರು ದಾಖಲಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More