OPS vs NPS: ಎನ್ ಪಿಎಸ್ ರದ್ದುಗೊಳಿಸಿ ಹಳೆ ಪೆನ್ಷನ್ ಜಾರಿಗೊಳಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಮನವಿ ಮಾಡಿದ ಎನ್ ಪಿಎಸ್ ನೌಕರರ ಸಂಘ

|

Updated on: Jun 12, 2023 | 6:06 PM

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಂತಾರಾಮ್, ಉಪ ಮುಖ್ಯಮಂತ್ರಿಗಳು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಹೇಳಿದರು.

ಬೆಂಗಳೂರು: ಹೊಸ ಪಿಂಚಣಿ ಪದ್ಧತಿಯನ್ನು (New Pension Scheme) ರಾಜ್ಯ ಸರ್ಕಾರೀ ನೌಕರರು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ರಾಜ್ಯ ಸರ್ಕಾರೀ ನೌಕರರ ಎನ್ ಪಿ ಎಸ್ ಸಂಘದ ಅಧ್ಯಕ್ಷ ಶಾಂತಾರಾಮ್ (Shantaram) ಅವರ ನೇತೃತ್ವದಲ್ಲಿ ವಿವಿಧ ಸರ್ಕಾರೀ ನೌಕರರ ಸಂಘಟನೆಗಳ ನಿಯೋಗವೊಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಹೊಸ ಪೆನ್ಷನ್ ಸ್ಕೀಮ್ ರದ್ದುಗೊಳಿಸಿ ಹಳೆ ಹಳೆ ಪೆನ್ಷನ್ ಸ್ಕೀಮನ್ನು ಜಾರಿಗೊಳಿಸುವಂತೆ ಮನವಿ ಮಾಡಿತು. ಶಿವಕುಮಾರ್ ಅವರ ಭೇಟಿಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಂತಾರಾಮ್, ಉಪ ಮುಖ್ಯಮಂತ್ರಿಗಳು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಹೇಳಿದರು. ಒಪಿಎಸ್ ಅನ್ನು ಆದ್ಯತೆಯಾಗಿ ಪರರಿಣಿಸಿ ಆದಷ್ಟು ಬೇಗ ಇನ್ನೊಂದು ಸಭೆ ಕರೆಯುವ ಭರವಸೆಯನ್ನು ಶಿವಕುಮಾರ್ ನೀಡಿದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on