ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಾವೇರಿ ಜಿಲ್ಲೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು (KDP Meeting). ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಅವರ ಕ್ಯಾಬಿನೆಟ್ ಸಹೋದ್ಯೋಗಿಗಳಾಗಿರುವ ಶಿವಾನಂದ ಪಾಟೀಲ್, ಭೈರತಿ ಸುರೇಶ್, ಎನ್ ಚಲವರಾಯಸ್ವಾಮಿ, ಹೆಚ್ ಕೆ ಪಾಟೀಲ್, ಎಮ್ ಎಲ್ ಸಿ ಸಲೀಂ ಅಹ್ಮದ್ ಮತ್ತು ಜಿಲ್ಲೆಯ ಐವರು ಶಾಸಕರು ಭಾಗಿಯಾಗಿದ್ದರು. ಅದರೆ ಸಭೆಯಲ್ಲಿ ಒಬ್ಬರ ಗೈರು ಹಾಜರಿ ಎದ್ದುಕಾಣುತಿತ್ತು. ಹೌದು, ನಿಮ್ಮ ಊಹೆ ಸರಿ, ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಭೆಗೆ ಹಾಜರಾಗಲಿಲ್ಲ. ಬಿಜೆಪಿಯ 10 ಶಾಸಕರು ಅಧಿವೇಶನದಲ್ಲಿ ಸಸ್ಪೆಂಡ್ ಆದ ಬಳಿಕ ಪಕ್ಷದ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಯುದ್ಧ ಸಾರಿರೋದು ಕನ್ನಡಿಗರಿಗೆಲ್ಲ ಗೊತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ