ಬೆಂಗಳೂರು: ಜೆಡಿಎಸ್ ಧುರೀಣ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಸಾರ್ವಜನಿಕವಾಗಿ ಕಣ್ಣೀರು ಹಾಕುವುದು ಹೊಸದೇನಲ್ಲ. ಅವರೊಬ್ಬ ಭಾವುಕ ಜೀವಿ ಅಂತ ಆಪ್ತವಲಯದವರು ಹೇಳುತ್ತಾರೆ. ಮೊದಲೆಲ್ಲ ಭಾಷಣ (speech) ಮಾಡುವಾಗ ಕಣ್ಣೀರು ಹಾಕುತ್ತಿದ್ದ ಕುಮಾರಸ್ವಾಮಿಯವರು ಈಗ ಬೇರೆ ಸಮಯದಲ್ಲೂ ಅಳಲಾರಂಭಿಸಿದ್ದಾರೆ. ಇವತ್ತಿನ ಘಟನೆಯನ್ನ ನೋಡಿ. ಬೆಂಗಳೂರಲ್ಲಿ ಅವರು ಪಂಚರತ್ನ ಯಾತ್ರೆ (Pancharatna Yatre) ನಡೆಸುತ್ತಿದ್ದಾಗ, ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೃಹತ್ ಗಾತ್ರದ ಹಾರ ತಂದು ಅವರಿಗೆ ಹಾಕುತ್ತಾರೆ. ಹಾರದ ಭಾರವೇನೂ ಜಾಸ್ತಿ ಇರಲಾರದು, ಆದರೆ ಅತ್ತಿದ್ದೇಕೆ ಅಂತ ಅಲ್ಲಿ ಯಾತ್ರೆಯಲ್ಲಿ ಭಾಗಿಯಾಗಿದ್ದ ಜನಕ್ಕೆ ಅರ್ಥವಾಗಲಿಲ್ಲ. ಪ್ರಾಯಶ: ಅಭಿಮಾನಿಗಳ ಪ್ರೀತಿ ಕಂಡು ಅವರ ಕಣ್ತುಂಬಿ ಬಂದಿರಬೇಕು. ಅವರು ಪದೇಪದೆ ಅಂಗವಸ್ತ್ರದಿಂದ ಮುಖ ಒರೆಸಿಸಕೊಳ್ಳುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ