ಮುದ್ದು ಕರುವಿಗೆ ಅದ್ಧೂರಿ ನಾಮಕರಣ: ನವನೀತ ಗೋ ಶಾಲೆಯಲ್ಲಿ ಸಡಗರ, ಸಂಭ್ರಮ

Edited By: ಆಯೇಷಾ ಬಾನು

Updated on: Dec 14, 2023 | 2:23 PM

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನವನೀತ ಗೋ ಶಾಲೆಯಲ್ಲಿ ಮಕ್ಕಳಿಗೆ ನಾಮಕರಣ ಮಾಡಿದಂತೆ ಹಸುವಿನ ಕರುವಿಗೆ ನಾಮಕರಣ ಮಾಡಲಾಗಿದೆ. ತೊಟ್ಟಿಲಿಗೆ ಹೂ ಗಳಿಂದ ಶೃಂಗಾರ ಮಾಡಿ ಮುತೈದೆಯರೆಲ್ಲ ಸೇರಿಕೊಂಡು ಹಸುವಿನ ಕರುವಿಗೆ ತಿಲಕವನಿಟ್ಟು, ದೃಷ್ಟಿ ತೆಗೆದು ತುಳಸಿ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ.

ಕಲಬುರಗಿ, ಡಿ.14: ನವನೀತ ಗೋ ಶಾಲೆಯಲ್ಲಿ ಹಸುವಿನ ಕರುವಿಗೆ (Calf) ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ ನಾಮಕರಣ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನವನೀತ ಗೋ ಶಾಲೆಯಲ್ಲಿ ಮಕ್ಕಳಿಗೆ ನಾಮಕರಣ (Naming Ceremony) ಮಾಡಿದಂತೆ ಹಸುವಿನ ಕರುವಿಗೆ ನಾಮಕರಣ ಮಾಡಲಾಗಿದೆ. ಕರಿವಿಗೆ ತೊಟ್ಟಿಲಲ್ಲಿ ಹಾಕಿ ಶಾಸ್ತ್ರೋಸ್ತವಾಗಿ ಮಹಿಳೆಯರೆಲ್ಲ ಸೇರಿ ಅದ್ದೂರಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ.

ತೊಟ್ಟಿಲಿಗೆ ಹೂ ಗಳಿಂದ ಶೃಂಗಾರ ಮಾಡಿ ಮುತೈದೆಯರೆಲ್ಲ ಸೇರಿಕೊಂಡು ಹಸುವಿನ ಕರುವಿಗೆ ತಿಲಕವನಿಟ್ಟು, ದೃಷ್ಟಿ ತೆಗೆದು ತುಳಸಿ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ. ತೊಟ್ಟಿಲು ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಸಿಹಿ ಊಟ ಉಣಬಡಿಸಲಾಯಿತು. ನವನೀತ ಗೋ ಶಾಲೆಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ಕರುವಿಗೆ ಅದ್ಧೂರಿಯಾದ ನಾಮಕರಣ ಕಾರ್ಯಕ್ರಮ ಏರ್ಪಡಿಸಿದ್ದು ವಿಶೇಷವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More