ಸದನದಲ್ಲಿ ಮಂತ್ರಿಗಳ ಗೈರು ಹಾಜರಿಗೆ ಕ್ಷಮೆಯಾಚಿಸಿದ ಸರ್ಕಾರದ ಚೀಫ್ ವ್ಹಿಪ್ ಅಶೋಕ್ ಪಟ್ಟಣ್

Updated on: Feb 14, 2024 | 5:26 PM

ಬಿಜೆಪಿ ಶಾಸಕ ಸುನಿಲ ಕುಮಾರ ತಮ್ಮ ಬೇಸರ ವ್ಯಕ್ತಪಡಿಸುತ್ತಾ, ಮಂತ್ರಿಗಳು ಸರಿಯಾದ ಸಮಯಕ್ಕೆ ಸದನದೊಳಗೆ ಬರುವಂತೆ ತಾಕೀತು ಮಾಡಲು ತಮ್ಮ ಕಚೇರಿಯ ಅಧಿಕಾರಿಗಳನ್ನೇ ನೇಮಿಸುವಂತೆ ಸಭಾಧ್ಯಕ್ಷರಿಗೆ ಹೇಳಿದರು. ಆಧಿಕಾರಿಗಳು ಹೇಳಿದರೆ ಅವರಿಗೆ ಅರ್ಥವಾಗಲ್ಲ, ನೀವು ವಿರೋಧ ಪಕ್ಷದವರೇ ಅವರನ್ನು ಸದನದಲ್ಲಿ ತಿವಿಯಬೇಕು ಅಂತ ಸ್ಪೀಕರ್ ಪ್ರತಿಕ್ರಿಯಿಸಿದರು.

ಬೆಂಗಳೂರು: ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭಗೊಂಡು ಎರಡು ದಿನ ಮಾತ್ರ ಕಳೆದಿದೆ, ಇವತ್ತು ಮೂರನೇ ದಿನ. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಅಧಿವೇಶನ ಆಗಲೇ ಸಾಕೆನಿಸಿಬಿಟ್ಟಿದೆ. ಸದನದಲ್ಲಿ ಆಡಳಿತ ಪಕ್ಷದ ಸದಸ್ಯರ ಗೈರುಹಾಜರಿ ವಿರೋಧ ಪಕ್ಷದ ಶಾಸಕರಿಗೆ ರೊಚ್ಚಿಗೆಬ್ಬಿಸಿದರೆ ಸ್ಪೀಕರ್ ಯುಟಿ ಖಾದರ್ (UT Khader) ಅವರಿಗೆ ನಿರಾಶರಾಗಿಸಿತು. ಬಿಜೆಪಿ ಶಾಸಕ ಸುನಿಲ ಕುಮಾರ (Sunil Kumar) ತಮ್ಮ ಬೇಸರ ವ್ಯಕ್ತಪಡಿಸುತ್ತಾ, ಮಂತ್ರಿಗಳು ಸರಿಯಾದ ಸಮಯಕ್ಕೆ ಸದನದೊಳಗೆ ಬರುವಂತೆ ತಾಕೀತು ಮಾಡಲು ತಮ್ಮ ಕಚೇರಿಯ ಅಧಿಕಾರಿಗಳನ್ನೇ ನೇಮಿಸುವಂತೆ  ಸಭಾಧ್ಯಕ್ಷರಿಗೆ ಹೇಳಿದರು. ಅಧಿಕಾರಿಗಳು ಹೇಳಿದರೆ ಅವರಿಗೆ ಅರ್ಥವಾಗಲ್ಲ, ನೀವು ವಿರೋಧ ಪಕ್ಷದವರೇ ಅವರನ್ನು ಸದನದಲ್ಲಿ ತಿವಿಯಬೇಕು ಅಂತ  ಖಾದರ್ ಹೇಳಿದರು. ಚೀಫ್ ವ್ಹಿಪ್ ಮಾತಿಗೂ ಅವರು ಬೆಲೆ ಕೊಡುವಂತೆ ಕಾಣುತ್ತಿಲ್ಲ, ವ್ಹಿಪ್ ಮೇಲೆ ಮತ್ತೊಬ್ಬ ವ್ಹಿಪ್ ನನ್ನು ನೇಮಕ ಮಾಡಿ ಅಂತ ವಿರೋಧ ಪಕ್ಷದ ನಾಯಕರು ಹೇಳಿದಾಗ ಸರ್ಕಾರದ ಚೀಫ್ ವ್ಹಿಪ್ ಅಶೋಕ ಪಟ್ಟಣ್ (Ashok Pattan) ಎದ್ದು ನಿಂತು ಕ್ಷಮೆಯಾಚಿಸಿ ನಾಳೆಯಿಂದ ಎಲ್ಲರ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ಏರ್ಪಾಟು ಮಾಡೋದಾಗಿ ಹೇಳಿದರು. ಹಾಗಾದರೆ, ಸದನದ ಕಲಾಪವನ್ನು ನಾಳೆಗೆ ಮುಂದೂಡಿ ಅಂತ ಸುನೀಲ ಕುಮಾರ ಹೇಳಿದಾಗ ಅದು ಸಭಾಧ್ಯಕ್ಷರು ತೆಗೆದುಕೊಳ್ಳಬಹುದಾದ ನಿರ್ಣಯ ಅಂತ ಪಟ್ಟಣ್ ಹೇಳುತ್ತಾರೆ. ಅದೇ ಸಮಯಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಸದನದೊಳಗೆ ಬರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More