ಮಹಿಳೆಯರಲ್ಲಿ ಮನವಿ ಟಿಕೆಟ್​ ಕೇಳಿ ಪಡೆಯಿರಿ: ಶಕ್ತಿ ಯೋಜನೆ ಅರಿವು ಮೂಡಿಸುತ್ತಿರುವ ಕಂಡಕ್ಟರ್ ಹಾಡು ವಿಡಿಯೋ ವೈರಲ್

Updated on: Jun 25, 2023 | 1:22 PM

ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಕೆಎಸ್ ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನಿಂದ ಹಾಡು ಹಾಡುವ ಮೂಲಕ ಟಿಕೆಟ್​ ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ರಾಯಚೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕೆಎಸ್​ಆರ್​ಟಿಸಿ ಬಸ್​ಗಳು ಫುಲ್​ ರಶ್​ ಆಗಿ ಓಡಾಡುತ್ತಿವೆ. ಇನ್ನು ಇದರ ಮಧ್ಯೆ ಕೆಲ ಶಕ್ತಿ ಯೋಜನೆ ಸಂಬಂಧ ಕೆಲವೆಡೆ ಗಲಾಟೆಗಳು ನಡೆಯುತ್ತಿವೆ. ಇನ್ನು ಕಾಮಿಡಿ ಪ್ರಸಂಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಸ್ ನಿರ್ವಾಹಕರು ಟಿಕೆಟ್​ ನೀಡುಲು ಹರಸಾಹಸಪಡುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಅದರಂತೆ ಇಲ್ಲೋರ್ವ ಕಂಡಕ್ಟರ್​, ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸಂಬಂಧ ಕಂಡಕ್ಟರ್ ವಿಭಿನ್ನ ರೀತಿ ಅಭಿಯಾನ ಮಾಡುತ್ತಿದ್ದಾರೆ. ಹೌದು.. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಕೆಎಸ್ ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನಿಂದ ಹಾಡು ಹಾಡುವ ಮುಳಕ ಟಿಕೆಟ್​ ತೆಗೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪಕ್ಕಾ ಡಾ.ರಾಜಕುಮಾರ್ ಅಭಿಮಾನಿಯಾಗಿರುವ ಕಂಡಕ್ಟರ್ ಗುರು ದೇವರಮನಿ, ಅಣ್ಣಾವ್ರ ಹಾಡುಗಳಿಗೆ ಸರ್ಕಾರದ ಶಕ್ತಿ ಯೋಜನೆ ಕುರಿತು ಸಾಹಿತ್ಯ ರಚಿಸಿ ಹಾಡು ಹಾಡುತ್ತಾರೆ. ಸದ್ಯ ಗುರು ದೇವರಮನಿ ವಿಡಿಯೋ ವೈರಲ್ ಆಗುತ್ತಿದೆ.

Loading...
Unable to load recommendations.
Follow Us