Karnataka Assembly Polls; ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಅಂತ ಹೆಚ್ ಡಿ ದೇವೇಗೌಡರ ನಿರ್ಣಯ ಅಂತಿಮ: ಹೆಚ್ ಡಿ ರೇವಣ್ಣ

|

Updated on: Apr 03, 2023 | 12:19 PM

ತಮ್ಮ ಪತ್ನಿ ಭವಾನಿ ರೇವಣ್ಣಗೆ  ಟಿಕೆಟ್ ಪಡೆಯಲು ಹೊಳೆನರಸೀಪುರ ಶಾಸಕ ಶತಾಯ ಗತಾಯ ಪ್ರಯತ್ನದಲ್ಲಿದ್ದಾರೆ.

Karnataka Assembly Polls; ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಅಂತ ಹೆಚ್ ಡಿ ದೇವೇಗೌಡರ ನಿರ್ಣಯ ಅಂತಿಮ: ಹೆಚ್ ಡಿ ರೇವಣ್ಣ
ಹೆಚ್ ಡಿ ರೇವಣ್ಣ

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಅನ್ನೋದು ಇವತ್ತಿಗೂ ಯಕ್ಷಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಹೊಳೆನರಸೀಪುರದಲ್ಲಿ ತಮ್ಮ ಹಿರಿಯ ಪುತ್ರ ಸೂರಜ್ ರೇವಣ್ಣ ಜೊತೆ ಇಂದು ಪ್ರಚಾರ ಕಾರ್ಯ ಆರಂಭಿಸಿದ ಹೆಚ್ ಡಿ ರೇವಣ್ಣ (HD Revanna) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಟಿಕೆಟ್ ಯಾರಿಗೆ ಅಂತ ಸ್ಪಷ್ಟನೆ ನೀಡಲಿಲ್ಲ. ಟಿಕೆಟ್ ಕುರಿತು ಹೆಚ್ ಡಿ ದೇವೇಗೌಡ (HD Devegowda) ಹಾಗೂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜೊತೆ ಚರ್ಚಿಸಿದ್ದು, ದೇವೇಗೌಡರ ನಿರ್ಣಯವೇ ಅಂತಿಮ ಎಂದು ರೇವಣ್ಣ ಹೇಳಿದರು. ತಮ್ಮ ಪತ್ನಿ ಭವಾನಿ ರೇವಣ್ಣಗೆ  ಟಿಕೆಟ್ ಪಡೆಯಲು ಹೊಳೆನರಸೀಪುರ ಶಾಸಕ ಶತಾಯ ಗತಾಯ ಪ್ರಯತ್ನದಲ್ಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on