Spar over Pendrive: ಹೆಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಕೆಜೆ ಜಾರ್ಜ್ ನಡುವೆ ಸದನದಲ್ಲಿ ಜೋರು ಮಾತಿನ ಕಾಳಗ!

Updated on: Jul 06, 2023 | 4:16 PM

ಸಭಾಧ್ಯಕ್ಷ ಯುಟಿ ಖಾದರ್ ಇಬ್ಬರಿಗೂ ಶಾಂತರಾಗುವಂತೆ ಹೇಳಿದರೂ ಹಿರಿಯ ನಾಯಕರಬ್ಬರೂ ಸುಮ್ಮನಾಗಲ್ಲ.

ಬೆಂಗಳೂರು: ಇಂಧನ ಸಚಿವ ಕೆಜೆ ಜಾರ್ಜ್ (KJ George) ಮತ್ತು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ಸದನದಲ್ಲಿ ಇಂದು ನೇರಾನೇರ ಮಾತಿನ ಕಾಳಗ ನಡೆಯಿತು. ಕುಮಾರಸ್ವಾಮಿ ನಿನ್ನೆಯಿಂದ ಇಂಧನ ಇಲಾಖೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ, ಒಂದೊಂದು ಪೋಸ್ಟಿಂಗ್ ಗೆ ರೂ. 10 ಕೋಟಿಯ ಹಾಗೆ ಎರಡು ಪೋಸ್ಟಿಂಗ್ ನಡೆದಿವೆ ಎಂದು ಆರೋಪಿಸಿ ಒಂದು ಪೆನ್ ಡ್ರೈವ್ ತೋರಿಸಿ ಪುರಾವೆ ಅದರಲ್ಲಿದೆ ಎಂದಿದ್ದರು. ಇಂದು ಸದನದಲ್ಲಿ ಪುನಃ ಅದರ ಪ್ರಸ್ತಾಪ ಮಾಡಿದಾಗ ಸಚಿವ ಜಾರ್ಜ್ ಅರೋಪವನ್ನು ಸಾಬೀತು ಮಾಡುವಂತೆ ಪೆನ್ ಡ್ರೈವ್ ನಲ್ಲಿ ಏನಿದೆ ತೋರಿಸುವಂತೆ ಸವಾಲು ಹಾಕಿದರು. ಕುಮಾರಸ್ವಾಮಿ ಈಗ್ಯಾಕೆ ತೋರಿಸಲಿ, ಸಮಯ ಬಂದಾಗ ತೋರಿಸುತ್ತೇನೆ ಅನ್ನುತ್ತಾರೆ. ಅದಕ್ಕೆ ಜಾರ್ಜ್ ನಿಮ್ಮ ಹಣೆಬರಹ ಗೊತ್ತು ಬಿಡ್ರೀ ಅಂತ ಮೂದಲಿಸಿದಾಗ ಕುಮಾರಸ್ವಾಮಿ ನಿಮ್ಮ ಹಣೆಬರಹ ನಂಗೊತ್ತಿಲ್ವಾ ಅನ್ನುತ್ತಾರೆ. ಅವರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಸಭಾಧ್ಯಕ್ಷ ಯುಟಿ ಖಾದರ್ ಇಬ್ಬರಿಗೂ ಶಾಂತರಾಗುವಂತೆ ಹೇಳಿದರೂ ಹಿರಿಯ ನಾಯಕರು ಸುಮ್ಮನಾಗಲ್ಲ. ಮತ್ತೊಬ್ಬ ಸಚಿವ ಎಂಬಿ ಪಾಟೀಲ್ (MB Patil) ಜಾರ್ಜ್ ನೆರವಿಗೆ ಧಾವಿಸಿ ಕುಮಾರಸ್ವಾಮಿ ಮೇಲೆ ದಾಳಿ ನಡೆಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More